spot_img
spot_img

ಕವನ

Must Read

- Advertisement -

ನಾವು ನಮ್ಮವರು

ಬಾಳ ದಾರಿ ಸಾಗುತಿದೆ ದಿನನಿತ್ಯ ತಪ್ಪದೆ
ಪಯಣದ ಅಂತ್ಯವೂ ಇನ್ನೂ ಕಾಣದಾಗಿದೆ
ಕಷ್ಟ ಸುಖಗಳ ಮನವು ಅನುಭವಿಸಿದೆ
ಕಾರಣ ಸಿಗದೆ ಪಯಣ ಮತ್ತೆ ನಿಂತಿದೆ

ಬದುಕಿನ ಪಯಣದಲ್ಲಿ ಸಿಕ್ಕರು ಹಲವರು
ನೋವು ನಲಿವನು ಕೆಲವರು ಹಂಚಿಕೊಂಡರು
ನಂಬಿದವರು ಮನಕೆ ಖುಷಿಯ ಕೊಟ್ಟರು
ಮಿಕ್ಕವರು ಬೆನ್ನಿಗೆ ಚೂರಿ ಹಾಕಿದರು

- Advertisement -

ಪ್ರೀತಿ ಪ್ರೇಮದ ಅರ್ಥವೇ ಗೊತ್ತಿಲ್ಲದವರು
ಬದುಕನ್ನೇ ಹಾಳು ಮಾಡಿ ಬೆಂಕಿ ಇಟ್ಟವರು
ಇವುಗಳ ಮಧ್ಯೆ ಬದುಕನ್ನೇ ಮೆಟ್ಟಿ ನಿಂತರು
ಅವರೇ ಸಮಾಜಕ್ಕಾಗಿ ಬದುಕಿದ ಸಾಧಕರು

ಬದುಕು ಒಂದು ನಿಲ್ಲದ ಜಂಜಾಟವು
ಬದುಕಿನಲ್ಲಿ ಬೇಕು ಪ್ರೀತಿ ಸೌಜನ್ಯವು
ನಿಲ್ಲಲಿ ನಾನು ನನ್ನದೆಂಬ ಅಹಂಕಾರವು
ಬೆಳೆಸಿಕೊಳ್ಳಿ ನಾವು ನಮ್ಮವರೆಂಬ ಭಾವನೆಯ

ಪ್ರತಿಯೊಬ್ಬರ ಮೇಲೆ ನಂಬಿಕೆ ಇಡಬೇಡಿರಿ
ಹಾಗಂತ ಎಲ್ಲರೂ ಕೆಟ್ಟವರಲ್ಲ ಅರಿಯಿರಿ
ಒಳ್ಳೆಯವರಿಗೂ ಕೆಟ್ಟವರಿಗೂ ಒಳ್ಳೆಯವರಾಗಿ ಬದುಕಿರಿ
ಮನುಷ್ಯನನ್ನು ಮನುಷ್ಯನಂತೆ ಅನುದಿನ ನಂಬಿರಿ

- Advertisement -

ಮುತ್ತು ಯ ವಡ್ಡರ
ಶಿಕ್ಷಕರು
ಬಾಗಲಕೋಟ
9845568484

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ತಲೆಬಾಗು ಗುರುಗಳಿಗೆ ಗಣ್ಯರಿಗೆ ಮಾನ್ಯರಿಗೆ ಶಿರಬಾಗು ಹಿರಿಯರಿಗೆ ಹೆತ್ತವರಿಗೆ ಶರಣಾಗು ಸಂಪೂರ್ಣ ಮದವಳಿದು ದೈವಕ್ಕೆ ಬಾಗಿದವ ಬಾಳುವನು - ಎಮ್ಮೆತಮ್ಮ ಶಬ್ಧಾರ್ಥ ಗಣ್ಯರು = ಗಣನೀಯವಾದವರು ಮಾನ್ಯರು = ಮನ್ನಣೆಗೆ ಪಾತ್ರರಾದವರು ತಾತ್ಪರ್ಯ ಗುರುಗಳಲ್ಲಿ‌ ಗಣ್ಯರಲ್ಲಿ‌ ಮಾನ್ಯರಲ್ಲಿ‌‌...
- Advertisement -

More Articles Like This

- Advertisement -
close
error: Content is protected !!
Join WhatsApp Group