ಕವನ ; ಕೆನೆಯಾದ ಭಾವ

Must Read

ಕೆನೆಯಾದ ಭಾವ

ಹಾಲು ಹೃದಯದ ತುಂಬ
ಹರಿದ ನಿನ್ನ ಪ್ರೀತಿಯ
ಸ್ನೇಹ ಪರಿಮಳ ಭಾವವು…
ಸವಿ ಸಕ್ಕರೆಯಾಗಿ ಮನ
ಅಕ್ಕರೆಯಲಿ ಕರಗಿ
ಒಂದಾಗಿ ಮಧುರ ಜೀವವು…

ಎದೆ ಕಡಲಲಿ ಹೊಮ್ಮಿ
ಹಾಡುವ ನೀನು ಬರೆದ
ನೂರು ಕವನದಲೆಗಳು..
ಮೌನವಾಗಿ ಮಾತು ಮರೆತು
ಹೆಪ್ಪುಗಟ್ಟಿವೆ ಉಪ್ಪು ನೀರ
ನೋವ ಒಡಲಲಿ ಒಲವದು…

ಸಾವಿರ ಮಾತಿನ ಬಾಣ
ತೂರಿ ಹೃದಯ ಗಾಯ
ಕುದಿವ ಕಡಲ ಆಗರ…
ಮುಚ್ಚಿದೆದೆಯ ಕದವ
ತೆರೆಯದ ಕಲ್ಲು ಹೃದಯ
ನಡುಗಿತು ಭಾವ ಸಾಗರ.

ಬಿತ್ತಿದ ಭಾವ ಬೀಜ
ಮೊಳೆತು ಚಿಗುರು ಪರಿಮಳ..
ಕುದಿದು ಮರಳಿ ಹೊರಳಿ
ಶಶಿಕಿರಣ ಬೆಳಕ ಬೆರಗು
ಪದರ ಸವಿಯ ಕವಿ ಜೀವ
ಕೆನೆಗಟ್ಟಿದ ಭಾವ ಸೆರಗು….

ಇಂದಿರಾ ಮೋಟೆಬೆನ್ನೂರ. ಬೆಳಗಾವಿ

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...

More Articles Like This

error: Content is protected !!
Join WhatsApp Group