ಕವನ ; ಕೆನೆಯಾದ ಭಾವ

Must Read

ಕೆನೆಯಾದ ಭಾವ

ಹಾಲು ಹೃದಯದ ತುಂಬ
ಹರಿದ ನಿನ್ನ ಪ್ರೀತಿಯ
ಸ್ನೇಹ ಪರಿಮಳ ಭಾವವು…
ಸವಿ ಸಕ್ಕರೆಯಾಗಿ ಮನ
ಅಕ್ಕರೆಯಲಿ ಕರಗಿ
ಒಂದಾಗಿ ಮಧುರ ಜೀವವು…

ಎದೆ ಕಡಲಲಿ ಹೊಮ್ಮಿ
ಹಾಡುವ ನೀನು ಬರೆದ
ನೂರು ಕವನದಲೆಗಳು..
ಮೌನವಾಗಿ ಮಾತು ಮರೆತು
ಹೆಪ್ಪುಗಟ್ಟಿವೆ ಉಪ್ಪು ನೀರ
ನೋವ ಒಡಲಲಿ ಒಲವದು…

ಸಾವಿರ ಮಾತಿನ ಬಾಣ
ತೂರಿ ಹೃದಯ ಗಾಯ
ಕುದಿವ ಕಡಲ ಆಗರ…
ಮುಚ್ಚಿದೆದೆಯ ಕದವ
ತೆರೆಯದ ಕಲ್ಲು ಹೃದಯ
ನಡುಗಿತು ಭಾವ ಸಾಗರ.

ಬಿತ್ತಿದ ಭಾವ ಬೀಜ
ಮೊಳೆತು ಚಿಗುರು ಪರಿಮಳ..
ಕುದಿದು ಮರಳಿ ಹೊರಳಿ
ಶಶಿಕಿರಣ ಬೆಳಕ ಬೆರಗು
ಪದರ ಸವಿಯ ಕವಿ ಜೀವ
ಕೆನೆಗಟ್ಟಿದ ಭಾವ ಸೆರಗು….

ಇಂದಿರಾ ಮೋಟೆಬೆನ್ನೂರ. ಬೆಳಗಾವಿ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group