ಬಸವ ಮಾಮರ
ಬಸವ ನೆಂಬ ಮಾಮರ
ಹಸಿರು ಗಿಳಿ ಕೋಗಿಲೆಗಳಿಗೆ
ತವರೂರು
ನಿತ್ಯ ವಸಂತ ಮಾಮರದಲಿ
ಕುಹೂ ಕುಹೂ
ಚೈತ್ರ ಮಾಸದ ಚಿಗುರು
ಹೂ ಹಣ್ಣು ತಂಬೆಳಲ
ಹಣ್ಣುಕಾಯಿ
ಮಿಡಿ ಹೂ
ಜೋತು ಬಿದ್ದ
ಹದ್ದು ಕಾಗೆಗಳಿಗೂ
ಹೂ ಹಣ್ಣು
ತಿಂದು ತೇಗುವ
ಅಪ್ಪನ ಮಡಿಲು
ಭುವಿ ಸ್ವರ್ಗ
ಸ್ವಾರ್ಥ ವಿಲ್ಲದ
ನಿಷ್ಕಲ್ಮಶ ಭಾವ
ಮೃದು ಧೋರಣೆಯ
ಹರಿಕಾರ ಜಂಗಮ
ಕಾಯದೊಳಗೆ ಕಾಯಕ
ಎಕ ದೇವೋಪಾಸಕ
ಅಂಗವೇ ಲಿಂಗವೆಂದ
ಗುರು ಬಸವೇಶ್ವರ
ಶರಣೆಂದು ಕುಲಕ್ಕೆ
ಶರಣು ಶರಣಾರ್ಥಿ ಹೇಳಿದ
ಹರಳಯ್ಯ ಮಧುವರಸರ
ಮುದ್ದು ಮಕ್ಕಳ ಮದುವೆ
ಚೈತ್ರ ಮಾಸ ದ ಕೋಗಿಲೆ
ಕುಕ್ಕಿ ಕೆಡವಿದವು
ರಣ ಹದ್ದು ಕಾಗೆ ಗೂಬೆಗಳು
ಹೌ ಹಾರಿದ ಶರಣ ಸಂಕುಲ
ತೊರೆದು ಬಿಟ್ಟವು ಗೂಡು
ದಿಕ್ಕಿಗೊಂದು ಶರಣ
ಮುರಗೋಡ ಗೊಡಚಿ ತಿಗಡಿ
ಐಕ್ಯರಾದರು ಶರಣರು
ಉರುಳಿ ಬಿದ್ದಿತು
ಭುವಿಯ ಸ್ವರ್ಗದಲಿ
ಬಸವ ಮಾಮರ
———
ಡಾ.ಸಾವಿತ್ರಿ ಕಮಲಾಪೂರ