ಕವನ: ತುಂತುರು ಮಳೆ

Must Read

 

ತುಂತುರು ಮಳೆ

ವರುಣನಾಗಮನದಿ ಭುವಿಗೆ ಕಳೆ

ಬಾಣಂಚಿನ ಮಡಿಲಿನಿಂದ  ಜಾರಿ 

ಭೂಮಾತೆಯ ಒಡಲ ಸೇರಿ 

ತಂಪೆರಗಿತು ಸುತ್ತಲೂ ಹರಡಿ

ಮೈ ಜಾಡಿಸುವ ಗುಬ್ಬಚ್ಚಿಗಳು

ಗರಿಗೆದರುವ ಸುಂದರ ನವಿಲುಗಳು 

ಎಲೆಗಳಿಂದ ಜಾರುವ ನೀರ ಬಿಂದುಗಳು 

ಆ ಬಿಂದುಗಳ ಹೊತ್ತು ನಿಂತ ಸುಮಗಳು

ತಂಪಾದ ಗಾಳಿಯ ಇಂಪಿನ ಒಡನಾಟ 

ಗಾಳಿಯಲ್ಲಿ ತುಂತುರು ಹನಿಗಳ ಚೆಲ್ಲಾಟ 

ರೋಮಾಂಚನಗೊಳಿಸುವ ವಾತಾವರಣ 

ಮುಂಗಾರಿನ ಮಳೆಯ ಈ ಸಂಚಲನ

ಸದ್ದು ಗದ್ದಲಗಳಿಗೆ ಕೊಂಚ ವಿರಾಮ 

ಸಂಚಾರ ವಿಹಾರಕ್ಕೆ ಹಾಕುವ ಕಡಿವಾಣ

ತುಂತುರು ಮಳೆಯ ಆಸ್ವಾದಿಸೋಣ

ಮಳೆ ನಿಂತು ಹೋದ ಮೇಲೆ ಮತ್ತದೇ ಪಯಣ



ಶ್ರೀಮತಿ ಜ್ಯೋತಿ ಕೋಟಗಿ ಬೈಲಹೊಂಗಲ ಬಿ ಆರ್ ಪಿ ಚ. ಕಿತ್ತೂರು

- Advertisement -
- Advertisement -

Latest News

ಮೂಡಲಗಿಯಲ್ಲಿ ಶಾಸಕರ ನೇತೃತ್ವದಲ್ಲಿ ತಿರಂಗಾ ಯಾತ್ರೆ

ಮೂಡಲಗಿ:- ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಹಿನ್ನೆಲೆ ಮೇ,೨೦ ರಂದು ಮಂಗಳವಾರ,ಸಂಜೆ ೪ ಗಂಟೆಗೆ ಮೂಡಲಗಿ ಪಟ್ಟಣದಲ್ಲಿ  ಶಾಸಕರಾದ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ತಿರಂಗಾ ಯಾತ್ರೆ...
- Advertisement -

More Articles Like This

- Advertisement -
close
error: Content is protected !!
Join WhatsApp Group