spot_img
spot_img

ಕವನ: ಶಿಕ್ಷಕರ ದಿನಾಚರಣೆ

Must Read

- Advertisement -

ಗುರುವೀಗ ಸುಗಮಕಾರ,
ಮರೆಯದಿರಿ ಎಂದಿಗೂ ಗುರುವಿನಿಂದಲೇ ಸಾಕ್ಷಾತ್ಕಾರ
ಗುರು ಎಂಬ ಎರಡಕ್ಷರದ ಜಾದೂಗಾರ
ಎಲ್ಲರ ಭವಿಷ್ಯಕ್ಕೆ ರೂಪು ಕೊಡುವ ಕಲಾಕಾರ||

ಶತಮಾನ ಯಾವುದಾದರೇನು?
ತಂತ್ರಜ್ಞಾನ ಎಷ್ಟು ಮುಂದುವರೆದರೇನು?
ಗುರು ಸ್ಥಾನದ ಬೆಲೆ ಕಟ್ಟಲಾದೀತೇ?
ಗುರು ಪಾವಿತ್ರ್ಯ ಸುಳ್ಳಾದೀತೆ?

ಇದು ಒಂದು ದಿನದ ಆಚರಣೆಯಲ್ಲ
ನಮ್ಮ ಪ್ರತಿದಿನದ,ಪ್ರತಿಕ್ಷಣದ  ಅನುಕರಣೆ
ಪ್ರತೀ ಹೃದಯದ ಬಡಿತದ ಮಿಡಿತ
ಓ!ಗುರುವೇ ನೀನಿರದ ಬಾಳು ಅನಿಶ್ಚಿತ||

- Advertisement -

ತಂದೆ- ತಾಯಿ ,ಬಂಧು-ಬಳಗದ ಪರಿಛಾಯೆ ನೀನು
ಎಲ್ಲ ಸಂಬಂಧಗಳಿಗೂ ಮೀರಿದ  ಬಂಧನವು ನೀನು
ನಿನ್ನ ನೆನೆಯುವ  ಪ್ರತೀ ಗಳಿಗೆಯೂ ಪಾವನ
ನಿನ್ನ ಸನ್ನಿಧಾನವೇ ಸುಕ್ಷೇತ್ರದ ಪುಣ್ಯ ತಾಣ||

ಗುರುನಮನ ಸಲ್ಲಿಸುವ  ಸದವಕಾಶವಿಂದು
ದೊರಕಿಸಿದ ಮಹಾಮಹಿಮನ ಜನುಮದಿನವಿಂದು
ಬನ್ನಿ ನಾವೆಲ್ಲ ಸ್ಮರಿಸೋಣ ಆ ಮಹಾತ್ಮನ
ಗುರುಸ್ಥಾನಕೆ  ಬೆಲೆ ತಂದುಕೊಟ್ಟ ರಾಧಾಕೃಷ್ಣನ್ ನ||


ಶ್ರೀಮತಿ.ಗುರುದೇವಿ.ಮಲಕಣ್ಣವರ.
ಸಿ ಆರ್ ಪಿ.ತಲ್ಲೂರ.

- Advertisement -
- Advertisement -

Latest News

ಹಿರಿಯ ಪ್ರಶಸ್ತಿಗೆ ಬಾಜನರಾದ ಪತ್ರಕರ್ತ ಮಲ್ಲಿಕಾರ್ಜುನ ದರಗಾದ

ಹುನಗುಂದದ ಪತ್ರಕರ್ತ ಮಲ್ಲಿಕಾರ್ಜುನ ದರಗಾದ ಅವರು ಪತ್ರಿಕಾ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಲವಾರು ಕಠಿಣ ಪ್ರಸಂಗಗಳನ್ನು ಎದುರಿಸಿ ಅವುಗಳ ಆಳದಲ್ಲಿ ಗಟ್ಟಿಗೊಂಡವರು. ಇದೇ ದಿ.೨೮-೦೭-೨೦೨೪ ರಂದು...
- Advertisement -

More Articles Like This

- Advertisement -
close
error: Content is protected !!
Join WhatsApp Group