ಸವದತ್ತಿ: ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕ ಸವದತ್ತಿ ಇವರು ತಮ್ಮ ವಿವಿಧ ಬೇಡಿಕೆಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈಡೇರಿಸಬೇಕೆಂದು ಆಗ್ರಹಿಸಿ ತಹಶಿಲ್ದಾರ ಪ್ರಶಾಂತ ಬಿ ಪಾಟೀಲ ರವರ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿಸಲ್ಲಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ತಾಲೂಕಾ ಅಧ್ಯಕ್ಷ ಹಾಗೂ ನ್ಯಾಯವಾದಿ ಜೆ ವಿ ಅಗಡಿ ‘2019 ರಲ್ಲಿ ಉತ್ತರ ಕರ್ನಾಟಕದಲ್ಲಿ ಅತಿಯಾದ ಮಳೆಯಿಂದಾಗಿ ಪ್ರವಾಹ ಉಂಟಾಗಿ ಮನೆ ಮತ್ತು ಜಾನುವಾರಗಳನ್ನು ಬೆಳೆಗಳನ್ನು ರೈತರು ಕಳೆದುಕೊಂಡಿದ್ದಾರೆ. ಅವರಿಗೆ ಇನ್ನೂ ಪರಿಹಾರ ಸರಿಯಾಗಿ ಸಿಕ್ಕಿಲ್ಲ. ಸದ್ಯ ಯೂರಿಯಾ ರಸ ಗೊಬ್ಬರವನ್ನು ಸ್ಥಳೀಯ ವರ್ತಕರು ಮನ ಬಂದಂತೆ ಮಾರಾಟ ಮಾಡುತ್ತಿದ್ದಾರೆ.ಮುಂದಿನ ಚಳಿಗಾಲದ ಅಧಿವೇಶನವನ್ನು ಬೇಳಗಾವಿಯಲ್ಲೇ ಮಾಡಬೇಕು ಸವದತ್ತಿಯಲ್ಲಿ ಆರ್ ಟಿ ಓ ಕಛೇರಿ ಪ್ರಾದೇಶಿಕ ಸಾರಿಗೆ ಆಯುಕ್ತರ ಕಛೇರಿಯನ್ನು ತೆರೆದು ಸಾರ್ವಜನಿಕರಿಗೆ ಅನುಕೂಲತೆ ಮಾಡಿ ಕೊಡಬೇಕು’ ಎಂದು ಆಗ್ರಹಿಸಿದರು. .
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳಾದ.ಸುರೇಶ ಸಂಪಗಾವಿ. ರಮೇಶ ಗುಮ್ಮಗೊಳ. ಬಸವರಾಜ ಈ ಪೂಜೇರ. ಮುಸ್ತಾಕ ಅಗಸಿಮನಿ.ಸುರೇಶ ಕುರಿ. ಮಂಜುನಾಥ ಅಂಗಡಿ. ಅಡಿವೇಪ್ಪ ಹಳ್ಳದ. ಕಲ್ಲಪ್ಪ ಗಾಣಿಗೇರ.ಅಜ್ಜಪ್ಪ ಹಳ್ಳದ. ಎಮ್ ಎಸ್ ಕರಿಗೌಡರ.ಶೇಖರ ಕರಡಿ. ಉಪಸ್ಥಿತರಿದ್ದರು.