Homeಸುದ್ದಿಗಳುಶಿಕ್ಷಕ ವೃತ್ತಿಯಲ್ಲಿ ಸೇವಾ ಮನೋಭಾವ ಅತೀ ಮುಖ್ಯ- ಪಿಇಓ ಶಿಂಧೆ

ಶಿಕ್ಷಕ ವೃತ್ತಿಯಲ್ಲಿ ಸೇವಾ ಮನೋಭಾವ ಅತೀ ಮುಖ್ಯ- ಪಿಇಓ ಶಿಂಧೆ

ಸವದತ್ತಿ– “ಶಿಕ್ಷಕರಾದ ನಾವೇಲ್ಲರೂ ಅತ್ಯಂತ ಪವಿತ್ರವಾದ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಈ ಶಿಕ್ಷಕ ವೃತ್ತಿಯಲ್ಲಿ ಸೇವಾ ಮನೋಭಾವ ಅತೀ ಮುಖ್ಯ. ಇಂತಹ ಸೇವಾ ಮನೋಭಾವನೆಯುಳ್ಳ ಹಲವಾರು ಚಟುವಟಿಕೆಗಳು ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಇವೆ” ಎಂದು ತಾಲೂಕಾ ದೈಹಿಕ ಪರೀವಿಕ್ಷಣಾ ಅಧಿಕಾರಿ ವಾಯ್.ಎಮ್.ಶಿಂಧೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ನಗರದ ಬಿ.ಬಿ.ಮಮದಾಪೂರ ಪ್ರೌಢಶಾಲೆ ಸವದತ್ತಿಯಲ್ಲಿ ನಡೆದ ಸ್ಕೌಟ್ಸ್ ಮತ್ತ ಗೈಡ್ಸ್ ನ ಬೇಸಿಗೆ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಂತರ ಮಾತನಾಡಿದ ಶಿಕ್ಷಕ ಸಂಘದ ಅಧ್ಯಕ್ಷ ಎಚ್.ಆರ್.ಪೆಟ್ಲೂರ ನಾವು ಪ್ರಾಥಮಿಕ ಶಿಕ್ಷಣ ಕಲಿಯುತ್ತಿದ್ದಾಗ ಸ್ಕೌಟ್ಸ್ ಮತ್ತು ಗೈಡ್ಸ್ ಸೇವೆ ಮಾಡಿರುವುದನ್ನು ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಂಯೋಜಕರಾದ ಎಸ್.ಬಿ.ವಿಠಲ ಮಾತನಾಡಿ ಬೇಸಿಗೆ ಶಿಬಿರದ ರೂಪರೇಷೆ, ಕಾಲಾವಧಿ ಹಾಗೂ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಶಿಬಿರದ ಪೂರ್ವಭಾವಿ ಸಭೆಯಲ್ಲಿ ತಾಲೂಕಿನ 80 ಕ್ಕಿಂತ ಹೆಚ್ಚಿನ ಶಿಕ್ಷಕರು ಭಾಗವಹಿಸಿದ್ದರು. ತಾಲೂಕಾ ನೋಡಲ್ ಶಿಕ್ಷಕ ಎನ್.ಎನ್.ಕಬ್ಬೂರ ಸ್ವಾಗತಿಸಿದರು

ಬಿ.ಆಯ್.ಭಾವಾಖಾನ ನಿರೂಪಿಸಿದರು, ಎಚ್.ಕೆ.ಯತ್ನಟ್ಟಿ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group