spot_img
spot_img

ಶರಣರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು

Must Read

- Advertisement -

ಸಿಂದಗಿ: ಹನ್ನೆರಡನೆಯ ಶತಮಾನದಲ್ಲಿಯೇ ಸಮಾಜದ ಏಳ್ಗೆಗಾಗಿ ಸಮಾನತೆಯನ್ನು ಬಯಸಿದ ಶಿವ ಶರಣರ  ಜೀವನ ಚರಿತ್ರೆ ಬಹಳ ಅರ್ಥಪೂರ್ಣವಾಗಿದೆ ಅವರ ವಚನಗಳು ಸತತ ಓದುವ ಮೂಲಕ ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಹಾಗೂ ಕುಟುಂಬದಲ್ಲಿ ಆದರ್ಶ ವ್ಯಕ್ತಿಯಾಗಿ ಬಾಳಬೇಕು ಎಂದು  ಹಿರಿಯವೈದ್ಯ ಜಾನಪದ ಸಾಹಿತಿ ಡಾ. ರಾಮಲಿಂಗಪ್ಪ ಅಗಸರ  ಹೇಳಿದರು.

ತಾಲೂಕಿನ ಬಂದಾಳ ಗ್ರಾಮದ ಹುಡೇದ ಲಕ್ಷ್ಮೀ ದೇವಿ ಜಾತ್ರಾ ನಿಮಿತ್ತ ಹಮ್ಮಿಕೊಂಡ ಸಜ್ಜಲ ಗುಡ್ಡದ ಶರಣಮ್ಮನವರ ಪುರಾಣ ಪ್ರವಚನದಲ್ಲಿ ಅವರು ಮಾತನಾಡಿ, ತಾಲೂಕಿನ ಬಂದಾಳ ಗ್ರಾಮದ ಹುಡೇದ ಲಕ್ಷ್ಮೀ ದೇವಿ ಜಾತ್ರಾ ನಿಮಿತ್ತ ಹಮ್ಮಿಕೊಂಡ ಸಜ್ಜಲ ಗುಡ್ಡದ ಶರಣಮ್ಮನವರ ಪುರಾಣ ಪ್ರವಚನದಲ್ಲಿ ಅವರು ಮಾತನಾಡಿ  ಸಜ್ಜಲಗುಡ್ಡದ ಶರಣಮ್ಮ ತಾಯಿಯವರು ಭಕ್ತರ ಬಾಳಿಗೆ ಜ್ಯೋತಿಯಾಗಿ, ಶಿವಯೋಗಿಗಳ ಅಂತರಂಗದ  ತಾಯಿಯಾಗಿದ್ದಾರೆ. ಅವರ ನಡೆ  ನುಡಿಗಳನ್ನು ಜೀವನದಲ್ಲಿ ರೂಢಿಸಿಕೊಂಡು  ಶರಣರ ಆಚಾರ ವಿಚಾರಗಳು  ಜೀವನದಲ್ಲಿ ಅಳವಡಿಸಿಕೊಂಡು ಸುಂದರ ಜೀವನ ನಮ್ಮದಾಗುತ್ತದೆ ಎಂದರು.

ಗದಗದ ಶಲವಡಿ ಗ್ರಾಮದ ಪುರಾಣ ಪ್ರವಚನಕಾರರಾದ ವೀರಯ್ಯ ಶಾಸ್ತ್ರೀಗಳು ಮಾತನಾಡಿ, ಶರಣರ ವಿಚಾರಧಾರೆಗಳು ಹಾಗೂ ಅವರ ತತ್ವ ಆದರ್ಶಗಳು ಜೀವನದಲ್ಲಿ ರೂಡಿಸಿಕೊಂಡು ಉತ್ತಮ ಸನ್ಮಾರ್ಗದಲ್ಲಿ ನಡೆಯಬೇಕು. ಸಜ್ಜಲಗುಡ್ಡದ ಶರಣಮ್ಮ ತಾಯಿಯವರು ಭಕ್ತರ ಬಾಳಿಗೆ ಜ್ಯೋತಿಯಾಗಿ, ಶಿವಯೋಗಿಗಳ ಅಂತರಂಗದ ತಾಯಿಯಾಗಿದ್ದಾರೆ. ಅವರ ನಡೆ  ನುಡಿಗಳು   ಜೀವನದಲ್ಲಿ ರೂಢಿಸಿಕೊಂಡು ಶರಣರ ಆಚಾರ ವಿಚಾರಗಳು ಜೀವನದಲ್ಲಿ ಅಳವಡಿಸಿಕೊಂಡರೆ ಸುಂದರ ಜೀವನ ನಮ್ಮದಾಗುತ್ತದೆ. ಕಾಯಕದಲ್ಲಿ ನಿರಂತರವಾಗಬೇಕು ದುಡಿಯುವ ಪದ್ದತಿ ಜೀವನದಲ್ಲಿ ಅಳವಡಿಸಿ ಕೊಂಡು ಶರಣರ ಸಂತರ ಹಾಗೆ ಜೀವನ ನಡೆಸಬೇಕು. ದುಶ್ಚಟಗಳು ಬಿಟ್ಟು ಕುಟುಂಬದಲ್ಲಿ ಸಾತ್ವಿಕ ಜೀವನ ನಡೆಸಬೇಕು.ಗುರುವಿನ ಮೇಲೆ ಅಪಾರ ಪ್ರೀತಿ ಇರಬೇಕು. ಗುರು ತೋರಿರುವ ಉತ್ತಮ ಸನ್ಮಾರ್ಗದಲ್ಲಿ ನಡೆಯಬೇಕು ಎಂದರು. 

- Advertisement -

ವೇದಿಕೆ ಮೇಲೆ ದೇವಾಲಯದ ಅರ್ಚಕ  ಕುಮಾರ ನಂದಯ್ಯ ಹಿರೇಮಠ ಸೇರಿದಂತೆ ಗ್ರಾಮದ ಸರ್ವ ಭಕ್ತರು ಉಪಸ್ಥಿತರಿದ್ದರು. ಅಂಬ್ರೇಶ ನಗನೂರ ಹಾಗೂ ಯಮನೂರಪ್ಪ ಪೂಜಾರಿ ದೇವರಮನಿ ಸಂಗೀತ ಕಾರ್ಯಕ್ರಮ ನೆರವೇರಿಸಿದರು.

      

 

- Advertisement -
- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -

More Articles Like This

- Advertisement -
close
error: Content is protected !!
Join WhatsApp Group