ಸವದತ್ತಿ: ಮಕ್ಕಳ ಕಲಿಕಾ ಕೊರತೆ ತುಂಬಲು ರಾಜ್ಯ ಸರ್ಕಾರ ವಿಶಿಷ್ಟವಾದ ಕಲಿಕಾ ಚೇತರಿಕೆ ಕಾರ್ಯಕ್ರಮ ಜಾರಿಗೊಳಿಸಿದೆ.ಈ ಕಾರ್ಯಕ್ರಮದ ಯಶಸ್ಸಿಗೆ ತರಬೇತಿಯಲ್ಲಿ ಪಾಲ್ಗೊಂಡ ಎಲ್ಲ ಶಿಕ್ಷಕರು ಶ್ರಮಿಸಬೇಕು ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವ್ಹಿ.ಸಿ.ಹಿರೇಮಠ ಕರೆ ನೀಡಿದರು.
ಅವರು ಸವದತ್ತಿ ಬಿ.ಆರ್.ಸಿಯಲ್ಲಿ ಜರುಗಿದ ೪ ಮತ್ತು ೫ ನೇ ತರಗತಿಯ ಗಣಿತ ವಿಷಯದ ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಜ್ಯದಾದ್ಯಂತ ಏಕರೂಪದ ಶೈಕ್ಷಣಿಕ ಪ್ರಕ್ರಿಯೆ ಜಾರಿಯಾಗುತ್ತಿದೆ. ವಿದ್ಯಾರ್ಥಿಗಳ ಭಾವನಾತ್ಮಕ ಅಗತ್ಯತೆಗಳಿಗೆ ಈ ತರಬೇತಿ ಸಹಾಯಕ ಎಂದು ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಎಸ್.ಎಸ್.ಮಲ್ಲನ್ನವರ ತಿಳಿಸಿದರು. ಭಾಗೀದಾರರಿಗೆ ಸೂಕ್ತವಾದ ಮಾಹಿತಿ ನೀಡುವುದು ತರಬೇತಿಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವುದು ಸಂಪನ್ಮೂಲಗಳ ಸರಿಯಾದ ಬಳಕೆ ಇತ್ಯಾದಿ ಕುರಿತಂತೆ ವಿಕಲಚೇತನ ಸಂಪನ್ಮೂಲ ಶಿಕ್ಷಕ ಎಸ್.ಬಿ.ಬೆಟ್ಟದ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರೌಢ ಬಿ.ಆರ್.ಪಿ ರಾಜು ಭಜಂತ್ರಿ. ಬಿ.ಐ.ಇ.ಅರ್.ಟಿ. ವೈ.ಬಿ.ಕಡಕೋಳ. ಸಿ.ಆರ್.ಪಿ. ಬಿ.ಎಂ.ರಾಮಚಂದ್ರ. ರವಿಕುಮಾರ ನಲವಡೆ ಮೊದಲಾದವರು ಉಪಸ್ಥಿತರಿದ್ದರು. “ನಾದಪ್ರಿಯ ಶಿವನೆಂಬರು ವೇದಪ್ರಿಯ ಶಿವನಲ್ಲ”ಎಂಬ ವಚನವನ್ನು ಪ್ರಾರಂಭದಲ್ಲಿ ಉಮಾದೇವಿ, ಎಸ್.ಏಣಗಿಮಠ ಹೇಳಿದರು.
ಗುರುಮಾತೆಯರಾದ ಜೆ.ಡಿ.ಯಲಿಗಾರ, ಪಿ.ಜಿ.ಉಡಿಕೇರಿ, ಎಂ.ಎಸ್.ಕಟಗಿ, ಎಸ್.ಆರ್. ಲಮಾಣಿ, ಯು.ಎಸ್.ಏಣಗಿಮಠ. ಎಲ್.ಎನ್.ಗಾಣಿಗೇರ, ಎಂ.ಬಿ.ಡೊಳ್ಳಿನ, ಶಿಕ್ಷಕರಾದ ಎಸ್.ಎಸ್.ಮಿರಜಕರ, ಎಸ್.ವೈ.ಭಜಂತ್ರಿ, ಆರ್.ಎಸ್.ಚಿಕ್ಕುಂಬಿ, ಜಿ.ಎಸ್.ಬಡಿಗೇರ, ಎಸ್.ಎಸ್.ಘಾನೇಕ, ಆರ್.ಆರ್.ದೇವರಡ್ಡಿ, ಆರ್.ಎಸ್.ಕೋಟೂರ ಸೇರಿದಂತೆ ತಾಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ ಶಿಕ್ಷಕ ಶಿಕ್ಷಕಿಯರು ತರಬೇತಿಯಲ್ಲಿ ಉಪಸ್ಥಿತರಿದ್ದರು.ರವಿಕುಮಾರ ನಲವಡೆ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಸ್.ಮಲ್ಲನ್ನವರ ವಂದಿಸಿದರು.