spot_img
spot_img

ಯೋಗ, ಧ್ಯಾನ ಮತ್ತು ಅಧ್ಯಾತ್ಮ ನಮ್ಮ ನಿತ್ಯ ಬದುಕಿನ ಮಾರ್ಗಗಳಾಗಬೇಕು: ಶರಣ ಜೆ. ಎಮ್.ಕಾಲಿಮಿರ್ಚಿ

Must Read

- Advertisement -

ಬೆಳಗಾವಿ – ಆಧುನಿಕ ಜೀವನ  ಶೈಲಿಯು ಮನುಷ್ಯನನ್ನು ಅಶಾಂತಿಯ ಕಡೆಗೆ,  ಜೊತೆಗೆ ಅನಾರೋಗ್ಯದ ಕಡೆಗೆ ಕರೆದೊಯ್ಯುತ್ತಿದೆ. ಮನುಷ್ಯ ಹುಟ್ಟುತ್ತಾ ವಿಶ್ವಮಾನವ ಹೌದು. ಆದರೆ ಬೆಳೆಯುತ್ತ – ಬೆಳೆಯುತ್ತ  ಕುಟುಂಬ, ಸಮಾಜ, ಧರ್ಮ, ಸಂಪ್ರದಾಯಗಳ ಬಂಧನಕ್ಕೊಳಪಟ್ಟು  ಕುಬ್ಜನಾಗುತ್ತಾನೆ. ದೈಹಿಕ ಬೆಳವಣಿಗೆ, ಮಾನಸಿಕ ಸ್ಥಿರತೆಗೆ ಭಾರತೀಯ ಯೋಗ ಮತ್ತು ಧ್ಯಾನ ಸಂಸ್ಕೃತಿಯು ಒಳ್ಳೆಯ ಸಾಧನಗಳಾಗುವ ಜೊತೆಗೆ  ನಮ್ಮ ಬದುಕನ್ನು ಸರಳ ಮತ್ತು ಆದರ್ಶಮಯವಾಗಿಸುವ  ಕಾರ್ಯ ಮಾಡುವದರಲ್ಲಿ ಸಂಶಯವಿಲ್ಲ.ಅದಕ್ಕೆ ಯೋಗ, ಧ್ಯಾನ ಮತ್ತು ಅಧ್ಯಾತ್ಮ ನಮ್ಮ ನಿತ್ಯ ಬದುಕಿನ ಮಾರ್ಗಗಳಾಗಬೇಕು ಎಂದು ಸಿಪಿಐ ಕಾಲಮಿರ್ಚಿ ಹೇಳಿದರು.

ದಿನಾಂಕ 13 ರಂದು ಬೆಳಗಾವಿಯ ಮಹಾಂತೇಶ ನಗರದ ಫ.ಗು. ಹಳಕಟ್ಟಿ ಭವನದಲ್ಲಿ ನಡೆದ ವಾರದ ಸಾಮೂಹಿಕ ಪ್ರಾರ್ಥನೆ ಮತ್ತು ಉಪನ್ಯಾಸ ಸಂದರ್ಭದಲ್ಲಿ “ನಿತ್ಯಯೋಗ” ಕುರಿತಾಗಿ  ತಮ್ಮ ಅನುಭಾವ  ಹಂಚಿಕೊಂಡ  ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯ C.P.I  ಜೆ. ಎಮ್.ಕಾಲಿಮಿರ್ಚಿ ಅವರು,   ಹಲವಾರು ನಿತ್ಯ ಬದುಕಿನ ಸನ್ನಿವೇಶಗಳ ಉದಾಹರಣೆಯೊಂದಿಗೆ ವಿಶ್ಲೇಷಿಸುತ್ತಾ ಎಲ್ಲರ ಮನಮುಟ್ಟುವಂತೆ ಉಪನ್ಯಾಸ ಮಾಡಿದರು.

- Advertisement -

ನಮ್ಮ ಶರಣರ ಜೀವನ  ವಚನಗಳು ಮಾನವ ಬದುಕಿನ ವಾಸ್ತವತೆಯನ್ನು ಪ್ರತಿಬಿಂಬಿಸಿ , ಬದುಕಲು ಬೇಕಾದ ಮಾನವೀಯ ಮೌಲ್ಯಗಳನ್ನು  ತಿಳಿ‌ಸಿ ಕೊಡುವ ಸಾಧನಗಳಾಗಿವೆ ಎಂದರು.

ಸಂಘಟನೆಯ ಅಧ್ಯಕ್ಷರಾದ ಈರಣ್ಣ ದೇಯನ್ನವರ  ಹಾಗೂ ನಿಕಟ ಪೂರ್ವ ಅಧ್ಯಕ್ಷರಾಗಿದ್ದ ಶರಣರಾದ ಸದಾಶಿವ ದೇವರಮನಿ ಉಪನ್ಯಾಸದ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.       

ಶರಣರಾದ  ರಾಜೇಂದ್ರ ಕಾಡನ್ನವರ ಅವರಿಂದ ಪ್ರಸಾದ ದಾಸೋಹ ನೆರವೇರಿತು. ಸುಜಾತಾ ಮತ್ತಿಕಟ್ಟಿ ಮತ್ತು ಶ್ರೀದೇವಿ ನರಗುಂದ ಅವರ ನೇತೃತ್ವದಲ್ಲಿ ಬೆಳಗಿನ ಸಾಮೂಹಿಕ ಪ್ರಾರ್ಥನೆ ನೆರವೇರಿತು.

- Advertisement -

ಪ್ರಾರಂಭದಲ್ಲಿ ವಾರದ ರೂಢಿಯoತೆ ವಚನ ಗಾಯನ ನೆರವೇರಿತು. ಸಂಘಟನೆ  ಕಾರ್ಯದರ್ಶಿಗಳಾದ ಶರಣ ಸುರೇಶ ನರಗುಂದ ಕಾರ್ಯಕ್ರಮದ  ನಿರೂಪಣೆಯನ್ನು ನೆರವೇರಿಸಿದರು.

ಸಂಘಟನೆಯ ಉಪಾಧ್ಯಕ್ಷರಾದ ಸಂಗಮೇಶ ಅರಳಿ, ಸಂಘಟನೆಯ ನಿಕಟಪೂರ್ವ ಅಧ್ಯಕ್ಷರಾದ ಶಶಿಭೂಷಣ ಪಾಟೀಲ್, ಸಂಘಟನೆಯ ಖಜಾಂಚಿಗಳಾದ ಶರಣ ಸತೀಶ್ ಪಾಟೀಲ್, ಕನ್ನಡ  ಸಾಹಿತ್ಯ ಪರಿಷತ್ತಿನ ಖಜಾಂಚಿಗಳಾದ M.Y. ಮೆಣಸಿನಕಾಯಿ,ಬಸವರಾಜ ಕರಡಿಮಠ, s. s. ಪೂಜಾರ, ಶoಕರ ಶೆಟ್ಟಿ, v. k. ಪಾಟೀಲ,ಆನಂದ್ ಕರ್ಕಿ, ಸುರೇಶ್ ಹಂಜಿ, ಎ.ಬಿ. ಜೇವನಿ, ಕಮಲಾ ಗಣಾಚಾರಿ, ಅನಸೂಯಾ ಬಶೆಟ್ಟಿ, ಮಹಾದೇವಿ ಘಾಟಿ, ವಿ.ಕೆ. ಪಾಟೀಲ್, ಶಿವಾನಂದ ತಲ್ಲೂರ, ಬಸವರಾಜ ಬಿಜ್ಜರಗಿ, ಹೀಗೆ ಸಂಘಟನೆಯ ಕಾರ್ಯಕರ್ತರು ಹಾಗೂ ಸರ್ವ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group