Monthly Archives: May, 2022

ವಿಧಾನ ಪರಿಷತ್ತಿಗೆ ಸುಣಗಾರಗೆ ಟಿಕೇಟ್ ನೀಡಿ: ಯಾಳವಾರ

ಸಿಂದಗಿ: ಕಳೆದ ಉಪ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಕೊಟ್ಟಮಾತಿನಂತೆ ನಡೆದುಕೊಂಡು ಅನೇಕ ವರ್ಷಗಳಿಂದ ಅನ್ಯಾಯವಾಗುತ್ತಿರುವ ಹಿಂದುಳಿದ ವರ್ಗಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ತಾಲೂಕಾ ಕಾಂಗ್ರೆಸ್ ಬ್ಲಾಕ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರಾದ ವಿಜಯಕುಮಾರ ಯಾಳವಾರ ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ನಡೆಯುತ್ತಿರುವ ವಿಧಾನ ಸಭೆಯಿಂದ ವಿಧಾನ ಪರಿಷತ್ ಚುನಾವಣೆಗೆ...

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮೂಡಲಗಿ ಶೈಕ್ಷಣಿಕ ವಲಯಕ್ಕೆ ಮತ್ತೆ ಅಗ್ರ ಸ್ಥಾನ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹರ್ಷ

ಮೂಡಲಗಿ: ಕಳೆದ ಮಾರ್ಚ-ಎಪ್ರೀಲ್ ತಿಂಗಳಲ್ಲಿ ಜರುಗಿದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮೂಡಲಗಿ ಶೈಕ್ಷಣಿಕ ವಲಯಕ್ಕೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಲಭಿಸಿರುವುದಕ್ಕೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿಯೇ ಮೂಡಲಗಿ ಶೈಕ್ಷಣಿಕ ವಲಯ ಈ ಬಾರಿಯೂ ಪ್ರಥಮ ರ್ಯಾಂಕ್ ಗಳಿಸಿದ್ದು, ಶೇ 93.70 ರಷ್ಟು ಫಲಿತಾಂಶ...

ಮೇ 22 ರಂದು ವಿದ್ಯಾಪೀಠದಲ್ಲಿ ‘ಹರಿದಾಸ ಮಿಲನ –ದುರಿತ ಶಮನ’

ಬೆಂಗಳೂರು - ಹರಿದಾಸರ ಮಿಲನ ಹಾಗೂ ದಾಸೋಪಾಸನ ಮತ್ತು ಚಿಪ್ಪಗಿರಿ ತಪೋನಿಧಿ ಶ್ರೀ ವಿಜಯದಾಸರ ಸೇವಾ ಬಳಗ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಇದೇ ಮೇ 22 ಕ್ಕೆ ಬೆಂಗಳೂರಿನ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಮೂಲಬೃಂದಾವನ ಸನ್ನಿಧಿಯ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಬೆಳಗ್ಗೆ 10.00 ರಿಂದ ರಾತ್ರಿ 8 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ. ವೇದೋಪನಿಷತ್ತು ಸಾರವನ್ನು ಸರಳಗನ್ನಡದಲ್ಲಿ ತಿಳಿಸಿದ...

ಮೇ 22 ರಂದು ಕೋಣನಕುಂಟೆಯಲ್ಲಿ 18 ಅಡಿ ಆಂಜನೇಯನ ಮೂರ್ತಿ ಪ್ರತಿಷ್ಠಾಪನೆ

ಬೆಂಗಳೂರು ಚುಂಚಘಟ್ಟ ರಸ್ತೆಯ ಕೋಣನಕುಂಟೆಯ ತಿರುಮಲಾಧೀಶ ಶ್ರೀನಿಧಿ ಶ್ರೀನಿವಾಸನ ದಿವ್ಯ ಸನ್ನಿಧಾನದಲ್ಲಿ ನೂತನವಾಗಿ ಶ್ರೀ ಭೂವರಾಹ, ಶ್ರೀ ಹಯಗ್ರೀವ , ಶ್ರೀ ಮಹಾಲಕ್ಷ್ಮೀ ಹಾಗೂ 18 ಅಡಿ ಎತ್ತರದ ಭವ್ಯವಾದ ಶ್ರೀ ಮುಖ್ಯ ಪ್ರಾಣ ದೇವರ (ಆಂಜನೇಯ) ಸ್ಥಿರಬಿಂಬಗಳ ಆಗಮೋಕ್ತ ಪ್ರತಿಷ್ಠಾಪನಾ ಮಹೋತ್ಸವವನ್ನು ಇದೇ ಮೇ 22 ರಂದು ಅಯೋಜಿಸಲಾಗಿದೆ. ಶ್ರೀಮದುತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ...

625ಕ್ಕೆ 625 ಅಂಕ ಗಳಿಸಿದ ಬೀದರ್ ವಿದ್ಯಾರ್ಥಿನಿ

ಬೀದರ - 2022 ನೇ ಸಾಲಿನಲ್ಲಿ ನಡೆದ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಬೀದರನ ಸುಸ್ಮಿತ ದಾಮೋದರ್ 625ಕ್ಕೆ 625 ಅಂಕ ಪಡೆದು ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ಭಾಲ್ಕಿಯ ವಿಧ್ಯಾಭಾರತಿ ಶಾಲೆಯ ವಿದ್ಯಾರ್ಥಿನಿ ಸುಸ್ಮಿತಾ ಸಾಧನೆಗೆ ಪೋಷಕರು ಸಂತಸ ವ್ಯಕ್ತಪಡಿಸಿದ್ದು ಸನ್ಮಾನ ಮಾಡಿ, ಸಿಹಿ‌ ಹಂಚಿ ಸಂಭ್ರಮಿಸಿದರು. ವರದಿ: ನಂದಕುಮಾರ ಕರಂಜೆ, ಬೀದರ

ಇದು ನನ್ನೊಬ್ಬಳ ಯಶಸ್ಸಲ್ಲ ಎಲ್ಲರದೂ – ಸೌಮ್ಯ ಅಮ್ಮಲಜೇರಿ

ಬನಹಟ್ಟಿ - ಇದು ನನ್ನೊಬ್ಬಳ ಯಶಸ್ಸಲ್ಲ ನನಗೆ ಶಿಕ್ಷಣ ನೀಡಿದ ಎಲ್ಲ ಶಿಕ್ಷಕರದ್ದು ಹಾಗೂ ನನಗೆ ಪ್ರೋತ್ಸಾಹ ನೀಡಿದ ನನ್ನ ಪಾಲಕರದ್ದು ಎಂದು ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಪಡೆದ ಸೌಮ್ಯ ಅಮ್ಮಲಜೇರಿ ಹೇಳಿದರು. ವಿದ್ಯಾರ್ಥಿನಿ ಸೌಮ್ಯ ಗುರುಲಿಂಗ ಅಮ್ಮಲಜೇರಿ ಎಸ್ ಎಸ್ ಎಲ್ ಸಿ ಪರೀಕ್ಷೆ 2022 ರಲ್ಲಿ 625 ಕ್ಕೆ...

ಬೀದರ್ ಇತಿಹಾಸದಲ್ಲೆ ಮೊದಲ ಬಾರಿಗೆ ಪರಿಷತ್ ಸಭಾಪತಿ ಸ್ಥಾನ

ಬೀದರ - ಬೀದರ ಜಿಲ್ಲೆಯ ಇತಿಹಾಸದಲ್ಲಿಯೇ ಸ್ಥಳೀಯ ರಘುನಾಥ್ ಮಲ್ಕಾಪೂರೆಯವರನ್ನು ವಿಧಾನ ಪರಿಷತ್ ಸಭಾಪತಿಯಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಸಭಾಪತಿಯಾಗಿ ನೇಮಕವಾದ ಬಳಿಕ ಮೊದಲ ಬಾರಿಗೆ ಬೀದರ್ ಗೆ ಆಗಮಿಸಿದ ಮಲ್ಕಾಪೂರೆಯವರನ್ನು ಬೀದರ್ - ತೆಲಂಗಾಣ ಗಡಿಯಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸನ್ಮಾನ ಮಾಡಿ ಅದ್ದೂರಿ ಸ್ವಾಗತ ಮಾಡಿಕೊಂಡರು. ನಂತರ ಮಾತನಾಡಿದ ಮಲ್ಕಾಪೂರೆಯವರು,...

ಫಲಿತಾಂಶದಲ್ಲಿ ಮೂಡಲಗಿ ವಲಯ ಜಿಲ್ಲೆಗೆ ಪ್ರಥಮ – ಬಿಇಓ ಮನ್ನಿಕೇರಿ ಮಾಹಿತಿ

ಮೂಡಲಗಿ: ಶಿಕ್ಷಕರ, ಪಾಲಕ, ಪೋಷಕರ ಹಾಗೂ ವಿದ್ಯಾರ್ಥಿಗಳ ಪರಿಶ್ರಮದ ಫಲವಾಗಿ ಮೂಡಲಗಿ ಶೈಕ್ಷಣಿಕ ವಲಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ೨೦೨೧-೨೨ ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಪರೀಕ್ಷೆಗೆ ದಾಖಲಾದ ೭೦೩೯ ವಿದ್ಯಾರ್ಥಿಗಳ ಪೈಕಿ ೬೭೩೭ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಮೂಡಲಗಿ ಶೈಕ್ಷಣಿಕ ವಲಯದ ಕೀರ್ತಿ ಹೆಚ್ಚಿಸಿದ್ದಾರೆಂದು ಬಿಇಒ ಅಜಿತ ಮನ್ನಿಕೇರಿ ಪ್ರಕಟಣೆಯಲ್ಲಿ...

625 ಕ್ಕೆ 625 ಅಂಕ ಪಡೆದು ಬೆಳಗಾವಿ ಜಿಲ್ಲೆಗೆ ಕೀರ್ತಿ ತಂದ 10 ಜನ ವಿದ್ಯಾರ್ಥಿಗಳು

ಬೆಳಗಾವಿ: ಇಂದು ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು ರಾಜ್ಯದೆಲ್ಲೆಡೆ ವಿದ್ಯಾರ್ಥಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಪರೀಕ್ಷೆಯ ನಂತರ ಫಲಿತಾಂಶಕ್ಕೆ ಕಾಯುತ್ತ ಕುಳಿತ ವಿದ್ಯಾರ್ಥಿಗಳ ಮುಖದಲ್ಲಿ ಇಂದು ಮಂದಹಾಸ ಮೂಡಿದ್ದು ಈ ಬಾರಿಯ ಪಲಿತಾಂಶ ಒಂದು ಮಾದರಿ ದಾಖಲೆಯಂತಿದೆ. ರಾಜ್ಯದಲ್ಲಿ 145 ವಿದ್ಯಾರ್ಥಿಗಳು 625 ಅಂಕಗಳಿಗೆ 625 ಸಂಪೂರ್ಣ ಅಂಕಗಳನ್ನು ಪಡೆದು ಟಾಪರ್ ಗದ್ದುಗೆ...

ಬೂದಿಹಾಳ ಸರಕಾರಿ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಶೇ.100

ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯ 2021-22 ನೆಯ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಶೇ.100 ರಷ್ಟಾಗಿದೆ. ಲಕ್ಷ್ಮೀ ಬಸಪ್ಪ ತಡಸಲೂರ (616) ಪ್ರಥಮ, ಅಭಿಷೇಕ ಬಸಯ್ಯ ನರೇಂದ್ರಮಠ (611) ದ್ವಿತೀಯ, ಅಪೂರ್ವ ರಮೇಶ ಸೂರ್ಯವಂಶಿ (604) ತೃತೀಯ ಸ್ಥಾನ ಪಡೆದಿದ್ದಾರೆ. ಪರೀಕ್ಷೆಗೆ ಹಾಜರಾದ ಒಟ್ಟೂ 31 ವಿದ್ಯಾರ್ಥಿಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 12...
- Advertisement -spot_img

Latest News

ಅಣಕವಾಡು : ಮದನಾರಿ ಸತಿ ರೇಣುಕೆ

ಮದನಾರಿ ಸತಿ ರೇಣುಕ ಮದ‌ವೇರಿದ ತುಂಬಿದ ತನು ತಂದಳು ಸತಿ ರೇಣುಕೆ ಮನೆಮುಂದಿನ ಅಂಗಳದಲಿ ಕಸಬಳಿದಳು‌ ಬಳಲಿಕೆ ಏದುಸಿರನು‌ ಬಿಡುಬಿಡುತಲಿ ನೀರನು ಚಳೆಹೊಡೆದಳು ಆಯಾಸದಿ ಬಾಗುತ್ತಲಿ ರಂಗೋಲಿಯ ಬರೆದಳು ಮಹಾಮನೆಯ ಮಹಾದೇವಿ ಮಹಾಕಾಯ ಹೊತ್ತಳು ಬೇಸರದಲಿ ಬುಸುಗುಡುತಲಿ ನಿಟ್ಟುಸಿರನು‌ ಬಿಟ್ಟಳು ಹಾದಾಡುವ ಹೊಸತಿಲಲ್ಲಿ ಬಂದಳು ಹೊಯ್ದಾಡುತ ಮನೆಬಾಗಿಲ...
- Advertisement -spot_img
close
error: Content is protected !!
Join WhatsApp Group