Monthly Archives: December, 2024
ಸುದ್ದಿಗಳು
ಕಾರಂಜಾ ಸಂತ್ರಸ್ತರಿಂದ ಆತ್ಮಹತ್ಯೆಗೆ ಯತ್ನ
ಬೀದರ - ಕಾರಂಜಾ ಪರಿಹಾರಕ್ಕಾಗಿ ಬೀದರ ಉಸ್ತುವಾರಿ ಸಚಿವರ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ರೈತರು ಒಂದು ಹಂತದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಗೆ ಪ್ರಯತ್ನಿಸಿದ ಘಟನೆ ನಡೆದಿದ್ದು ವಿಷ ಸೇವಿಸಿದ ಮೂವರು ರೈತರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.ಇದರಿಂದ ಕಾರಂಜಾ ಸಂತ್ರಸ್ತರ ಹೋರಾಟ ತೀವ್ರ ಹೋರಾಟ ಪಡೆದಂತಾಗಿದೆ. ಈ ಮೊದಲು ಕಾರಂಜಾ ಹೋರಾಟ ಆರಂಭಿಸಿದ್ದ ರೈತರು...
ಕವನ
ಕವನ : ಸತ್ತ ಹೆಣದ ಬೂದಿ
ಸತ್ತ ಹೆಣದ ಬೂದಿ !ಸಿದಿಗೆಯ ಮೇಲೆ ಹೆಣ
ಹೆಣದ ಮೇಲೆ ಹಣ
ಹಣದ ಮೇಲೆ ನೊಣ
ಸುತ್ತಲೂ ಹತ್ತಾರು ಜನ
ಗೋಗರೆಯವರು ಯಾರೋ
ಒಳಗೊಳಗೆ ನಗುವವರು ಯಾರೋ ?ಹೆಗಲು ಸೋತು
ಚಕ್ರವು ಹೆಣವನ್ನು ಸಾಗಿಸುತ್ತಿದೆ ,
ಹೂವಿನ ಹಾರ ಹೆಣದೊಳಗೆ
ಬದುಕಿದೆ ,
ಬದುಕಿ ಒಳಗೊಳಗೆ ನಗುತ್ತಿದೆ
ಸತ್ತಿರುವನು ಸತ್ವದ ಗೊಬ್ಬರವೇ !
ಇಲ್ಲವೇ ಕೊಳೆಯಲಾಗದೆ
ಇಳೆಗೆ ಹೊರೆಯೇ .ಸೂರ್ಯನು ಮುಳುಗುವ ಹೊತ್ತು
ಹೆಣವ ಕುಣಿಗೆ ಇಳಿಸಿದಾಗ
ಮೆರೆದ ನಾಲಿಗೆ ಕುಣಿಯೊಳಗೆ ಇತ್ತು...
ಕವನ
ಕವನಗಳು
ಮರೆತು ಮನದಲ್ಲಿ ಬಸವನ
------------------------------------
ಮರೆತು ಮನದಲ್ಲಿ ಬಸವನ
ವನವ ಸುತ್ತಿದರೇನು ?
ಜಡಗೊಂಡ ಕಾಯವು
ಕಲ್ಯಾಣಕೆ ಹಾತೊರೆಯೇ
ಕುರಿ ಹಿಂಡು ಮೇಯಲು
ಕಬ್ಬಿನ ತೋಟ ಹೊಕ್ಕಂತೆ
ಅರಿವು ಆಚಾರ ಅನುಭಾವ
ಗುರು ಲಿಂಗ ಜಂಗಮವು
ಶ್ರಮ ದುಡಿಮೆಕಾಯಕ
ಧರ್ಮ ಸಾಧನ ದೀಕ್ಷೆಯು
ದಾಸೋಹ ಸಮಪಾಲು
ಸಹ ಬಾಳ್ವೆಯ ಜೀವನ
ಅಪ್ಪ ಬಸವನ ವಚನ
ಮನುಕುಲದ ಪಾವನ
ಅಷ್ಟ ಮದಗಳ ಸುಟ್ಟು
ಅಷ್ಟಾವರಣ ಧರಿಸುತ
ಶಿವನೊಲುಮೆಯ ಪರಿಯು
ಶಿವಾಚಾರದ ನಡೆಯು
ಭವಿ ಬಿಟ್ಟ ಭಕ್ತನು
ನರನೋಗಿ ಹರನಾದ
ಮನುಜನೆ ಮಹದೇವ
ಕಲ್ಯಾಣವೇ ಕೈಲಾಸ
ಉಳವಿ ಹೆಬ್ಬಾಗಿಲು
ವಚನಗಳ ಕ್ರಾಂತಿಗೆ
ಜಗವೆಲ್ಲಾ ನಡುಗಿಹುದು
ಅನುಭಾವದ...
ಸುದ್ದಿಗಳು
ಸಾಹಿತಿ, ವಿಮರ್ಶಕ ಡಾ. ಎಫ್.ಡಿ.ಗಡ್ಡಿಗೌಡರ ಅವರಿಗೆ ಸನ್ಮಾನ
ಬೈಲಹೊಂಗಲ: ಕೆಳದಿ ಚನ್ನಮ್ಮನ ವಂಶಸ್ಥರಾದ ಡಾ. ಎಫ್.ಡಿ.ಗಡ್ಡಿಗೌಡರ ಅವರಿಗೆ ಉತ್ತಮ ಭವಿಷ್ಯವಿದೆ ಎಂದು ಬೇವಿನಕೊಪ್ಪ ಗ್ರಾಮದ ಸಾಮಾಜಿಕ ಕಾರ್ಯಕರ್ತರು, ಆಧ್ಯಾತ್ಮ ಜೀವಿಗಳಾದ ಬಸವಂತಯ್ಯ ಈರಯ್ಯ ಚವತ್ರಿಮಠ ಹೇಳಿದರು.ಸಾಂಸ್ಕೃತಿಕ ಹಿನ್ನೆಲೆ, ಐತಿಹಾಸಿಕ ಪರಂಪರೆಯನ್ನು ಹೊಂದಿದ ಮನೆತನದಲ್ಲಿ ಜನಿಸಿ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ವಿಶೇಷತೆಯನ್ನು ಮೈಗೂಡಿಸಿಕೊಂಡಿರುವ ಗಡ್ಡಿಗೌಡರ ಅವರು ಇನ್ನಷ್ಟು ಸಾಧನೆ ಮಾಡಿ...
Uncategorized
ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ತಾನೊಬ್ಬ ತಿನ್ನುವುದು ತರವಲ್ಲ ಮಾನವನು
ಕೊಂಚವಾದರು ಹಂಚಿ ತಿನ್ನಬೇಕು
ಕರೆದು ತಿನ್ನುವ ಕಾಗೆಕೋಳಿಗಳ ನೋಡಿ ಕಲಿ
ದಾಸೋಹ ಧರ್ಮಗುಣ - ಎಮ್ಮೆತಮ್ಮಶಬ್ಧಾರ್ಥ
ತರವಲ್ಲ = ಸರಿಯಲ್ಲತಾತ್ಪರ್ಯ
ಮಾನವನು ವಿಶ್ವಕುಟುಂಬಿಯಾಗಿ ಬದುಕಬೇಕು ಎಂಬ
ತತ್ತ್ವವನ್ನು ಈ ಕಗ್ಗ ಒರೆಯುತ್ತಿದೆ. ತಾನು ತನ್ನ ಕುಟುಂಬ ತನ್ನ
ಪರಿವಾರ ತಿನ್ನುವುದು ಸ್ವಾರ್ಥವಾಗುತ್ತದೆ. ಸಮಾಜದ ಇತರ
ಜನರಿಗೆ ಅನ್ನ ಸಂತರ್ಪಣೆ ಮಾಡಿದರೆ ಅವರಿಂದ ನಮಗೆ
ಆಶೀರ್ವಾದ ಸಿಗುತ್ತದೆ. ಪ್ರತಿಯೊಬ್ಬರಲ್ಲಿ ದೇವರು ಇರುತ್ತಾನೆ.
ಅವರನ್ನು ತೃಪ್ತಿಪಡಿಸಿದರೆ...
ಸುದ್ದಿಗಳು
ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ
ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಜಿ ಸಿಎಂ, ಮಾಜಿ ಕೇಂದ್ರ ಸಚಿ ಎಸ್.ಎಮ್.ಕೃಷ್ಣ ನಿಧನದ ಹಿನ್ನೆಲೆಯಲ್ಲಿ ಅವರಿಗೆ ಗೌರವ ನಮನ ಸಲ್ಲಿಸಿ ಮಾತನಾಡಿದ ಅವರು, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಆಡಳಿತಾತ್ಮಕ...
ಸುದ್ದಿಗಳು
ಆಲಮಟ್ಟಿ ಅಣೆ ಎತ್ತರಿಸುವಂತೆ ವಕೀಲರಿಂದ ಮನವಿ
ಸಿಂದಗಿ: ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವಂತೆ ಸರಕಾರಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗುತ್ತಿಲ್ಲ. ಆಲಮಟ್ಟಿ ಆಣೆಕಟ್ಟು ಎತ್ತರವನ್ನು ಹೆಚ್ಚಿಸಿದರೆ ಹೆಚ್ಚುವರಿ ನೀರು ಸಂಗ್ರಹದೊಂದಿಗೆ ಉತ್ತರ ಕರ್ನಾಟಕ ಭಾಗದ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ನ್ಯಾಯವಾದಿ ದಾನಪ್ಪಗೌಡ ಚನಗೊಂಡ ಹೇಳಿದರು.ಪಟ್ಟಣದ ಆಡಳಿತ ಸೌಧದ ಮುಂಭಾಗದಲ್ಲಿ ಸಿಂದಗಿ ವಕೀಲರ ಸಂಘದ ವತಿಯಿಂದ ಆಲಮಟ್ಟಿ ಆಣೆಕಟ್ಟು ಮೇಲಕ್ಕೆತ್ತರಿಸುವಂತೆ...
ಸುದ್ದಿಗಳು
ವಿದ್ಯೆ ಜತೆಗೆ ಸಂಸ್ಕಾರ ಕಲಿಯಿರಿ: ಎಸ್ಆರ್ ಪಾಟೀಲ
ಬೀಳಗಿ:- ಸಹಕಾರಿ, ಶಿಕ್ಷಣ,ಕೈಗಾರಿಕೆ, ವೈದ್ಯಕೀಯ ಮುಂತಾದ ಕ್ಷೇತ್ರಗಳಲ್ಲಿ ಸಹಸ್ರಾರು ಜನರಿಗೆ ಉದ್ಯೋಗಾವಕಾಶ ನೀಡುವ ಮೂಲಕ ಸಮಾಜದ ಋಣ ತೀರಿಸುವ ಕೆಲಸ ಮಾಡುತ್ತಿದ್ದೇವೆ, ಎಂದು ಎಸ್,ಆರ್,ಪಾಟೀಲ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಎಸ್,ಆರ್,ಪಾಟೀಲ ಹೇಳಿದರುತಾಲೂಕಿನ ಬಾಡಗಂಡಿ ಎಸ್,ಆರ್,ಪಾಟೀಲ ಶಿಕ್ಷಣ ಪ್ರತಿಷ್ಠಾನದ ಬಾಪೂಜಿ ಅಂತಾರಾಷ್ಟ್ರೀಯ ಶಾಲೆ ಹಾಗೂ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಹಾಗೂ ಸಾರ್ಥಕ...
Uncategorized
ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ದೇವರಿಗೆ ಜಲಪತ್ರ ಫಲಪುಷ್ಪ ಪಕ್ವಾನ್ನ
ಕಾಯಿಗಳನರ್ಪಿಸಲು ಕೊಳುವನೇನು ?
ಮನಸು ಕೊಟ್ಟರೆ ಮಾತ್ರ ಕೊಂಡು ಹರಸುವನೆಮಗೆ
ಎಲ್ಲಬಿಡು ಮನಸುಕೊಡು - ಎಮ್ಮೆತಮ್ಮಶಬ್ಧಾರ್ಥ
ಜಲ = ನೀರು. ಪತ್ರ = ಎಲೆ, ದಳ. ಫಲ = ಹಣ್ಣು. ಪುಷ್ಪ = ಹೂ
ಪಕ್ವಾನ್ನ = ಬೇಯಿಸಿದ ಅನ್ನ, ಭಕ್ಷ್ಯತಾತ್ಪರ್ಯ
ದೇವರ ಮೂರ್ತಿಗೆ ಅಥವಾ ಲಿಂಗಕ್ಕೆ ನೀರಿನಿಂದ ಮಜ್ಜನ
ಮಾಡಿ ಅಭೀಷೇಕ ಮಾಡುವುದು , ಬಿಲ್ವ, ಬನ್ನಿ,...
ಸುದ್ದಿಗಳು
ಮಾಜಿ ಸಿಎಂ ಕೃಷ್ಣ ವಿಧಿವಶ- ಶಾಸಕ ಬಾಲಚಂದ್ರ ಜಾರಕಿಹೊಳಿ ಕಂಬನಿ
ಗೋಕಾಕ-ಪದ್ಮ ವಿಭೂಷಣ, ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ (೯೩) ಅವರ ನಿಧನಕ್ಕೆ ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸಂತಾಪ ಸೂಚಿಸಿದ್ದಾರೆ.ನಗುಮುಖದ ಮೂಲಕ ತಮ್ಮದೇಯಾದ ವಿಶಿಷ್ಟ ಶೈಲಿಯ ರಾಜಕಾರಣದ ಮೂಲಕ ಗಮನ ಸೆಳೆದಿದ್ದ ಎಸ್.ಎಂ.ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿಯಾಗಿ, ಸ್ಪೀಕರ್ ಆಗಿ, ಕೇಂದ್ರದ ಮಂತ್ರಿಯಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿಯೂ ಸೇವೆ...
Latest News
ಲೇಖನ : ಹಟ್ಟಿ ಹಬ್ಬ
ದೀಪಾವಳಿಯು ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ದೀಪಾವಳಿ ಎಂದರೆ ದೀಪಗಳ ಹಬ್ಬ, ಮನೆ ಮನೆಗಳ ಮುಂಭಾಗದಲ್ಲೆಲ್ಲ ದೀಪಗಳ ಸಾಲು ಹಾಗೂ ಆಕಾಶಬುಟ್ಟಿ ಹಚ್ಚುವ ಮೂಲಕ ಜನರು...