ಕವನ: ರಕ್ಷಾಬಂಧನ

Must Read

ರಕ್ಷಾಬಂಧನ

ಬಂಧನದಿಂದುಸಿದಾನಂದ ಜನ್ಮ ಜನ್ಮಾಂತರಗಳಿಂದ
ಅನವರತ ಮಧುರ ಸಂಬಂಧ
ಈ ಋಣಾನುಬಂಧll

ಗುರು ಬಂಧು ಬಳಗವೆಲ್ಲ
ಸತಿ ಸುತ ಸ್ನೇಹಿತರೆಲ್ಲ
ಜೀವನ ಯಾತ್ರೆಯಲಿ ಸಂದಿಸುವರೆಲ್ಲ
ಬಂಧನ ಮಂದಿರ ಕಟ್ಟುವರೆಲ್ಲll

ಹೊಸೆಯುವ ನೂಲಿನೆಳೆಯಲ್ಲ
ಬೆಸೆಯುವ ಲೋಹಗಳಲ್ಲ
ಹೃದಯಗಳ ಮಿಡಿತವೆಲ್ಲ
ಬಂಧನ ದೇವರ ಅನುಗ್ರಹವೆಲ್ಲ ll

ಬಂದು ಹೋಗುವ ಸಂಭ್ರಮವಲ್ಲ
ಅಗೋಚರ ಭಾವ ಬಂಧನವೆಲ್ಲ
ಅಗಣಿತ ಪ್ರೇಮ ಸಾಕ್ಷಾತ್ಕಾರವೆಲ್ಲ
ಈ ರಕ್ಷಾಬಂಧನ ಅನುಪಮವೆಲ್ಲll


ಶಿವಪ್ಪ ವ ಕಾಕೋಳ ಶಿಕ್ಷಕರು, ನೆಲೋಗಲ್ಲ
(ಎಸ್ವಿಕೆ ಸೂರಣಗಿ) 8970668017

Latest News

ಉಪ್ಪಾರ ಸಮಾಜ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನೆರವು – ಬರಮಣ್ಣ ಉಪ್ಪಾರ

ಮೂಡಲಗಿ: ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ರೂ.೫ ಕೋಟಿ ಹಣವಿದೆ ಸಮಾಜದ ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಸಾಧನೆ...

More Articles Like This

error: Content is protected !!
Join WhatsApp Group