ಕವನ : ಬಸವ ಬೆಳಗು

Must Read

ಬಸವ ಬೆಳಗು

ಬಸವನೆಂಬ ಬೆಳಗು
ಆತ್ಮ ಪರಿಶುದ್ಧತೆಯ ಒಳಹೊರಗು
ಸಮತೆಯ ಭಾವ
ವಾಸ್ತವದ ಅನುಭವ.

ಕಾಯಕನಿಷ್ಠೆಯ ಪ್ರಭಾವ
ಇಹಪರದ ಸೂಚಕ
ಬಾಳ ದೀವಿಗೆಗೆ ದಿಕ್ಸೂಚಿ
ಲಿಂಪೂಜೆಯ ಅನುಸೂಚಿ.

ಮತದ ಭ್ರಮೆಯ ಹುಟ್ಟಡಗಿಸಿ
ಮಾನವೀಯತೆಯ ಝೇಂಕರಿಸಿ
ಜನಮಾನಸದಿ ಅಚ್ಚೊತ್ತಿ
ಭಕ್ತಿ ಭಂಡಾರಿಯ ರೂಪಕ.

ಶರಣ ಚಳವಳಿಯ ರೂವಾರಿ
ಸಮಾಜದ ಅನನ್ಯತೆಯ ಸಿರಿ
ಅನುಭವ ಮಂಟಪದ ಚೈತನ್ಯ
ಚಿಂತನ ಮಂಥನ ಪ್ರಾಧಾನ್ಯ.

ವಿಶ್ವ ಮಾದರಿಯ ವ್ಯಕ್ತಿತ್ವ
ಕೇಡು ಬಯಸದ ತತ್ವ
ಬರಡು ಭೂಮಿಯಲು ಜಿನುಗು
ಹತಾಶೆಯಾದವರ ಅಂತಃಕರಣ.

ರೇಷ್ಮಾ ಕಂದಕೂರ, ಶಿಕ್ಷಕಿ
ಸಿಂಧನೂರ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group