ಸವದತ್ತಿ – ಸವದತ್ತಿ ತಾಲೂಕಾ ಸರಾಫ ಮತ್ತು ಅಕ್ಕಸಾಲಿಗರ ಸಂಘದ ಸದಸ್ಯರು ಎಚ್.ಯು.ಆಯ್.ಡಿ. ಕಾಯಿದೆ ತೆಗೆದು ಹಾಕಬೇಕು ಈ ಕಾಯ್ದೆಯಿಂದ ಚಿನ್ನದ ಕೆಲಸಗಾರರಿಗೆ ಹಾಗೂ ಚಿನ್ನದ ವ್ಯಾಪಾರಸ್ಥರಿಗೆ ತುಂಬಾ ತೊಂದರೆಯಾಗುತ್ತದೆ ಇದರಿಂದ ಅಂಗಡಿಗಳನ್ನೇ ಮುಚ್ಚುವ ಪರಿಸ್ಥಿತಿ ಬರುತ್ತದೆ ಆದ್ದರಿಂದ ಸರಕಾರ ಎಚ್.ಯು.ಆಯ್.ಡಿ. ಕಾಯಿದೆ ತೆಗೆದು ಹಾಕಬೇಕು ಎಂದು ತಹಶೀಲ್ದಾರ ಪ್ರಶಾಂತ ವಿ ಪಾಟೀಲ ರವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಅಶೋಕ ಸೋನಾರ. ಶಿದ್ದಯ್ಯ ದಾ ವಡಿಯರ.ಅರುಣ ಸುಳ್ಳದ.ಹನುಮಂತ ನಿಕ್ಕಮ.ಬಸವರಾಜ ಉದಪುಡಿ.ಕೃಷ್ಣಕುಮಾರ ಸಾಬಣ್ಣವರ. ಸೋಮಲಿಂಗಯ್ಯ ವಡಿಯರ.ವಿಜಯ ಸೊನ್ನದ. ವಿನಾಯಕ ಚೊಳಚಗುಡ್ಡ.ಅಶೋಕ ಬಾ ಸೊನಾರ.ಈರಣ್ಣ ಬಾ ಟೋಪಕರ.ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.