spot_img
spot_img

Belagavi KLE: ಈ ಸೋರುವಿಕೆ ನಿಲ್ಲುವುದೆಂದು?

Must Read

- Advertisement -

ಬೆಳಗಾವಿ: ನಗರದ ಕೆಎಲ್ಈ ಆಸ್ಪತ್ರೆಯ ಮುಖ್ಯ ದ್ವಾರದ ಎದುರಿಗಿನ ವಾಹನ ನಿಲ್ಲುವ ಸ್ಥಳದಲ್ಲಿ ಭೂಗತ ಪೈಪ್ ಲೈನ್ ಕಳೆದ ಆರೇಳು ತಿಂಗಳಿನಿಂದ ಸೋರುತ್ತಿದ್ದು ಮಹಾನಗರ ಪಾಲಿಕೆಯಾಗಲಿ, ಜಲ ಮಂಡಳಿಯಾಗಲಿ ಈ ಕಡೆ ಕಣ್ಣೆತ್ತಿ ಕೂಡ ನೋಡಿಲ್ಲ.

ಪೈಪ್ ಲೈನ್ ಸೋರಿಕೆಯಾಗಿದ್ದರಿಂದ ರಸ್ತೆಯ ಮೇಲೆ ನೀರು ನಿಲ್ಲುತ್ತಿದ್ದು ವಾಹನ ಬಂದಾಗ ರಸ್ತೆ ಪಕ್ಕ ನಿಂತವರಿಗೆ ನಿಂತ ನೀರು ಸಿಡಿಯುವ ಸಂಭವವಿದೆ. ಅಲ್ಲದೆ ಅದೇ ಜಾಗದ ಪಕ್ಕದಲ್ಲಿ ಸಣ್ಣ ಚಹಾ ಅಂಗಡಿಗಳಿಗೆ ತೊಂದರೆಯಾಗುತ್ತಿದೆ.

ಆಸ್ಪತ್ರೆಗೆ ಬಂದ ಜನರಿಗೂ ಬಸ್ ಸಲುವಾಗಿ ಈ ಜಾಗದಲ್ಲಿ ನಿಲ್ಲಲು ತೊಂದರೆಯಾಗುತ್ತಿದೆ. ಇದನ್ನೆಲ್ಲ ನೋಡಿಯೂ ನೋಡದಂತೆ ಮಹಾನಗರ ಪಾಲಿಕೆ ಹಾಗೂ ಜಲಮಂಡಳಿ ತಣ್ಣಗೆ ಕುಳಿತುಕೊಂಡಿವೆ.

- Advertisement -

ಇನ್ನಾದರೂ ರಸ್ತೆಯಲ್ಲಿ ನೀರು ಸೋರಿ ಹೋಗುವ ಈ ಸಮಸ್ಯೆಗೆ ಸಂಬಂಧ ಪಟ್ಟ ಇಲಾಖೆ ಮುಕ್ತಿ ಕಾಣಿಸಲಿ ಎಂಬುದು ಜನತೆಯ ಬೇಡಿಕೆಯಾಗಿದೆ.


ಉಮೇಶ ಬೆಳಕೂಡ

- Advertisement -
- Advertisement -

Latest News

ಶಿವಾನಂದ ಮಹಾವಿದ್ಯಾಲಯದಲ್ಲಿ ವರಕವಿ ಬೇಂದ್ರೆಯವರ ೪೩ನೇ ಪುಣ್ಯಸರಣೆ

ಕಾಗವಾಡ: ನಗರದ ಶಿವಾನಂದ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಪ್ರಾಯೋಜಿತ ಕನ್ನಡ ವಿಭಾಗ ವರಕವಿ ಶಬ್ದಗಾರುಡಿಗ ಡಾ. ದ. ರಾ. ಬೇಂದ್ರೆಯವರ ೪೩ನೇ ಪುಣ್ಯಸ್ಮರಣೆಯನ್ನು ಆಯೋಜಿಸಲಾಗಿತ್ತು. ಈ ಸಮಾರಂಭದ ಮುಖ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group