Homeಸುದ್ದಿಗಳುಆರೊಗ್ಯದ ಬಗ್ಗೆ ಕಾಳಜಿ ಇಟ್ಟುಕೊಳ್ಳಬೇಕು - ಡಾ. ಮನಗೂಳಿ

ಆರೊಗ್ಯದ ಬಗ್ಗೆ ಕಾಳಜಿ ಇಟ್ಟುಕೊಳ್ಳಬೇಕು – ಡಾ. ಮನಗೂಳಿ

ಸಿಂದಗಿ: ಮಣ್ಣಿನ ಕಲುಷಿತ ವಾತಾವರಣದಲ್ಲಿ ವಿಷಪೂರಿತ ಆಹಾರ ಸೇವನೆಯಿಂದ ಮನುಷ್ಯನಿಗೆ ತಮಗರಿವಿಲ್ಲದೆ ರೋಗಗಳು ಕಾಣಿಸಿಕೊಳ್ಳುತ್ತಿದ್ದು ಸಾರ್ವಜನಿಕರು ಮೇಲಿಂದ ಮೇಲೆ ತಪಾಸಣೆ ಪಡೆದುಕೊಳ್ಳುವುದರಿಂದ ರೋಗಗಳಿಗೆ ಕಡಿವಾಣ ಹಾಕಲು ಸಾಧ್ಯವೆಂದು ಡಾ.ಶಾಂತವೀರ ಮನಗೂಳಿ ಹೇಳಿದರು.

ಪಟ್ಟಣದ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಆಯುರ್ವೇದ ಮಹಾವಿದ್ಯಾಲಯ ಮತ್ತು ಮನಗೂಳಿ ಆಸ್ಪತ್ರೆಯಲ್ಲಿ ಎಲುಬು ಮತ್ತು ಕೀಲು  ಉಚಿತ ತಪಾಸಣೆ ಮತ್ತು ಆಯುರ್ವೇದ ಚಿಕಿತ್ಸಾ ಶಿಬಿರ ಉಚಿತ ಔಷಧಿ ವಿತರಣಾ ಶಿಬಿರದಲ್ಲಿ ಮಾತನಾಡಿ, ದಿನಾಲು ಆರೋಗ್ಯಯುತ ಆಹಾರ ಸೇವೆ ಮಾಡುವುದರ ಜೊತೆಗೆ ಮಿತವ್ಯಯ ಪದ್ದತಿ ಅನುಸರಿಸಬೇಕು. ನಾನು ಆರೋಗ್ಯವಾಗಿದ್ದೇನೆ ನಾನ್ಯಾಕೆ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಹಿಂಜರಿಕೆ ಮಾಡದೇ ಇಂತಹ ಶಿಬಿರಗಳಲ್ಲಿ ಬಾಗವಹಿಸಿ ಚಿಕಿತ್ಸೆ ಪಡೆದುಕೊಂಡರೆ ಮುಂದೆ ಗೋಚರಿಸುವಂತಹ ಔಷಧಿಗಳನ್ನು ಸೇವನೆ ಮಾಡುವುದರಿಂದ ರೋಗಮುಕ್ತ ಜೀವನ ನಡೆಸಬಹುದು ಎಂದರು.

ಕಾರ್ಯಕ್ರಮದ ನೇತೃತ್ವ ವಹಿಸಿದ ಡಾ. ಸಂಧ್ಯಾ ಎಸ್ ಮನಗೂಳಿ ರವರು ಸಿಂದಗಿ ಕ್ಷೇತ್ರದ ಸಾರ್ವಜನಿಕರಿಗೆ ಉಚಿತವಾಗಿ ತಪಾಸಣೆ ಮಾಡಿದರು.

RELATED ARTICLES

Most Popular

close
error: Content is protected !!
Join WhatsApp Group