spot_img
spot_img

ಶ್ರೀ ವಿಶ್ವೇಶತೀರ್ಥ ಉವಾಚಿತ ಕಥೆಗಳ ಸಂಗ್ರಹಗಳು

Must Read

- Advertisement -

ಕಥೆಗಳೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಯಾರಾದರೂ ಕಥೆ ಹೇಳುತ್ತಾರೆಂದರೆ ಹಸುಗೂಸುಗಳಿಂದ ಹಿಡಿದು ಹಣ್ಣುಹಣ್ಣು ಮುದುಕರವರೆಗೆ ಎಲ್ಲರೂ ಕಿವಿಗೊಟ್ಟು ಕುಳಿತುಕೊಳ್ಳುತ್ತಾರೆ!

ಕಥೆ ಕೇಳುವುದಕ್ಕೂ ಇಷ್ಟ; ಕೇಳುವವರಿದ್ದರೆ ಹೇಳುವುದಕ್ಕೂ ಖುಷಿಕೊಡುವ ಸಂಗತಿ.

- Advertisement -

ಎಂಟುದಶಕಗಳ ಸಂನ್ಯಾಸಜೀವನ ನಡೆಸಿದ್ದ ಪೇಜಾವರಮಠದ ಪೂಜ್ಯ ವಿಶ್ವೇಶತೀರ್ಥ ಸ್ವಾಮಿಜೀ, ತಮ್ಮ ಸಾವಿರಾರು ಆಶೀರ್ವಚನ- ಪ್ರವಚನಗಳಲ್ಲಿ ಹೇಳಿದ ಕಥೆಗಳು ಸಾವಿರಾರು. ಅವೆಲ್ಲವೂ ಕೂಡ ಭಾರತೀಯ ಸಂಸ್ಕೃತಿ, ಪರಂಪರೆ, ಜನಜೀವನ, ಜೀವನಮೌಲ್ಯಗಳು, ಸದಾಚಾರಗಳನ್ನು ಸುಲಭವಾಗಿ ಸರಳವಾಗಿ ಪರಿಚಯಿಸುವ ಕಥೆಗಳು, ದೃಷ್ಟಾಂತಕಥೆಗಳು.

ಪೂಜ್ಯರು ಹೇಳಿದ ಕಥೆಗಳಲ್ಲೇ ತಮಗೆ ದೊರೆತಷ್ಟನ್ನು ಸಂಪಾದಿಸಿ, ಪುಸ್ತಕರೂಪದಲ್ಲಿ ತಂದಿದ್ದಾರೆ, ರಾಮಕುಂಜದ ಟಿ. ನಾರಾಯಣಭಟ್ಟರು. ‘ವಿಶ್ವಸಂದೇಶ: ಪೂರ್ವಾರ್ಧ, ಉತ್ತರಾರ್ಧ’, ವಿಶ್ವಕಥಾಕುಂಜ’ ಹೆಸರಿನ ಈ ಮೂರು ಪುಸ್ತಕಗಳಲ್ಲಿ ಆರುನೂರಕ್ಕೂ ಹೆಚ್ಚಿನ ಕಥೆಗಳಿವೆ. ಪುಟ, ಅರ್ಧಪುಟದಷ್ಟಿರುವ ಒಂದೊಂದು ಕಥೆಯೂ ಗಾತ್ರದಲ್ಲಿ ಚಿಕ್ಕದು; ಅದು ನಿರ್ವಹಿಸುವ ಪಾತ್ರದಲ್ಲಿ ಬಹಳ ದೊಡ್ಡದು.

- Advertisement -

ಅಜ್ಜ-ಅಜ್ಜಿಯರಿಗೆ, ತಾಯಿ-ತಂದೆಯರಿಗೆ, ಪ್ರಾಥಮಿಕ-ಪ್ರೌಢಶಾಲಾ ಶಿಕ್ಷಕರಿಗೆ, ವ್ಯಕ್ತಿತ್ವವಿಕಸನ ತರಬೇತುದಾರರಿಗೆ, ಭಾಷಣಕಾರರಿಗೆ ಮಾಹಿತಿಕಣಜವಾಗಿ_ ಕಥಾಕಣಜವಾಗಿ ಒದಗಿಬರುವ ಈ ಕೃತಿಗಳು ಸಾಮಾನ್ಯ ಓದಿಗೂ ಹೇಳಿಮಾಡಿಸಿದಂತಿವೆ! ಪುಟ್ಟಮಕ್ಕಳೂ ಕುತೂಹಲದಿಂದ ಓದುವಂತಿವೆ. ಮೂರನ್ನೂ ಓದಿ ಮುಗಿಸುವಾಗ ಪೂಜ್ಯ ಸ್ವಾಮಿಜೀಯವರ ಕಥಾಸಂಗ್ರಹವನ್ನು ಕುರಿತು ಬೆರಗು, ಅಚ್ಚರಿ ಉಂಟಾಗುವುದರಲ್ಲಿ ಆಶ್ಚರ್ಯವಿಲ್ಲ.

ಆಸಕ್ತರು ಈ ಮೂರೂ ಪುಸ್ತಕಗಳನ್ನು ಖರೀದಿಸಲು WhatsApp ಮಾಡಿ : 7483681708

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group