spot_img
spot_img

ಕವನ: ಜ್ಞಾನದ ಬೆಳಕು

Must Read

ಜ್ಞಾನದ ಬೆಳಕು

- Advertisement -

ಬುದ್ಧ ಪೂರ್ಣಿಮೆ ಬುದ್ಧ ಪೂರ್ಣಿಮೆ

ನಮ್ಮ ಜೀವನದ ಜ್ಞಾನ ಬೆಳಕು ಬುದ್ಧ ಪೂರ್ಣಿಮೆ
ಮಾನವೀಯತೆ ಶಾಂತಿ ಸಂದೇಶದ ಬುದ್ಧ ಪೂರ್ಣಿಮೆ
ಮಂದಸ್ಮಿತ ವದನ ಸಾಕಾರ ಮೂರ್ತಿ

ಕರುಣಾಮಯಿ ಸತ್ಯ ಬೋಧಕ
ಶಾಂತಿ ಸ್ಥಾಪಕ ಬುದ್ಧ
ಅರಸೊತ್ತಿಗೆಯ ತ್ಯಜಿಸಿ
ಬದುಕಿನ ಶಾಂತಿ ನೆಮ್ಮದಿ ಅರಸಿ ಬುದ್ಧನಾದ
ಜಗಕೆ ದಾರಿದೀಪವಾದ ಮಹಾನ್ ಚೇತನ
ಆಧ್ಯಾತ್ಮಿಕ ಪುರುಷ ಅಹಿಂಸಾ ತತ್ವ ಬೋಧಕ

- Advertisement -

ಮುದುಕ ಶವ ಕಂಡ ಕ್ಷಣ ಮರುಕ
ಜೀವನ ನಶ್ವರ ತತ್ವ ಅರುಹಿ
ಲೋಕ ಸಂಚಾರಗೈದ ಜ್ಞಾನ ದೀಪಕ
ಲುಂಬಿನಿವನದಿ ಜ್ಞಾನ ಬೆಳಕು ಕಂಡ ಸಾಧಕ
ಲೋಕಕಲ್ಯಾಣಾರ್ಥ ಸಂಚಾರಿ ಯಾಗಿ ಜೀವನಮಾರ್ಗ ಬೋಧಕ
ಜೀವನ ನಶ್ವರ. ಸತ್ಯ ಶಾಶ್ವತ

ಮನುಕುಲದ ಧರ್ಮದ ಅನುಪಾಲಕ
ಬೌದ್ಧ ಧರ್ಮದ ಸ್ಥಾಪಕ
ಸದ್ಭಾವನೆ, ಸತ್ಸಂಕಲ್ಪ, ಸದ್ವಚನ, ಸದ್ವರ್ತನೆ, ಸತ್‌ಶುದ್ಧಿ, ಸದಾಲೋಚನೆ, ಸದಾಂತರ್ಯ ಮತ್ತು ಸದಾಮೋದ ಎಂಬ ಎಂಟು ಸನ್ಮಾರ್ಗಗಳ ಪಾಲಕ
ಜನರಿಗೆ ಸದ್ಭಾವನಾ ಬದುಕ ತಿಳಿಸಿದ ಜ್ಞಾನದಾತ

ಪ್ರಾಣಿ ಹಿಂಸೆ, ನರಬಲಿ, ವರ್ಜಿಸಿದ ಅಹಿಂಸಾ ತತ್ವ ಪರಿಪಾಲಕ
ಪ್ರಾಣಿಗಳಿಗೂ ಜೀವವಿದೆ
ಜೀವ ತೆಗೆಯುವ ಹಕ್ಕು ನಮಗಿಲ್ಲ ಎಂದು ಸಂದೇಶ ಸಾರುತಲಿ ಪ್ರಾಣಿಗಳ ಪ್ರೀತಿಸಿ ಎಂದು ಸಾರಿದ ಜೀವಸಖ
ಹುಟ್ಟಿದ ದಿನವೂ ಒಂದೇ
ಜ್ಞಾನೋದಯವಾದ ದಿನವೂ ಒಂದೇ

- Advertisement -

ದ್ವೇಷ ಅಸೂಯೆ ನಿರ್ನಾಮ ಮಾಡಲು ಕರೆ ನೀಡಿ
ನೊಂದವರ ಬಾಳಿಗೆ ಬೆಳಕಾಗಿ
ಪ್ರೀತಿ ಚಿಲುಮೆಯ ಉಕ್ಕಿಸಿ
ಯಾವುದನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳದಿರಿ ಎಂದು ಅರುಹಿ
ನಿಜ ಪ್ರೀತಿಯ ಅಂತಃಕರಣದ
ಬೋಧಕ


ವೈ. ಬಿ. ಕಡಕೋಳ

(ಬುದ್ಧ ಪೂರ್ಣಿಮೆ ನಿಮಿತ್ತ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರ ಕವನ ಜ್ಞಾನದ ಬೆಳಕು ಕವನಕ್ಕೆ ರೇಖಾ ಮೊರಬ ಅವರು ರೇಖಾಚಿತ್ರವನ್ನು ನೀಡಿರುವರು)

- Advertisement -
- Advertisement -

Latest News

ಗುರ್ಲಾಪೂರ ಗ್ರಾಮಕ್ಕೆ ಸಂಸದೆ ಮಂಗಳಾ ಅಂಗಡಿ ಭೇಟಿ

ಗುರ್ಲಾಪೂರ- ಮೂಡಲಗಿ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಗುರ್ಲಾಪೂರ ಗ್ರಾಮಕ್ಕೆ ಇತ್ತಿಚೆಗೆ ಬೆಳಗಾವಿಯ ಲೋಕಸಭಾ ಸದಸ್ಯರಾದ ಶ್ರೀಮತಿ ಮಂಗಳಾ ಸುರೇಶ ಅಂಗಡಿ ಇವರು ಪ್ರಥಮ ಬಾರಿಗೆ ಭೇಟಿ...
- Advertisement -

More Articles Like This

- Advertisement -
close
error: Content is protected !!
Join WhatsApp Group