ರಕ್ಷಾಬಂಧನ
ಬಂಧನದಿಂದುಸಿದಾನಂದ ಜನ್ಮ ಜನ್ಮಾಂತರಗಳಿಂದ
ಅನವರತ ಮಧುರ ಸಂಬಂಧ
ಈ ಋಣಾನುಬಂಧll
ಗುರು ಬಂಧು ಬಳಗವೆಲ್ಲ
ಸತಿ ಸುತ ಸ್ನೇಹಿತರೆಲ್ಲ
ಜೀವನ ಯಾತ್ರೆಯಲಿ ಸಂದಿಸುವರೆಲ್ಲ
ಬಂಧನ ಮಂದಿರ ಕಟ್ಟುವರೆಲ್ಲll
ಹೊಸೆಯುವ ನೂಲಿನೆಳೆಯಲ್ಲ
ಬೆಸೆಯುವ ಲೋಹಗಳಲ್ಲ
ಹೃದಯಗಳ ಮಿಡಿತವೆಲ್ಲ
ಬಂಧನ ದೇವರ ಅನುಗ್ರಹವೆಲ್ಲ ll
ಬಂದು ಹೋಗುವ ಸಂಭ್ರಮವಲ್ಲ
ಅಗೋಚರ ಭಾವ ಬಂಧನವೆಲ್ಲ
ಅಗಣಿತ ಪ್ರೇಮ ಸಾಕ್ಷಾತ್ಕಾರವೆಲ್ಲ
ಈ ರಕ್ಷಾಬಂಧನ ಅನುಪಮವೆಲ್ಲll
ಶಿವಪ್ಪ ವ ಕಾಕೋಳ ಶಿಕ್ಷಕರು, ನೆಲೋಗಲ್ಲ
(ಎಸ್ವಿಕೆ ಸೂರಣಗಿ) 8970668017