ಎರಡು ಕವನಗಳು

Must Read

ಸಂಗಾತಿ
________

ನನ್ನ ನಿನ್ನ
ಬೆಸೆದವರು
ಅಲ್ಲ ಅಪ್ಪ ಅಮ್ಮ
ಬಂಧು ಬಳಗ
ಮೇಲಿರುವ
ಯಜಮಾನ
ಭಾಷೆ ಬರೆದನು
ಕೂಡಿ ನಡೆಯಲು
ಅರಿತು ಬಾಳಲು
ಮನವ ಅರಿಯಲು
ಜೀವ ಜೀವಕೆ
ನೀನೆನಗೆ
ಸವಿ ಸಂಗಾತಿ
_________

ನಾನು ಬೇವು
_______________

ನಾನು ಬೇವು
ನೀನು ಬೆಲ್ಲ
ಕಳೆವ ಕ್ಷಣವೇ
ಯುಗ ಯುಗಾದಿ

ನೋವು ಮರೆತು
ನಗೆಯ ಹರಿಸಿ
ಬಿಸಿ ಅಪ್ಪುಗೆ
ನವರಾತ್ರಿ

ನೀನು ಎಣ್ಣೆ
ನಾನು ಬತ್ತಿ
ಪ್ರೀತಿ ಒಲವೇ
ದೀಪಾವಳಿ

ನೋವು ಮರೆತು
ನಗೆಯ ಹರಿಸಿ
ಸ್ನೇಹ ಒಲವು
ಸಂಕ್ರಾಂತಿ

ಮೈ ಮುರಿದು
ಹೊಲದಿ ದುಡಿವ
ನಮ್ಮ ಹೆಜ್ಜೆ
ನವರಾತ್ರಿ

ಹುಟ್ಟು ಸಂಭ್ರಮ
ಸಾವು ಸೂತಕ
ಬದುಕು ನಿತ್ಯ
ಮಹಾನವಮಿ
_____________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group