spot_img
spot_img

ಕವನ: ನಮ್ಮ ಹೆಮ್ಮೆಯ ಸೈನಿಕರು

Must Read

- Advertisement -

ನಮ್ಮ ಹೆಮ್ಮೆಯ ಸೈನಿಕರು

ತಂದೆ ತಾಯಿ ಹೆಂಡತಿ ಮಕ್ಕಳು
ಅಕ್ಕ ತಂಗಿ ಅಣ್ಣ ತಮ್ಮರು
ಸ್ನೇಹಿತರು ಬಂಧು ಬಾಂಧವರು
ಎಲ್ಲ ಸಂಬಂಧಗಳ ತೊರೆದು ಹೋದವರು
ತಾಯ್ನೆಲದ ರಕ್ಷಣೆಗೆ ಕಟಿಬದ್ದರಾದವರು //೧//

ಜಾತ್ರೆ ನಿಬ್ಬಣ ಔತಣ ಕೂಟದಿ ನಾವು
ಸಂಭ್ರಮ ಸಡಗರದಿರುವೆವು ನಾವು
ಭಾರೀ ಭಕ್ಷ್ಯಗಳ ಸವಿವೆವು ನಾವು
ಇದೆಲ್ಲ ತ್ಯಾಗವ ಮಾಡಿರುವರು ಅವರು
ಅವರೇ ನಮ್ಮ ಹೆಮ್ಮೆಯ ಸೈನಿಕರು //೨//

ಭಯವೆಂಬ ಪದದ ಅರ್ಥ ತಿಳಿಯದವರು
ಸುಖವೆಂಬ ಪದ ತ್ಯಜಿಸಿ ನಿಂತವರು
ಶರಣಾಗತರ ಜೀವ ಧಾತರು
ಮೋಸಗಾರರಿಗೆ ಯಮ ಧೂತರು
ನಮ್ಮ ಹೆಮ್ಮೆ ನಮ್ಮ ಸೈನಿಕರು //೩//

- Advertisement -

ವಾಯು ನೆಲ ಜಲದಿ ಸೈನಿಕರು
ಏನೇ ಬಂದರೂ ಮುನ್ನುಗ್ಗುವರು
ಪ್ರವಾಹದಿ ಮೊದಲು ನೆಗೆಯುವರು
ಆಕಾಶದಿ ಹಾರುವರು ಪಾತಾಳದಿ ಧುಮುಕುವರು
ಕಾಯಕ ಒಂದೇ ಉಸಿರಾಗಿಸಿಕೊಂಡವರು //೪//

ಪ್ರತೀ ದಿನ ಇರೆ ಗುಂಡಿನ ಚಕಮಕಿ
ಇವರಿಗಿಲ್ಲ ತಮ್ಮ ಜೀವದ ಕಾಳಜಿ
ಶತೃಗಳ ಸೆದೆ ಬಡೆವದೊಂದೇ ಹಪಹಪಿ
ನೀಚರ ಕತ್ತ ಸಿಳುವದೇ ದಿನಂಪ್ರತಿ
ಇವರೇ ನಮ್ಮ ಕಾಶ್ಮೀರಿ ಕಲಿಗಳು//೫//

ನುಸುಳು ಕೋರರಿಗೆ ಹೊಂಚನು ಹಾಕುವರು
ಉಗ್ರಗಾಮಿಗಳ ಹೊಸಕಿ ಹೂಳುವರು
ಕೊರೆಯುವ ಹಿಮದಿ ಹುದುಗಿ ಹೋದರೂ
ತಾಯ ರಕ್ಷಣೆಗೆ ಪುಟಿದೆದ್ದು ನಿಲ್ಲುವರು
ನಮ್ಮ ಸೀಯಾಚಿನ್ ಸಿಂಹಗಳು //೬//

- Advertisement -

ಶತ್ರುಗಳ ಚೆಂಡಾಡುವರು
ತಂಟೆಕೋರರ ಹುಟ್ಟಡಗಿಸುವರು
ಕ್ಯಾತೆ ತಗೆದವರ ಹೂತು ಹಾಕುವರು
ಭಾರತಾಂಬೆಯ ಅಪ್ಪಿಕೊಂಡಿಹರು
ಅವಳನಾರಿಗೂ ಬಿಟ್ಟುಕೊಡದವರು //೭//

ನಡುಗಿತು ಶತ್ರುಗಳ ಎದೆ ಗುಂಡಿಗೆ
ನಲುಗಿದರು ನಮ್ಮವರ ಹೆಸರಿಗೆ
ಕೀರ್ತಿ ತರುವರು ತವರಿಗೆ
ವಿಜಯ ಕಿರೀಟ ಇಡುವರು ಮಾತೆಗೆ
ಜಗದಿ ಹೆಸರಾದವರು ನಮ್ಮ ಸೈನಿಕರೆ //೮//

ಸೈನಿಕ ನಿನ್ನ ನೆನೆದಾಗ ನಮ್ಮ ಮನ
ರೋಮಾಂಚನ ಗೊಳ್ಳುವದು ಕಣಕಣ
ನಿಮಗಿದೋ ಆತ್ಮಾಭಿಮಾನದ ವಂದನೆ
ದೇವನಲ್ಲಿ ಬೇಡುವೆವು ಕಂದನೇ
ಕನಸಲೂ ಸೋಲೆಂಬುದು ಸುಳಿಯದಿರಲೆಂದು //೯//

ಭಾರತಾಂಬೆಯ ಹೆಮ್ಮೆಯ ಪುತ್ರರು
ಮಾತೆಯ ರಕ್ಷಣೆಗಾಗಿ ಜೀವ ತೆತ್ತರು
ಹರಿಯಿತು ಕೋಡಿ ಕೋಡಿಗಳಲಿ ನೆತ್ತರು
ಕೊನೆಗೂ ಮಾತೆಗೆ ವಿಜಯ ಕಿರೀಟವನಿತ್ತರು
ಅವರೇ ನಮ್ಮ ಕಾರ್ಗಿಲ್ ವೀರರು //೧೦//


ಶ್ರೀಮತಿ ಜ್ಯೋತಿ ಸಿ ಕೋಟಗಿ
ಬಿ ಆರ್ ಪಿ ಚ.ಕಿತ್ತೂರು
ಬೆಳಗಾವಿ ೯೯೮೦೮೦೧೯೯೩

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group