spot_img
spot_img

ಋತುಗಳ ರಾಜ ವಸಂತನ ಆಗಮನದ ಸೂಚನೆ: ಯುಗಾದಿ

Must Read

- Advertisement -

ಯುಗ ಯುಗಾದಿ ಕಳೆದ ರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ.

ಎಂಬ ಬೇಂದ್ರೆಯವರ ಗೀತೆಯ ಸಾಲುಗಳಲ್ಲಿ ಯುಗಾದಿಯ ಬರುವಿಕೆ, ಅದರಲ್ಲಿನ ಸಡಗರ ವರ್ಣನಾತೀತ. ಕಾರ್ಯಕ್ರಮಗಳ ರಾಜ ವಸಂತನ ಆಗಮನದ ಸೂಚನೆಯ ಜೊತೆಗೆ ಯುಗಾದಿಯು ಎಲ್ಲ ಹಬ್ಬಗಳಿಗೂ ನಾಂದಿಯಾಗಿ ಪ್ರತಿ ಸಂವತ್ಸರದ ಚೈತ್ರ ಮಾಸ ಶುಕ್ಲಪಕ್ಷದ ಪಾಡ್ಯಮಿ ತಿಥಿಯಂದು ಆಚರಿಸಲ್ಪಡುವ ಹಬ್ಬ ಯುಗಾದಿ.

- Advertisement -

ರಾಮಾಯಣ ಕಾಲಕ್ಕಿಂತ ಮೊದಲು ಉತ್ತರಾಯಣದಿಂದ ಹೊಸ ವರ್ಷದ ಗಣನೆ ಆರಂಭವಾಯಿತು. ಶ್ರೀರಾಮನು ಅವತರಿಸಿದ ಮಾಸ ಹಾಗೂ ಪಟ್ಟಾಭಿಷೇಕ ವಾದ ದಿನವೂ ಕೂಡ ಚೈತ್ರ ಮಾಸ. ವಾರ್ಷಿಕ ರಾಜ ವಸಂತನ ಆಗಮನವೂ ಚೈತ್ರಮಾಸದಿಂದ ಇದು ಚಿತ್ತಾ ನಕ್ಷತ್ರ ಪ್ರಧಾನವಾದ ಮಾಸ. ಈ ದಿನದಂದೇ ಪ್ರಜಾಪತೀ ಬ್ರಹ್ಮನು ಈ ಪ್ರಪಂಚದ ಸೃಷ್ಟಿಯನ್ನು ಪ್ರಾರಂಭಿಸಿದನೆಂದೂ ಪುರಾಣಗಳಿಂದ ತಿಳಿದು ಬರುತ್ತದೆ. ಕ್ರಿ . ಶ . ಆರನೆಯ ಶತಮಾನದಲ್ಲಿ ವರಾಹ ಮಿಹಿರಾಚಾರ್ಯನು ವಸಂತ ವಿಷುವತ್ ಅಶ್ವಿನಿಯಲ್ಲಿ ಸಂಭವಿಸುವುದನ್ನು ಪರಿಗಣಿಸಿ ಚೈತ್ರಮಾಸದಿಂದ ಹೊಸ ವರ್ಷದ ಗಣನೆ ಪ್ರಾರಂಭದನೆಂದು ಹೇಳಿದರು.

ಭಾರತೀಯರಾದ ಹೆಸರು ಚೈತ್ರಶುದ್ದ ಪಾಡ್ಯ , ಮಿ ವರ್ಷದ ಮೊದಲ ದಿನ . ಯುಗಾದಿ ಎಂದರೆ ( ಯುಗಸ್ಯ ಆದಿ ) ಯುಗದ ಆರಂಭ .. ಇದು ಕಾಲ ಸೂಚಕ .​ ಯುಗಗಳು ನಾಲ್ಕು : ಕೃತಯುಗ ತ್ರೇತಾಯುಗ , ದ್ವಾಪರ ಯುಗ , ಕಲಿಯುಗ , ಹುಟ್ಟಿದ ಹಗಲು ರಾತ್ರಿ ಎರಡೂ ಸಮವಾಗಿರುವ ಈ ದಿನ ಸೌರಮಾನದ ಲೆಕ್ಕದಂತೆ ಚೈತ್ರಮಾಸದ ವಿಷುವತ್ ಸಂಕ್ರಮಣ ದಿನವು ಆಚರಿಸಲ್ಪಡುವ ದರಿಂದ ಇದನ್ನು ಹೊಸ ವರ್ಷವೆಂದು ಕರೆದರು . ಈ ದಿನ ದ್ವಾಪರ ಯುಗವು ಕಳೆದು ಕಲಿಯುಗವು ಪ್ರಾರಂಭವಾದ ದಿನ .

ಹಾಗಾದರೆ ಇದನ್ನು ಹೇಗೆ ಆಚರಿಸಬೇಕು?

- Advertisement -
  1. ಈ ದಿನ ಬೆಳಿಗ್ಗೆ ಸೂರ್ಯೋದಯಕ್ಕಿಂತ ಮುಂಚಿತವಾಗಿ ಏಳಬೇಕು. ಏಳುವಾಗ ಬಲ ಮಗ್ಗುಲಾಗಿ ಏಳುತ್ತ ತಮ್ಮ ಇಷ್ಟ ದೇವರನ್ನು ಕುಲದೇವರನ್ನೂ ಮನಸ್ಸಿನಲ್ಲಿ ಸ್ಮರಿಸಿ ವಂದಿಸಬೇಕು. ನಂತರ ಹಿರಿಯರಿಗೆ ತಂದೆ – ತಾಯಿಗಳಿಗೆ ಗುರುಗಳಿಗೆ ನಮಸ್ಕರಿಸ ಬೇಕು.
  2. ತೈಲದಿಂದ ಅಭ್ಯಂಜನ ಸ್ನಾನವನ್ನು ಮಾಡಬೇಕು. ನೀರಿನಲ್ಲಿ ಬೇವಿನ ಎಲೆಯ ಎಸಳುಗಳನ್ನು ಹಾಕಿ ಸ್ನಾನ ಮಾಡುವರು.
  3. ಸ್ನಾನವಾದ ನಂತರ ಹೊಸ ಬಟ್ಟೆಗಳನ್ನು ಧರಿಸಿಕೊಂಡು ಪೂಜೆಯನ್ನು ಪೂರೈಸಿ ಪಂಚಾಂಗ ಓದುವವರು ಅದನ್ನು ಪೂಜಿಸಬೇಕು.
  4. ಇಂದು ಬೇವಿನ ಚಿಗುರೆಲೆಗಳನ್ನು ನೈವೇದ್ಯ ಮಾಡಿ ಪ್ರಸಾದ ರೂಪದಲ್ಲಿ ಸ್ವೀಕರಿಸಬೇಕು. ಬೇವಿನ ಎಲೆ ಕಹಿ. ಪಿತ್ತಕೋಶದ ಸಂರಕ್ಷಣೆಗೆ ಬೇವಿನ ರಸ ಸಹಾಯಕಾರಿ. ಇದನ್ನು ಬೆಲ್ಲದೊಂದಿಗೆ ಸೇವಿಸುವುದರಿಂದ ಪಿತ್ತ ಶಮನ ಮಾಡಬಹುದು . ಇನ್ನು ಯುಗಾದಿಯ ನಂತರದ ದಿನಗಳಲ್ಲಿ ಸೂರ್ಯನ ಶಾಖದಿಂದ ಭೂಮಿಯ ತಾಪವು ದಿನೇ ಹೆಚ್ಚಾಗುತ್ತಿದೆ .​​ ಇದರಿಂದ ಮನುಷ್ಯನ ಶರೀರಕ್ಕೆ ಉಷ್ಣ ಸಂಬಂಧಿ ಉಪದ್ರವಗಳು ಉಂಟಾಗುತ್ತವೆ. ಬೇವಿನ ಎಲೆ ದಿನವೂ ಬಳಕೆ ಮಾಡುವುದರಿಂದ ಉಷ್ಣ ಸಂಬಂಧಿ ಉಪದ್ರವಗಳನ್ನು ಕಡಿಮೆ ಮಾಡಿಕೊಳ್ಳಬಹುದು.
  5. ಮಧ್ಯಾಹ್ನ ಹೋಳಿಗೆ, ಪಾಯಸಗಳಂತಹ ಸಿಹಿ ಭಕ್ಷ್ಯಗಳನ್ನು ಮಾಡಿ ಬಂಧುಬಳಗದವರೊಂದಿಗೆ ಸಂತೋಷದಿಂದ ಊಟ ಮಾಡಬೇಕು.
  6. ಯುಗಾದಿಯಂದು ಪಂಚಾಂಗ ಶ್ರವಣ ಮಾಡುವುದರಿಂದ ಹೆಚ್ಚಿನ ಪ್ರಯೋಜನವಿದೆ . ಪ್ರತಿಯೊಂದು ಮಾಸದ ಫಲ , ರಾಶಿ ಫಲ . ಮಳೆ – ಬೆಳೆ ಮೊದಲಾದ ವಿಚಾರಗಳನ್ನು ಮುಂಚಿತವಾಗಿಯೇ ತಿಳಿದುಕೊಳ್ಳಲು ಸಾಧ್ಯ.
  7. ಪಾಡ್ಯಮಿಯ ಅನಂತರ ಬಿದಿಗೆಯ ದಿನವೂ ಕೂಡ ಸ್ನಾನ, ಪೂಜೆ, ನೈವೇದ್ಯದಿಗಳನ್ನು ಸಂಜೆಯ ಸಮಯದಲ್ಲಿ ಚಂದ್ರ ದರ್ಶನ ಮಾಡಿ ಹಿರಿಯರಿಗೆ ನಮಸ್ಕರಿಸುವುದು. ಶುಭ ಹಾರೈಸುವುದು ಇಲ್ಲಿದೆ.

ಗುಜರಾತ್, ಮಹಾರಾಷ್ಟ್ರಗಳಲ್ಲಿ ಯುಗಾದಿ ಯಂದು ಮನೆ ಮನೆಯ ಮುಂದೆ ಪಾಡ್ಯದ ಗುಡಿ ( ಧ್ವಜ ) ಕಟ್ಟುವ ಮೂಲಕ ಆಚರಿಸು ತ್ತಾರೆ.ತಮಿಳುನಾಡಿನಲ್ಲಿ ಇದನ್ನು ಚಿತ್ರವಿಷು ಎಂದು ಕರೆಯುತ್ತಾರೆ. ಇರಾನಿಯನ್ನರು ನೌರೋಜ್ ಎಂದೂ ಆಚರಿಸುತ್ತಾರೆ.      

ಮಹಾಭಾರತದಲ್ಲಿಯೂ ಇದರ ಬಗ್ಗೆ ಉಲ್ಲೇಖವಿದೆ .​ ಭಗವಾನ್ ಶ್ರೀ ಕೃಷ್ಣನು ತನ್ನ ಲೀಲಾ ಮಾನುಷ ದೇಹವನ್ನು ದ್ವಾರಕೆಯ ಸಮೀಪದ ಪುಣ್ಯಕ್ಷೇತ್ರ ವಾದ “ಪ್ರಭಾಸ“ ದಲ್ಲಿ ತ್ಯಜಿಸಿದ ದಿನ. ಉತ್ತರ ಭಾರತದವರು ವಿಕ್ರಮದ ಶಕದ ಆರಂಭದ ಅಂದರೆ ಕಾರ್ತಿಕ ಶುದ್ದ ಪ್ರಥಮದಂದು ಯುಗಾದಿ ಆಚರಿಸಿದರೆ , ಶಾತವಾಹನ ಅರಸರ ಕಾಲದಲ್ಲಿ ತಮ್ಮ ವಿಜಯದ ಸಂಕೇತವಾಗಿ ಶಾಲಿ ವಾಹನ ಶಕೆ ಆರಂಭಿಸುವ ಮೂಲಕ ಚೈತ್ರ ಶುದ್ದ ಪ್ರಥಮವನ್ನು ಆಚರಿಸಿದ್ದು ಇತಿಹಾಸದಿಂದ ತಿಳಿದು ಬರುತ್ತದೆ . ದಕ್ಷಿಣ ಭಾರತದವರು ಚೈತ್ರ ಶುದ್ದ ಪ್ರಥಮೆಯೆಂದು ಯುಗಾದಿಯನ್ನು ಆಚರಿಸಿಕೊಂಡು ಬರುತ್ತಿದ್ದಾರೆ . ಸಿಂಧಿ ಜನರೂ ಕೂಡ ಚೇತ್ – ಈ – ಚಾಂದ್ ಆಸ್ಸಾಮಿನಲ್ಲಿ “ ಬಿಹು “ಶಿಖ್ಖರು“ ಬೈಸಾಕಿ “ಮಣಿಪುರ ದಲ್ಲಿ” ಚೈರೋಬಾ“ ಬಂಗಾಳಿಗರು “ಶುಬೋ ನಬೋ ಬರ್ಶೋ“ ಎಂದು ಆಚರಿಸುತ್ತಾರೆ.

ಎರಡು ತಿಥಿಗಳು, ಎರಡು ವಾರಗಳು, ಎರಡು ನಕ್ಷತ್ರಗಳು, ಎರಡು ಪಕ್ಷಗಳು, ಎರಡು ಮಾಸಗಳು, ಎರಡು ಋತುಗಳು, ಎರಡು ಅಯನಗಳು, ಮತ್ತು ಎರಡು ಸಂವತ್ಸರಗಳು ಸೇರುವ ಕಾಲವೇ ಸಂಧಿಕಾಲ ಇರುತ್ತದೆ. ಯುಗಾದಿಯಂದು ಇವೆಲ್ಲವೂ ಸೇರಿ ಎರಡು ಚಂದ್ರಮಾನ ಸಂವತ್ಸರಗಳು ಸಂಧಿಸುವ ಮಹಾಪರ್ವ ಕಾಲದಿಂದ ಯುಗಾದಿ ಅತ್ಯಂತ ಪ್ರಶಸ್ತವಾದ ಪರ್ವಕಾಲ . ವಿಶೇಷವಾಗಿ ಮಾರ್ಚ್ ತಿಂಗಳಿನಲ್ಲಿ ಬರುವ ಯುಗಾದಿಯು ಅಧಿಕ ಮಾಸ ಬಂದಾಗ ಒಂದು ತಿಂಗಳಿನಷ್ಟು ಮುಂದೆ ಹೋಗುತ್ತದೆ.

ಯುಗಾದಿಯಂದು ರತ್ನ ಪಕ್ಷಿಯನ್ನು ನೋಡಿದರೆ ಶುಭವಾಗುತೈತೆ ಎಂಬ ನಂಬಿಕೆಯಿಂದ ಅನೇಕರು ಬೆಳ್ಳಂಬೆಳಿಗ್ಗೆ ಎದ್ದು ಈ ಪಕ್ಷಿ ನೋಡಲು ಹೊರಟವರು . ಅಷ್ಟೇ ಅಲ್ಲ ಈ ದಿನ ಚಂದ್ರನ ನೋಡಿದರೆ ಪವಿತ್ರವೆಂಬ ಭಾವನೆ. ಅಂದು ಕಾಣುವ ಚಂದ್ರನಲ್ಲಿಯ ಬಿಂಬದ ಗೆರೆಗಳ ಮೂಲಕ ವರ್ಷದ ಆಯ – ವ್ಯಯ ಮತ್ತು ಮಳೆ ಬೆಳೆಗಳನ್ನು ನಿರ್ಧರಿಸುವರು.

ಕೆಲವು ಹಳ್ಳಿಗಳಲ್ಲಿ ಹೊನ್ನೆತ್ತು ಹಿಡಿಯುವ ಕಾರ್ಯಕ್ರಮ ನಡೆಯುವರು. ಹೊನ್ನೆತ್ತು “ ಎಂದರೆ ಚೆನ್ನಾಗಿ ಮೆಯಿಸಿದ ಒಂದು ಎತ್ತಿನ ಕೊಂಬಿಗೆ “ ಐದಣ “ ಬಟ್ಟೆಯಿಂದ ಕಟ್ಟಿ , ಆ ಎತ್ತಿನ ಹಗ್ಗ, ಮೂಗುದಾರ ಬಿಚ್ಚಿ ಎಲ್ಲರ ಸಮ್ಮುಖದಲ್ಲಿ ಬೆದರಿಸಿ ಹೋಗುತ್ತಾರೆ .

ಯಾರು ಇಂಥ ಸಂದರ್ಭದಲ್ಲಿ ಹಿಡಿದು ನಿಲ್ಲಿಸುವರೋ ಅವರಿಗೆ ಕೊಡಿಗೆ ಕಟ್ಟಿದ್ದ “ ಐದಣ ” ನೀಡುವ ಜೊತೆಗೆ ಬಹುಮಾನ ಕೂಡ ನೀಡುವ ಪದ್ದತಿ ಇದೆ.​​ ರೈತರು ಇಡೀ ವರ್ಷದಲ್ಲಿ ಯಾವ ಬೆಳೆ ಚೆನ್ನಾಗಿ ಬರುತ್ತದೆ ಎಂದು ತಿಳಿದುಕೊಳ್ಳಲು ಹಬ್ಬ ಈ ಒಂದು ವಾರ ಇರುವಾಗಲೇ ಮುಂಚಿತವಾಗಿ ಬೀಜಗಳನ್ನು ಹಾಕಿ ಅವುಗಳಿಗೆ ನೀರುಣಿಸಿ ಗಾಳಿ ಬಿಸಿಲು ಬರುವ ಸ್ಥಳದಲ್ಲಿ ಇಡುತ್ತಾರೆ ಯಾವ ಸಸಿಗಳು ಈ ಕಾಲಕ್ಕೆ ಚೆನ್ನಾಗಿ ಬೆಳೆದಿವೆಯೋ ಅವರು ತಮ್ಮ ಹೊಲ ಗದ್ದೆಗಳಲ್ಲಿ ಬಿತ್ತನೆ ಮಾಡುವ ಸಂಪ್ರದಾಯವೂ ಕಡೆಗಳಲ್ಲಿದೆ. ಇಷ್ಟೇ ಅಲ್ಲ ಯುಗಾದಿ ದಿನದಂದು ರೈತರು ತಮ್ಮ ಹೊಲ ಗದ್ದೆಗಳಿಗೆ ಹೋಗಿ ಐದು ಸುತ್ತು ಹರಗಿ ಬರುವ ಜೊತೆಗೆ ಆ ದಿನ ಸಂಜೆ ತಮ್ಮ ಗ್ರಾಮ ದೇವತೆಗಳ ದೇವಸ್ಥಾನಕ್ಕೆ​​​ ತೆರಳಿ ಪೂಜೆ ಸಲ್ಲಿಸಿ ವರ್ಷದ ಸುಖ ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸುವರು .

ಬಡವ ಬಲ್ಲಿದರೆಂಬ ಭೇದ – ಭಾವವಿಲ್ಲದೇ ಈ ಹಬ್ಬಕ್ಕೆ ಮನೆಗಳಿಗೆ ಸುಣ್ಣ – ಬಣ್ಣ ಬಳಿಸಿ. ಮನೆಯ ಹಾಸಿಗೆಗಳನ್ನೆಲ್ಲ ಸ್ವಚ್ಛಗೊಳಿಸಿ ಮಡಿ ಮಾಡಿ ಮನೆಯ ಬಾಗಿಲಿಗೆ ಮಾವಿನ ತಳಿರು ತೋರಣಗಳನ್ನು ಕಟ್ಟಿ ಜಾನುವಾರುಗಳನ್ನು ತೊಳೆದು ಅವುಗಳ ಕೊರಳಿಗೆ ಗೆಜ್ಜೆ ಕಟ್ಟುವ ಮೂಲಕ ಯುಗಾದಿ ಆಚರಿಸಲು ಸಿದ್ದತೆ ಮಾಡಿಕೊಳ್ಳುವ ವರು. ಯುಗಾದಿಯ ಮೂರನೆಯ ದಿನ ವರ್ಷ ತೊಡಕು ಎಂದು ಆಚರಿಸುವ ಸಂಪ್ರದಾಯ ಕೆಲವೆಡೆ ಇದೆ. ಈ ದಿನ ಏನು ಮಾಡುತ್ತಾರೋ ಅದೇ ಇಡೀ ವರ್ಷ ನಡೆದು ಬರುತ್ತದೆ ಎಂಬ ನಂಬಿಕೆಯಿಂದ ಈ ದಿನ ಕಾರ್ಯ ಮಾಡಿದರೆ ವರ್ಷವಿಡೀ ಒಳ್ಳೆಯದಾಗಲಿ ಎಂದು ಒಳ್ಳೆಯ ಕೆಲಸ ಮಾಡುತ್ತಾರೆ.


ವೈ.ಬಿ.ಕಡಕೋಳ. ಸಂಪನ್ಮೂಲ ವ್ಯಕ್ತಿಗಳು ಮುನವಳ್ಳಿ ತಾ: ಸವದತ್ತಿ ಜಿ: ಬೆಳಗಾವಿ

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group