spot_img
spot_img

ತಂಬಾಕು ರಹಿತ ದಿನದ ಕವನಗಳು

Must Read

- Advertisement -

ತಂಬಾಕು ನಿಷೇಧ ಜಾಗೃತಿ

ತಂಬಾಕು ಸೇವನೆ ತರುತ್ತದೆ
ನಾನಾ ರೀತಿಯ ಕಾಯಿಲೆ

ಬೀಡಿ ಸಿಗರೇಟು ಹುಕ್ಕಾ
ನಿಲ್ಲಿಸುತ್ತದೆ ಉಸಿರನ್ನು ಪಕ್ಕಾ
ಇವುಗಳ ಸೇವನೆಯಿಂದ ಶ್ವಾಸಕೋಶ ಕ್ಯಾನ್ಸರ್ ಪಕ್ಕಾ

ನೀವಲ್ಲದೆ ನಿಮ್ಮ ಕುಟುಂಬಕ್ಕೂ ಸುತ್ತಲಿನವರಿಗೂ ಕಾಯಿಲೆ ಪಕ್ಕಾ
ಇದು ಮೆದುಳಿಗೂ ತರುತ್ತದೆ ಹಾನಿ
ಅದಕ್ಕಾಗಿ ತಂಬಾಕು ಸೇವನೆ ಬಿಟ್ಟುಬಿಡಿ

- Advertisement -

ಇದು ಗಂಟಲು ಬಾಯಿ ಶ್ವಾಸಕ್ಕೂ ತರುತ್ತದೆ ಕ್ಯಾನ್ಸರ್
ಬಿಪಿ ಷುಗರ್ ಅಲ್ಲದೆ
ದೇಹಕ್ಕೂ ತರುತ್ತದೆ ಸ್ಟ್ರೋಕ್

ಬೀಡಿ ಸಿಗರೇಟ್ ಹುಕ್ಕಾ ಗುಟ್ಕಾ ಜರದಾ ದೂರವಿಡೋಣ
ನಮ್ಮ ಸುತ್ತಲಿನವರಿಗೂ
ಜಾಗೃತಿ ಮೂಡಿಸೋಣ
ತಂಬಾಕಿನಿಂದ ಮುಕ್ತರಾಗೋಣ
ಉತ್ತಮ ಆರೋಗ್ಯ ಪಡೆಯುವಂತಾಗೋಣ

ಪಾತಮುತ್ತಕಹಳ್ಳಿ ಮು.ಚಲಪತಿಗೌಡ(ಪಾ.ಮು.ಚ.)ಸಾಹಿತಿ ಚಿಕ್ಕಬಳ್ಳಾಪುರ

- Advertisement -

ಚುಟುಕು

ಮಾಡಬೇಡಿರಿ ಅತಿಯಾದ ದೂಮಪಾನ
ಅದರಿಂದ ಬೇಗಬರುತ್ತದೆ ಸಾವಿಗೆ ಆಹ್ವಾನ
ಉಸಿರಾಟಕ್ಕೆ ಬಹಳ ತೊಂದರೆಯಾಗುತ್ತದೆ
ಹೃದಯ ಸ್ಥಂಭನವಾಗುವ ಸಂಭವವಿರುತ್ತದೆ

ಬೋರೇಗೌಡ ಅರಸೀಕೆರೆ


ಚುಟುಕು

“ನಾಶ ಲೋಕದಿಂದ ಹೊರ ಬನ್ನಿ
ತಂಬಾಕು ನಮ್ಮ ವಿನಾಶಿ
ಸಮಾಜದ ಒಳಿತಿಗೆ ಶ್ರಮಿಸಿ
ಆಗುವ ದುಷ್ಪರಿಣಾಮ ದಿಟ್ಟಿಸಿ
ತಂಬಾಕು ಮುಕ್ತ ದೇಶವಾಗಿಸಿ……..

” ಆರೋಗ್ಯ ಮತ್ತು ನೈರ್ಮಲ್ಯ ನಮ್ಮೆಲ್ಲರ ಹೊಣೆ ಎಂಬುದನ್ನು ಅರಿತು ಬಾಳೋಣವೇ”……

ರೇಣುಕ.ಶಿವಪ್ಪ
ಶಿವಮೊಗ್ಗ


ಹೀಗೊಂದು ಪ್ರಾರ್ಥನೆ

ತಂಬಾಕು ಸೇವನೆಯೆಂಬುದು
ದುಶ್ಚಟವು ಮನುಜರಿಗೆ
ನಮ್ಮ ಶ್ವಾಸಕೋಶಕ್ಕೆ ಅದುವೇ
ಮಹಾ ಮಾರಕವು ನೋಡಾ
ಆರೋಗ್ಯ ಭಾಗ್ಯವೆಂಬುದು ಅವಶ್ಯವಿದೆ ಎಲ್ಲರಿಗೆ
ಹೊಗೆಸೊಪ್ಪು ಸೇವನೆಯ
ನೀವ್ ಮಾಡದಿರಿ ಎಂದೂ
ಬೀಡಿ ಸಿಗರೇಟು ಗಳು ಕೆಟ್ಟ
ಚಟವೆಂದರಿತು ಬಿಟ್ಟು ಬಿಡಿ
ಈಗಲೇ ಪಣತೊಟ್ಟು ನಿಮ್ಮ
ಆರೋಗ್ಯ ರಕ್ಷಣೆಗೆಂದು

ಮ.ಗ.ಹೆಗಡೆ.ಮುತ್ಮುರ್ಡು
ಜಿಲ್ಲಾ ಅಧ್ಯಕ್ಷರು ಕರುನಾಡು ಸಾಹಿತ್ಯ ಪರಿಷತ್ತು ಚಿಕ್ಕಬಳ್ಳಾಪುರ ಜಿಲ್ಲೆ

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group