Monthly Archives: October, 2024

ಅಣಕವಾಡು : ಮದನಾರಿ ಸತಿ ರೇಣುಕೆ

ಮದನಾರಿ ಸತಿ ರೇಣುಕ ಮದ‌ವೇರಿದ ತುಂಬಿದ ತನು ತಂದಳು ಸತಿ ರೇಣುಕೆ ಮನೆಮುಂದಿನ ಅಂಗಳದಲಿ ಕಸಬಳಿದಳು‌ ಬಳಲಿಕೆ ಏದುಸಿರನು‌ ಬಿಡುಬಿಡುತಲಿ ನೀರನು ಚಳೆಹೊಡೆದಳು ಆಯಾಸದಿ ಬಾಗುತ್ತಲಿ ರಂಗೋಲಿಯ ಬರೆದಳು ಮಹಾಮನೆಯ ಮಹಾದೇವಿ ಮಹಾಕಾಯ ಹೊತ್ತಳು ಬೇಸರದಲಿ ಬುಸುಗುಡುತಲಿ ನಿಟ್ಟುಸಿರನು‌ ಬಿಟ್ಟಳು ಹಾದಾಡುವ ಹೊಸತಿಲಲ್ಲಿ ಬಂದಳು ಹೊಯ್ದಾಡುತ ಮನೆಬಾಗಿಲ ತುಂಬ ತಾನೆ ನಿಂದಳು ತುಳುಕಾಡುತ ಬಂಗಾರದ ಆಭರಣ‌ವ ಮೈಯ್ಯತುಂಬ ತೊಟ್ಟಳು ಇಲಕಲ್ಲಿನ ಕೈಮಗ್ಗದ ಭಾರಿಸೀರೆ ಉಟ್ಟಳು ಬಿಳಿಬಣ್ಣದ ಪರಿಮಳ ಪುಡಿ ಬಳಿದಳು ಚೆಲುವದನಕೆ ದಟ್ಟವಾದ ಕೆಂಬಣ್ಣವ ಲೇಪಿಸಿದಳು ಅಧರಕೆ ಸಿಂಗರಿಸಿದ ಮೈಸೂರಿನ ಮದದಾನೆಯ ತೆರದಲಿ ಬೈಗು ವಾಯು ವಿಹಾರಕ್ಕೆ ಹೊರಹೊರಟಳು ಜವದಲಿ ದಪ್ಪ‌ಮೈಯ್ಯ ಬಳುಕಿಸುತ್ತ ಮಂದಗಮನಿ ನಡೆದಳು ಸೊಂಡಿಲಗೈ ತಿರುಗಿಸುತ್ತ ಸಾವಕಾಶ...

ಸುಯೇಜ್ ಕಾಲುವೆ ಕುರಿತ ವಿಷಯ ಮಂಡನೆಯಲ್ಲಿ ತೇಜಸ್ವಿನಿ ದ್ವಿತೀಯ ಸ್ಥಾನ

ಇತ್ತೀಚೆಗೆ ಹರಿಯಾಣಾದಲ್ಲಿ ಸುಯೇಜ ಕಾಲುವೆ ಸಂಪರ್ಕ ಕಲ್ಪಿಸುವ ದೇಶಗಳಲ್ಲಿ ರಸ್ತೆ ಮೂಲಕ ವ್ಯಾಪಾರ ವಹಿವಾಟು ನಡೆಸಿದರೆ ಆಗುವ ಅನುಕೂಲ ಹಾಗೂ ಅನಾನುಕೂಲ ವಿಷಯ ಕುರಿತು ವಿಷಯ ಮಂಡಿಸಲು ಹೇಳಿದಾಗ ವಿಷಯ ಮಂಡಿಸಿದ ಹುಬ್ಬಳ್ಳಿ ಮೂಲದ ತೇಜಸ್ವಿನಿ ಮಹಾಂತೇಶ ಶಿರಹಟ್ಟಿ ದ್ವಿತೀಯ ಗೌರವಕ್ಕೆ ಪಾತ್ರಳಾಗಿರುವಳು ಸದ್ಯ ಹುಬ್ಬಳ್ಳಿಯಲ್ಲಿ ನೆಲೆಸಿರುವ ಮಹಾಂತೇಶ ಅವರು ಮುರಗೋಡ ಸಮೀಪದ ಹಿರೇಕೊಪ್ಪದವರು. ಅವರ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ನಾಲ್ಕು ಗೋಡೆಯ ಬಿಟ್ಟು ಕೋಣೆಯಿಂದಿತ್ತ ಬಾ ತಂಗಾಳಿ ಬೀಸುತಿದೆ ಬಯಲಿನಲ್ಲಿ ಎಲ್ಲಕಡೆ ಸಮನಾಗಿ ಸೂಸುತಿದೆ ಶಶಿಕಿರಣ ಮೇಲುಕೀಳುಗಳಿಲ್ಲ - ಎಮ್ಮೆತಮ್ಮ ಶಬ್ಧಾರ್ಥ ಶಶಿಕಿರಣ = ಬೆಳದಿಂಗಳು ತಾತ್ಪರ್ಯ ಸಮಾಜದಲ್ಲಿಯ ಜಾತಿ,ಮತ, ವರ್ಗ,ವರ್ಣವೆಂಬ‌ ನಾಲ್ಕು ಗೋಡೆಯಿಂದಾದ ಸಂಕುಚಿತ ಭಾವನೆಯ ಕೋಣೆಯಿಂದ ಹೊರಗೆಬಂದುಬಿಡು. ಸಂತೋಷವಾದ ಸ್ವಾತಂತ್ರದ ತಂಪು ಗಾಳಿ‌ ಬಯಲಿನಲ್ಲಿ‌ ಬೀಸುತ್ತಿದೆ. ಕತ್ತಲೆಯ ಕೋಣೆಯಲ್ಲಿ ಕೂಡುವುದಕಿಂತ ಹೊರಗಡೆ ಎಲ್ಲರಿಗೆ ಸಮನಾಗಿ ಸೂಸುವ ಚಂದ್ರನ ಬೆಳದಿಂಗಳಲ್ಲಿ ಕೂತು‌ ಆನಂದ‌ ಅನುಭವಿಸು. ತಂಗಾಳಿ ಮತ್ತು ಬೆಳದಿಂಗಳು...

ಕಲ್ಲೋಳಿ ಸಾಯಿ ಮಂದಿರ ವಾರ್ಷಿಕೋತ್ಸವ

ಮೂಡಲಗಿ:ಕಲ್ಲೋಳಿ ಪಟ್ಟಣದ ಶ್ರೀ ಸತ್ಯ ಸಾಯಿ ಸಮಿತಿ ಇದರ 39 ನೇ ವಾರ್ಷಿಕೋತ್ಸವ ಸಮಾರಂಭ ರವಿವಾರ ಅ-20 ರಂದು ಬೆಳಿಗ್ಗೆ 11-00 ಗಂಟೆಗೆ ಪ್ರಶಾಂತಿ ಕುಟೀರದಲ್ಲಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಶ್ರೀಶೈಲ ತುಪ್ಪದ ತಿಳಿಸಿದ್ದಾರೆ. ಶ್ರೀ ಸತ್ಯ ಸಾಯಿ ಸಮಿತಿಗಳ ಜಿಲ್ಲಾ ಅಧ್ಯಕ್ಷ ವಸಂತ ಬಾಳಿಗಾ ಅಧ್ಯಕ್ಷತೆಯನ್ನು ವಹಿಸುವರು. ಮುಖ್ಯ ಅತಿಥಿಗಳಾಗಿ ಧಾರವಾಡ ಜಿಲ್ಲಾ ಆಧ್ಯಾತ್ಮಿಕ...

ಕವನ : ಕೊರಡು ಕೊನರಲು

ಕೊರಡು ಕೊನರಲು ನೀನೊಲಿದಾಗಲೇ ನಾ ಬೀಜ ಮೊಳೆತು ನವಿರಾಗಿ ಚಿಗುರಿದ್ದು ಹಚ್ಚ ಹಸಿರಿನ ವೈಶಾಲ್ಯತೆಯಲಿ ಬೆಳೆದು ಮರವಾಗಿ ನೆರಳು ಹೂ ಹಣ್ಣು ಕಾಯಿ ನೀಡಿದ್ದು// ನೀನೊಲಿದಾಗಲೇ ನಾ ಸಸಿ ಬಲಿತು ಹೆಮ್ಮರವಾಗಿದ್ದು ಅಂಗಳದ ತುಂಬೆಲ್ಲಾ ಟೊಂಗೆ ಪಂಗ ಪಂಗಳವಾಗಿ ಹರಡಿ ಬಿಸಿಲ ಝಳಕೆ ತಂಪಾಗಿದ್ದು// ನಿನ್ನೊಲುಮೆಯ ಮರೆತ ಧೂರ್ತ ಹುಲು ಮಾನವನೀಗ ನನ್ನಿರವ ಬುಡ ಕಡಿದಾಗ ನಾ ಬರೀ ಒಣಗಿದ ಕೊರಡಾಗಲು ಮಾಡುವದು ಇನ್ನೇನು?// ಸುತ್ತ ಚೆಲ್ಲಿದ ಹಸಿ ಮಣ್ಣಿನ ಪಸೆಯ ಹೀರುತ ಬದುಕಲು ಬೇರುಗಳ ಹರಡಿ...

ರೂ. 65 ಲಕ್ಷ ಉಳಿತಾಯ ಮಾಡಿದ ಮಹಿಳಾ ಸ್ವ-ಸಹಾಯ ಸಂಘದ 25ನೇ ವಾರ್ಷಿಕೋತ್ಸವ ಆಚರಣೆ ಯಶಸ್ವಿ

ಮೈರಾಡ್ ಸಂಸ್ಥೆಯಿಂದ 1999 ರಲ್ಲಿ ರಚನೆಯಾದ ಶ್ರೀ ಗುರು ತಿಪ್ಪೆರುದ್ರಸ್ವಾಮಿ ಮಹಿಳಾ ಸ್ವ-ಸಹಾಯ ಸಂಘದ ಬೆಳ್ಳಿ ಹಬ್ಬವನ್ನು ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸ್ವ ಸಹಾಯ ಗುಂಪನ್ನು ರಚಿಸಿ ಎಂಟು ವರ್ಷಗಳ ಅವಧಿಗೆ ಪೋಷಿಸಿ ಅದು ಇಂದು ಹೆಮ್ಮರವಾಗಿ ಬೆಳೆಯಲು ಕಾರಣೀಭೂತರಾಗಿರುವ ರಾಯಚೂರಿನ ಶರಣಬಸಪ್ಪ ಪಟ್ಟೇದ ರವರು ಮಾತನಾಡುತ್ತಾ, 25 ವರ್ಷಗಳ ಹಿಂದೆ...

ಮನುಕುಲದ ಶ್ರೇಷ್ಠ ಮೌಲ್ಯಗಳನ್ನು ವಾಲ್ಮೀಕಿ ಪರಿಚಯಿಸಿದ್ದಾರೆ – ಬಿ ಎಂ ಕಬ್ಬೂರೆ

ಮೂಡಲಗಿ : ಒಬ್ಬ ದರೋಡೆಕೊರನಾಗಿದ್ದ ರತ್ನಾಕರ ಮಹರ್ಷಿ ವಾಲ್ಮೀಕಿಯಾಗಿ ನಾರದಮುನಿಗಳ ಸಂದೇಶದಂತೆ ಪರಿವರ್ತನೆಯಾಗಿ ಮಾನವ ಕುಲದಲ್ಲಿ ಶ್ರೇಷ್ಠತೆಯ ಮೌಲ್ಯಗಳನ್ನು ಹೊಂದಿರುವ ರಾಮನ ಜೀವನದ ಯಶೋಗಾಥೆಯನ್ನು ಪರಿಚಯಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು ರಾಮನಾಮದಲ್ಲಿ ದೇವನಿದ್ದು ಸಾರ್ವಕಾಲಿಕ ಸಾಮಾಜಿಕ ಮೌಲ್ಯಗಳನ್ನು ರಾಮಾಯಣದ ೨೪೦೦೦ ಶ್ಲೋಕಗಳಲ್ಲಿ ಪರಿಚಯಸುವಲ್ಲಿ ಮಹರ್ಷಿ ವಾಲ್ಮೀಕಿ ಮನುಕುಲದ ಮಹಾನ್ ವಿದ್ವಾಂಸರಾಗಿದ್ದಾರೆ ಎಂದು ಮೂಡಲಗಿಯ ಆರ್‌ಡಿಎಸ್...

ಭಾರತೀಯ ಸಂಸ್ಕೃತಿಯ ಪ್ರತಿಬಿಂಬ ರಾಮಾಯಣ ಮಹಾಕಾವ್ಯ

ಮೈಸೂರಿನ ಶಾರದಾವಿಲಾಸ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ರವರ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಸಿ.ಕೆ.ಅಶೋಕ್ ಕುಮಾರ್ ರವರು ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಭಾರತೀಯ ಸಂಸ್ಕೃತಿಯ ಪ್ರತಿಬಿಂಬ ರಾಮಾಯಣ ಮಹಾಕಾವ್ಯ. ಜೀವನದ ಮೌಲ್ಯಗಳೊಂದಿಗೆ ಪ್ರತಿಯೊಬ್ಬರು ಸ್ಫೂರ್ತಿ ಪಡೆಯುವಂತಹ ಮಹತ್ವದ ಗ್ರಂಥವಾಗಿದೆ. ವಾಲ್ಮೀಕಿ ಜೀವನದ ಕುರಿತಾಗಿ ಅನೇಕ ದಂತಕಥೆಗಳಿವೆ...

ಎಲ್ಲರಲ್ಲೂ ಧನಾತ್ಮಕ ಪರಿವರ್ತನೆ ಅಗತ್ಯ: ಮಾಲಗಿತ್ತಿ

ಧನಾತ್ಮಕ ಪರಿವರ್ತನೆ ಅಗತ್ಯ: ಮಾಲಗಿತ್ತ ಬಾಗಲಕೋಟೆ :ಜಿಲ್ಲೆಯ ಹುನಗುಂದ ತಾಲೂಕಿನ ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕ ಎಸ್ ಎಸ್ ಲಾಯದಗುಂದಿ ಮಾತನಾಡುತ್ತಾ, ಜಗತ್ತಿಗೆ ಪಿತೃವಾಕ್ಯ ಪರಿಪಾಲನೆಯ ಮೌಲ್ಯ ಸಾರಿದ ಶ್ರೀರಾಮನ ಬದುಕನ್ನು ಕಟ್ಟಿಕೊಟ್ಟು, ಸಹೋದರ ಧರ್ಮ, ಸತಿಧರ್ಮ, ಸೇವಾಧರ್ಮ ಬೋಧಿಸಿದ ಮಹರ್ಷಿ ವಾಲ್ಮೀಕಿ ಸಂಸ್ಕೃತದ...

ಪ್ರತಿಯೊಬ್ಬರೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿ: ತಹಶೀಲ್ದಾರ ಎಚ್.ಎನ್.ಶಿರಹಟ್ಟಿ

ಬೈಲಹೊಂಗಲ: ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಾಗುವುದರ ಮೂಲಕ ಎಲ್ಲರೂ ಕನ್ನಡದ ಬಗ್ಗೆ ಅಭಿಮಾನ ತೋರಬೇಕು ಎಂದು ಬೈಲಹೊಂಗಲ ತಹಶೀಲ್ದಾರರು ಹಾಗೂ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಗಳಾದ ಎಚ್.ಎನ್.ಶಿರಹಟ್ಟಿ ಹೇಳಿದರು. ಕರ್ನಾಟಕ ಸಂಭ್ರಮ 50 ಹಾಗೂ 69 ನೇ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಸ್ವತಃ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಾಗುವುದರ...
- Advertisement -spot_img

Latest News

ಅಣಕವಾಡು : ಮದನಾರಿ ಸತಿ ರೇಣುಕೆ

ಮದನಾರಿ ಸತಿ ರೇಣುಕ ಮದ‌ವೇರಿದ ತುಂಬಿದ ತನು ತಂದಳು ಸತಿ ರೇಣುಕೆ ಮನೆಮುಂದಿನ ಅಂಗಳದಲಿ ಕಸಬಳಿದಳು‌ ಬಳಲಿಕೆ ಏದುಸಿರನು‌ ಬಿಡುಬಿಡುತಲಿ ನೀರನು ಚಳೆಹೊಡೆದಳು ಆಯಾಸದಿ ಬಾಗುತ್ತಲಿ ರಂಗೋಲಿಯ ಬರೆದಳು ಮಹಾಮನೆಯ ಮಹಾದೇವಿ ಮಹಾಕಾಯ ಹೊತ್ತಳು ಬೇಸರದಲಿ ಬುಸುಗುಡುತಲಿ ನಿಟ್ಟುಸಿರನು‌ ಬಿಟ್ಟಳು ಹಾದಾಡುವ ಹೊಸತಿಲಲ್ಲಿ ಬಂದಳು ಹೊಯ್ದಾಡುತ ಮನೆಬಾಗಿಲ...
- Advertisement -spot_img
close
error: Content is protected !!
Join WhatsApp Group