ಕವನ

ಕವನ : ಸಂವಿಧಾನ ಕುರಿತ ನೀಳ್ಗವನ

ಸಮಾನತೆಯ ಪಲ್ಲವಿಭಾರತಾಂಬೆಗೆ ಹೊನ್ನ ಕಿರೀಟವಿದು ಸರಳ ಸಂವಿಧಾನ ನಮ್ಮ ಸಂವಿಧಾನ ಪೀಠಿಕೆ ಪರಿಧಿಯಪಲ್ಲವಿ ಸಾರ್ವಭೌಮತೆ, ಸಮಾಜವಾದಿ, ಜಾತ್ಯತೀತತೆ, ಗಣತಂತ್ರ,ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ದುಂಧುಭಿ ಜೀವದಾಯಿನಿ ಇದು ಭಾರತದ ಪಾಲಿಗೆ ಮುಕ್ತಿದಾಯಿನಿ ಇದು ರಾಷ್ಟ್ರದ ಸಂಕೋಲೆಗೆ ಸಂವಿಧಾನ ನಮಗೆ ಸುವಿಧಾನ...ಲಿಖಿತವೂ,ದೀರ್ಘವೂ ಭಾರತೀಯರಿಗಿದು ಮಾರ್ಗವು ಮನದಲ್ಲಿ ಮಡುಗಟ್ಟಿದ ಅಸಮಾನತೆಯ ಮೌನಕ್ಕೆ ಅಂಬೇಡ್ಕರರ ನವ್ಯ ಚಿಂತನೆಗಳ ಸಿರಿ ದೀಪವು ಶತಶತಮಾನಗಳ ದಾಸ್ಯದ ಕಾರ್ಗತ್ತಲೆಯ ಅಳಿಸಿ ದಿವ್ಯ ಚೇತನದ ಮಾನವೀಯತೆ ಎಲ್ಲೆಲ್ಲೂ ಬೆಳೆಸಿ ಭವ್ಯ ಭಾರತಕ್ಕೆ ಭದ್ರಬುನಾದಿ ಈ ಸಂವಿಧಾನ ನಮಗೆ ಸುವಿಧಾನಪವಿತ್ರ ಪದಪುಟಗಳ ಸ್ವೀಕಾರ 1949 ರಂದು,ಜಾರಿಗೆ...

ಕವನ : ನಾನು ಬೆಂಕಿಯ ಮಗಳು

ನಾನು ಬೆಂಕಿಯ ಮಗಳುಬಿರುನುಡಿಗಳ ಬಿರುಸು ಬಾಣಗಳ ನೋವನುಂಡು ಬೆಳೆದವಳು ನಾನು ನಿಮ್ಮ ಕುಹಕ ನಗೆ ನನ್ನನ್ನೇನು ಮಾಡೀತು?ನನ್ನದೇ ಕನಸು ಗುರಿಗಳ ಗಮ್ಯತೆಯಲಿ ನಡೆದವಳು ನಾನು ನಿಮ್ಮ ಅಲಕ್ಷ್ಯ,,ನಿರ್ಲಕ್ಷ್ಯ ನನ್ನನೇನು ಮಾಡೀತು?ಚೂರಿಯಂತ ಬದುಕ ದಾರಿ ಸಾಗಿ ಮುಂದೆ ಬಂದವಳು ನಾನು ನಿಮ್ಮ ಬೆನ್ನಿನ ಚೂರಿ ನನ್ನನ್ನೇನು ಮಾಡೀತು?ಕಷ್ಟಗಳ ಕಲ್ಲು ಕವಣೆ ಹಾದಿಯಲಿ ನಡೆದವಳು ನಾನು ನಿಮ್ಮ ಕಾಲೆಳೆಯುವಿಕೆ ನನ್ನನ್ನೇನು ಮಾಡೀತು?ದಿವ್ಯ ಧಿಕ್ಕಾರವಿರಲಿ ಬೆನ್ನ ಹಿಂದೆ ಬೊಗಳುವ ಶ್ವಾನಗಳಿಗೆ......ಹೆಣ್ಣು ಹೆಣ್ಣೆಂದು ಮೂಗೆಳೆಯುವ ಮೂದೇವಿಗಳೇ ಅವಳೊಡಲು ಇಲ್ಲದಿರೆ ನಿಮಗೆಲ್ಲಿದೆ ಅಸ್ತಿತ್ವ? ಶ್ರೀಮತಿ...

ಕವನ : ಇಲ್ಲೇ ಇದ್ದೀನಿ

ಇಲ್ಲೇ ಇದ್ದೀನಿಇಲ್ಲೇ ಇದ್ದೀನಿ ಹೀಗೇ ಇರುವೆ ಒಂಟಿ ಜೀವ ಕಾಡುತ್ತಿದೆ ನಿನ್ನ ನೆನಪಲ್ಲೇ ಪ್ರತಿಕ್ಷಣ ಬದುಕಿರುವೆ ನಿನ್ನ ಉಸಿರೇ ನನ್ನ ಉಸಿರಾಗಿದೆ.ಏನು ಮೋಡಿ ಮಾಡಿರುವೆ ನೀನು ಇಷ್ಟು ವರ್ಷ ಇಲ್ಲದ್ದು ಪ್ರೀತಿ ಪ್ರೇಮ ಈ ಉಕ್ಕುಕ್ಕಿ ಬರುತ್ತಿದೆ ನಿನ್ನ ಮಾತು, ನಿನ್ನ ಭರವಸೆ ಹೊಸದಿಗಂತ ನಿತ್ಯ ಚೇತನ ಕಾರಂಜಿಯಂತೆ ಪುಟಿಯುತ್ತಿದೆ ನೀನೇ ನನ್ನ ಸರ್ವಸ್ವ ಕನಸು ಬಯಕೆಯ ಬುತ್ತಿ ಉಸಿರು ಕಾವ್ಯ ಕವನ ಚಂದ್ರ ಮಧುಚಂದ್ರ ಒಂಟಿ ಬದುಕಿನ ಬಾಳಬಟ್ಟೆಅಕ್ಕಮಹಾದೇವಿ ತೆಗ್ಗಿ

ಕವನ : ಭವ್ಯ ಭಾರತ

ಭವ್ಯ ಭಾರತಇದೋ ನಮ್ಮ ಭಾರತ ಪುಣ್ಯ ಭೂಮಿ ಭಾರತ ವೇಷ ಭಾಷೆ ಬೇರೆ ಆದರೂ ಕಣ ಕಣದಲಿ ದೇಶ ಭಕ್ತಿ ಉಸಿರು.ಹಿಮಾಲಯದ ಶಿಖರದಿಂದ ಕನ್ಯಾಕುಮಾರಿ ಕಡಲ ತಡಿಯ ಚಂದ ಋಷಿ ವರ್ಯರ ಹೊತ್ತ ದಿವ್ಯ ನಾಡು ನದಿನದಗಳ ಚೆಲುವ ಬೀಡು.ವೀರ ಶೂರರು ಜನ್ಮ ವೆತ್ತು ದೇಶಕಾಗಿ ಜೀವ ತೆತ್ತು ಮಾನವೀಯತೆಯ ಸಾರಿ ಸಮನ್ವಯತೆಯ ಬೇರು ಹೀರಿ.ವ್ಯಾಸ ವಿವೇಕ ಕುವೆಂಪು ಕಾಳಿದಾಸ ಕನಕದಾಸರ ಕಂಪು ತಾಯ ಮಡಿಲಲಿ ಮಂದಹಾಸ ವೇದ ಉಪನಿಷತ್ತುಗಳ ಪ್ರಭಾಸ.ನ್ಯಾಯ...

ಕವನ : ಲೋಕಕ್ಕೆ ಲೋಕವೇ ಹರಿಸಿದೆ ಅವಳತ್ತ ಗಮನ….

ಲೋಕಕ್ಕೆ ಲೋಕವೇ ಹರಿಸಿದೆ ಅವಳತ್ತ ಗಮನ. ನೀವ್ಯಾಕೆ ಇನ್ನೂ ಬರೆಯಲಿಲ್ಲ ಅವಳ ಮೇಲೆ ಕವನ !?ಎಂದು ಕರೆ ಮಾಡಿ, ಮೆಸೇಜು ಮಾಡಿ ಕೇಳಿದವರಿಗೆಲ್ಲಾ ಅರ್ಪಣೆ ಈ ಸಪ್ತ ಹನಿಗಳು. ರಾತ್ರೋ ರಾತ್ರಿ ಜಗದಗಲ, ಮುಗಿಲಗಲ ವೈರಲ್ ಆದ ಬೆಡಗಿಯ ಚೆಲುವು-ನಿಲುವಿನ ಸುಪ್ತ ಖನಿಗಳು. ವಿಶ್ವವನ್ನೇ ಸೆಳೆದ ಸ್ನಿಗ್ಧ ಸೌಂದರ್ಯದ, ಮುಗ್ಧ ಮಾಧುರ್ಯದ ಕುಂಭಮೇಳದ ಚೆಲುವೆಯ...

ಕವನ : ದೋಕಾಯುಕ್ತರು ಬೇಕಾಗಿದ್ದಾರೆ !

ದೋಕಾಯುಕ್ತರು ಬೇಕಾಗಿದ್ದಾರೆ ! ------------------------------- ಬೇಕಾಗಿದ್ದಾರೆ ಅರ್ಜೆಂಟಾಗಿ ದೋಕಾಯುಕ್ತರು ಬೇಕಾಗಿದ್ದಾರೆ. ಭೂ ಹಗರಣ ಡಿ ನೋಟಿಫಿಕೇಶನ್ ಗಣಿ ಆಕ್ರಮ ಲಂಚ ವ್ಯವಹಾರ ಖರೀದಿ ಯೋಜನೆ ಕರ್ಮಕಾಂಡ ನೋಟು ಎಣಿಸುವ ಯಂತ್ರ ಕೊಳ್ಳೆ ಹೊಡೆಯುವ ತಂತ್ರ ಕೆರೆ ನುಂಗಿದ ಪ್ರಕರಣಗಳಿಗೆ ಆಡಳಿತ ವಿರೋಧ ಪಕ್ಷಗಳ ಬಾರಾ ಬಾನಗಡಿಗಳಿಗೆ ಬಿ ಫಾರಂ ಹಾಕಿ ಕ್ಲೀನ ಚಿಟ್ ಕೊಡುವವರು ಬೇಕಾಗಿದ್ದಾರೆ. ಹೆಂಡತಿ ಮಕ್ಕಳ ಹೆಸರಲಿ ಬೇನಾಮಿ ಸೈಟು ಆಸ್ತಿ ಮಾಡಿ ಮುಪ್ಪಿನಲಿ ವೃದ್ಧಾಶ್ರಮ ನಡೆಸಲು ನಿವೃತ್ತ ಅಧಿಕಾರಿ ಬೇಕಾಗಿದ್ದಾರೆ. ಮಗನಿಗೆ ಕಚೇರಿ ಮನೆಯಲ್ಲಿ ಹಣ ಕೂಡಿಸುವ...

ಕವನ : ಕುಂಭಮೇಳದ ಮೋನಾಲಿಸಾಗೆ ಒಂದು ಕಿವಿಮಾತು

ಕುಂಭಮೇಳದ ಮೋನಾಲಿಸಾಗೆ ಒಂದು ಕಿವಿಮಾತುಹು ಷಾರು ಹುಡುಗಿ ನಿನ್ನ ಕಣ್ಣ ನೋಟಕ್ಕೆ ಬೆರಗಾದವರೆಲ್ಲ ಕ್ಲಿಕ್ಕಿಸಿದ ಪೋಟೊಗಳು ಜಗದಗಲಕ್ಕೂ ಹರಿದಾಡುತ್ತಿವೆ.   ನಿನ್ನ ಹೆತ್ತವರು ನಮ್ಮ ಮುದ್ದುಮಗಳೆಂದು ಬೀಗಿರಬಹುದಷ್ಟೇ ಇಷ್ಟು ದಿನ ಸುಮ್ಮನಿದ್ದ ಇನಸ್ಟಾಗ್ರಾಮು, ಫೆಸಬುಕ್ಕು, ಟ್ವೀಟರ್ರುಗಳಲ್ಲೀಯೂ ಈಗ ಬರೀ ನಿನ್ನದೇ ಧ್ಯಾನ...         ನಿನ್ನ ಕಣ್ಣುಗಳ ಬಣ್ಣದ ಗುಣಗಾನನೆನಪಿರಲಿ ನೀನು ಬರುವ ಮೊದಲು ಬಹಳಷ್ಟು...

ಕವನ : ಹುಡುಕುತ್ತಿದ್ದೇನೆ

ಹುಡುಕುತ್ತಿದ್ದೇನೆಹುಡುಕುತ್ತಿದ್ದೇನೆ ಶರಣರು ಕಂಡ ಕಲ್ಯಾಣ ಹೊಸ ನೆಲ ಜಲ ಆಕಾಶ ಗಾಳಿ ಬೆಳಕು ಸಿಗುತ್ತಿಲ್ಲ ಸಿಕ್ಕರೂ ಹೊಸ ಮನುಜರ ಗುರುತು ಸಿಗುತ್ತಿಲ್ಲ ಶರಣರ ರುಂಡ ಚೆಂಡಾಡಿದ ಖಡ್ಗ ಕಠಾರಿ ಚೂರಿ ಸಿಕ್ಕರೂ ಕೊಲೆಗಾರರ ಗುರುತು ಸಿಗುತ್ತಿಲ್ಲ ವಚನಗಳಿಗೆ ಕಿಚ್ಚು ಹಚ್ಚಿದ ಹಿಲಾಲು ದೀವಿಗೆ ಸಿಕ್ಕಿವೆ, ಕಟ್ಟುಗಳ ಕೆಂಡಕ್ಕೆ ಸುರುವಿದ ಮುಖಗಳು ಸಿಗುತ್ತಿಲ್ಲ ಅಣ್ಣ ಸಿಗಬಹುದೆಂದು ಹುಡುಕುತ್ತಿದ್ದೇನೆ ಕಲ್ಯಾಣವ ದೇವರ ಸಿಕ್ಕರೂ ಸಿಗಲಿಲ್ಲ ಬಸವಣ್ಣ ಅವರು ಕೊಡುವ ಪ್ರಸಾದ ಬೊನಕ್ಕೆ ತಟ್ಟೆಯೊಡ್ಡಿದೆ ಹುಗ್ಗಿ ಹೋಳಿಗೆ ಸಿಕ್ಕಿತು ಸಿಗಲಿಲ್ಲ ಪ್ರಸನ್ನತೆ ಬಸವಣ್ಣನವರ ಕೊಂದವರೇ ಇಂದು ಅವನ ಪುರಾಣ ಪ್ರವಚನ ಮಾಡಿ ಹಾಡಿ ಹೊಗಳುವ ಕಾವಿ ಮಠಗಳು ಸಿಕ್ಕಿವೆ. ದಾರಿಯುದ್ದಕ್ಕೂ ಬಿಕ್ಕುವ ಧ್ವನಿ ಅಳುವ...

ಕವನ : ದೇವರಿಗೊಂದು ಮನವಿ

ದೇವರಿಗೊಂದು ಮನವಿಮರೆಯುವ ಶಕ್ತಿ ಕೊಡು ದೇವರೇ ಎಲ್ಲವನ್ನೂ ಮರೆತು ಸುಮ್ಮನಿದ್ದು ಬಿಡುವೆ. ನಾನು, ನನ್ನಿಂದಲೆ ಎಲ್ಲ ಎಂದು ಮೆರೆಯುವದನ್ನು,ಎಲ್ಲರೂ ನನ್ನವರೆಂದು ಸುಖಾ ಸುಮ್ಮನೇ ನಾನು ಕಂಡವರ ಜೊತೆಗೆ ಬೆರೆಯುವದನ್ನು...ಮರೆಯುವ ಶಕ್ತಿ ಕೊಡು ದೇವರೇ ನನಗೆ ಆಗಾಗ ಆದ ಕೇಡನ್ನು ಮುಷ್ಟಿ ಗಾತ್ರದ ಎದೆಗೆ ನೀನು ಮೊಗೆ ಮೊಗೆದು ಕೊಟ್ಟ ನೋವನ್ನು... ಅಷ್ಟೇ ಅಲ್ಲ ಆಗಾಗ ಅಲ್ಲಲ್ಲಿ ನನ್ನ...

ಕವನ : ಬಸವ ಮರಳಿ ಬರುವುದಿಲ್ಲ

ಬಸವ ಮರಳಿ ಬರುವುದಿಲ್ಲ ---------------------------- ವಿಶ್ವ ಬಂಧು ಮಹಾಪುರುಷ ಜಗದ ಅಣ್ಣ ಬಸವನು ಮತ್ತೆ ಬಾರನು ಮರಳಿ ಭೂಮಿಗೆ ವ್ಯರ್ಥವಾಯಿತು ಕ್ರಾಂತಿಯುದುಡಿವ ಕೈಗೆ ಕೆಲಸವಿತ್ತು. ಹಸಿದ ಹೊಟ್ಟೆಗೆ ಪ್ರಸಾದವು ಜಾತಿ ಕಸದ ಬೇರು ಕಿತ್ತು ಹಸನ ಮಾಡಿದ ಬಾಳನುಉಚ್ಚ ನೀಚ ರಾಜ ರಂಕ ದುಡಿಮೆ ಸೂತ್ರ ಮಂತ್ರವು ಒಂದು ಮಾಡಿದ ಹಿರಿಮೆ ಗರಿಮೆ ಈಗ ಭ್ರಮೆ ಇಲ್ಲ ಶಾಂತಿ.ಬಸವನೆಸರಲಿ ಕೊಳ್ಳೆ ಹೊಡೆವರು ಅಕ್ಕ ಮಾತೆ ಸ್ವಾಮಿ ಶರಣರು ಗ್ರಂಥ ಕದ್ದು ವಚನ ತಿದ್ದಿ ದೊಂಬರಾಟದ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group