ಬೀದರ – ಕೇಂದ್ರದ ನೂತನ ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಅವರು ಬೀದರಗೆ ಆಗಮಿಸಿದ ಸಂದರ್ಭದಲ್ಲಿ ಅಭಿಮಾನಿಗಳಿಂದ ನೂಕು ನುಗ್ಗಲಾಗಿದ್ದು ಕೋವಿಡ್ ನಿಯಮಗಳ ಸ್ಪಷ್ಟ ಉಲ್ಲಂಘನೆ ಯಾಗಿದ್ದು ಕಂಡುಬಂದಿತು.
ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯ ಭೀತಿಯಿದ್ದು ಸರ್ಕಾರ ಜನ ಸಾಮಾನ್ಯರಿಗೆ ನಿಯಮಗಳನ್ನು ಮಾಡುತ್ತಿದೆ ಆದರೆ ಸಚಿವರಿಗೆ ಮಾತ್ರ ಈ ನಿಯಮಗಳು ಅನ್ವಯಿಸಯವುದಿಲ್ಲವೇನೋ ಎನ್ನುವಂತಿದೆ.
ಇತ್ತ ತೆಲಂಗಾಣ ಗಡಿಯಲ್ಲೂ ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರನ್ನು ಪಕ್ಷದ ನೂರಾರು ಕಾರ್ಯಕರ್ತರು ಕುದುರೆಯ ಮೇಲೆ ಕುಳ್ಳಿರಿಸಿ ಮೆರವಣಿಗೆಯಲ್ಲಿ ಕರೆತಂದರು. ಕೋವಿಡ್ ನಿಯಮಗಳನ್ನು ತೀರಾ ನಿರ್ಲಕ್ಷಿಸಿರುವುದು ಕಂಡುಬಂದಿತು.
ಸಚಿವರ ಈ ಮೆರವಣಿಗೆಯಲ್ಲಿ ಜನರಿಂದ ನೂಕು ನುಗ್ಗಲು ಉಂಟಾಗಿದ್ದು ಸಾಮಾಜಿಕ ಅಂತರ ಕಣ್ಮರೆಯಾಗಿತ್ತು. ಕೊರೋನಾ ಮಹಾಮಾರಿ ಹಬ್ಬಲು ಅತ್ಯಂತ ಪ್ರಶಸ್ತ ವೇಳೆ ಎಂಬಂತೆ ವಾತಾವರಣ ಅಲ್ಲಿ ಉಂಟಾಗಿತ್ತು. ಇಷ್ಟು ಜನರ ಗದ್ದಲ ಇದ್ದರೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಣ್ಣು ಮುಚ್ಚಿ ಕುಳಿತಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕೇಳಿಬಂದಿದೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ