- Advertisement -
ಬೀದರ – ಕೋವಿಡ್ ನಿಯಂತ್ರಣದಲ್ಲಿ ಬರಲಿ ಎಂದು ಚಿಕ್ಕ ಮಕ್ಕಳು ತಾಲೂಕಿನ ಬಾವಗಿಯಲ್ಲಿ ನಾಗ ದೇವತೆ ಪೂಜಾ ಮಾಡಿದರು.
ಶುಕ್ರವಾರ ನಾಗಪಂಚಮಿ ಹಬ್ಬದ ಅಂಗವಾಗಿ ಮಹಿಳೆಯರು, ಮಕ್ಕಳು ನಾಗರಮೂರ್ತಿಗೆ ಹಾಲು ಎರೆದರು.
ಗ್ರಾಮದ ಭದ್ರೆಶ್ವರ ದೇವಸ್ಥಾನ ಆವರಣದಲ್ಲಿರುವ ನಾಗರಮೂರ್ತಿಗೆ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿ ಮಕ್ಕಳ ಕೈಯಲ್ಲಿ ಕೊಬ್ಬರಿ ಬಟ್ಟಲಿನಿಂದ ಹಾಲು ಹಾಕುತ್ತ ಹಾಲೆರೆದು ಕುಟುಂಬವನ್ನು ರಕ್ಷಿಸು ದೇವಾ ಕೊರೋನಾ ಮಹಾಮಾರಿ ತೊಲಗಿಸು ನಮ್ಮ ಶಾಲೆಯನ್ನು ಪ್ರಾರಂಭಿಸು ಎಂದು ಪ್ರಾರ್ಥಿಸಿ ನಾಗರಮೂರ್ತಿಗೆ ಹಾಲೆರೆದ ಮಕ್ಕಳು ವಿಶೇಷ ಪೂಜೆ ಅರ್ಪಿಸಿದರು.