spot_img
spot_img

ಕವನ: ಎಂಥ ಭಾಗ್ಯವೋ ಕೃಷ್ಣ….!

Must Read

spot_img

ಎಂಥ ಭಾಗ್ಯವೋ ಕೃಷ್ಣ….!

ಎಂಥ ಭಾಗ್ಯವೋ ಕೃಷ್ಣ
ಆ ಕೊಳಲಿನದು !
ನಿನ್ನ ಮೃದು ತುಟಿಗಳ ಸ್ಪರ್ಶದ ಜೊತೆಗೆ
ರಾಗವಾಗಿ ನುಲಿಯುವ ಭಾಗ್ಯ !
ನಿನ್ನುಸಿರಿನ ಜೀವಸೆಲೆಯ ಪಡೆದು
ಮೃದುವಾದ ತಾಡನಕ್ಕೆ
ನಲಿಯುವ ಭಾಗ್ಯ!

ಎಂಥ ಭಾಗ್ಯವೋ ಕೃಷ್ಣ
ಆ ನವಿಲುಗರಿಯದು !
ನಿನ್ನ ಮುಡಿಯ ಶಿಖರವೇರಿ
ಜಂಭದಿಂದ ತಲೆಯೆತ್ತಿ ನಿಲ್ಲುವ ಭಾಗ್ಯ !
ಲೋಕದಲ್ಲಿ ತಾನೇ ಉನ್ನತವೆಂಬ ಭಾವ
ಹೊಂದಿ ಸವರ್ಣ ಅಕ್ಷಿಗಳಿಂದ
ಲೋಕ ನೋಡುವ ಭಾಗ್ಯ!

ಎಂಥ ಭಾಗ್ಯವೋ ಕೃಷ್ಣ
ಆ ಶ್ಯಮಂತಕ ಮಣಿಯದು !
ನಿನ್ನೆದೆಯ ಪರ್ವತದ ಮೇಲೆ ವಿರಾಜನಾಗಿ
ವಿಶ್ವಕೆಲ್ಲ ಬೆಳಕು ಬೀರುವ ಹಮ್ಮು
ಸ್ವತಃ ಹೊಳೆಯುತ್ತ ನಗು ಬೀರುವ ಬಿಮ್ಮು !

ಎಂಥ ಭಾಗ್ಯವೋ ಕೃಷ್ಣ
ಆ ಗೋವಿನದು !
ನಿನ್ನ ಮುರಳಿ ನಾದದ ಸವಿಯುಂಡು
ಕೆಚ್ಚಲ ತುಂಬಿಕೊಂಡು ನೊರೆ ಹಾಲ್ಗರೆವ
ಹಸು ತಾನು ಪಡೆದ ಮನೋಲ್ಲಾಸಕೆ
ಧನ್ಯತೆ ಪಡೆಯಿತು ಗೋಪಾಲಕ

ನನಗೂ ನೀಡು ಕೃಷ್ಣ
ಈ ಭಾಗ್ಯದ ಬದುಕನು
ನಿನ್ನ ಉಸಿರಿಗೆ ಮುರಳಿಯಾಗಿ
ಶಿರಕೆ ನವಿಲಗರಿಯಾಗಿ
ನಿನ್ನೆದೆಯ ಮಣಿಯಾಗಿ
ನಿನ್ನ ಮಮತೆಗೆ ಗೋವಾಗಿ
ಸಾರ್ಥಕ್ಯ ಹೊಂದುವ ಕೃಪೆಯನ್ನೊಮ್ಮೆ
ನೀಡಿ ಬಿಡು ಕೃಷ್ಣ


ಉಮೇಶ ಬೆಳಕೂಡ, ಮೂಡಲಗಿ
( ಹೊಸ ದಿಗಂತ ಪತ್ರಿಕೆಯ ದಶಮಾನೋತ್ಸವ ಸಂಭ್ರಮದ ಪುರವಣಿ ‘ ಉತ್ತರ ಮುಖಿ ‘ ಯಲ್ಲಿ ಪ್ರಕಟಿತ )

- Advertisement -
- Advertisement -

Latest News

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಂಬನಿ

ಬೆಂಗಳೂರು- ಶ್ರವಣ ಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಂಬನಿ ಮಿಡಿದಿದ್ದಾರೆ. ಜೈನ್ ಸಮುದಾಯದ ಸಮಗ್ರ...
- Advertisement -

More Articles Like This

- Advertisement -
close
error: Content is protected !!