spot_img
spot_img

ದಿ. 23 ರಿಂದ ಮೂರು ದಿನ ಸವದತ್ತಿ ರಾಘವೇಂದ್ರಮಠದಲ್ಲಿ ರಾಘವೇಂದ್ರ ಮಹಾಸ್ವಾಮಿಗಳ 169ನೇಯ ಆರಾಧನಾ ಮಹೋತ್ಸವ

Must Read

- Advertisement -

ಸವದತ್ತಿ – ಸವದತ್ತಿ ಪಟ್ಟಣದ ಸುಪ್ರಸಿದ್ದ ಹಾಗೂ ತನ್ನದೇ ಆದ ಇತಿಹಾಸ ಉಳ್ಳ ರಾಘವೇಂದ್ರ ಮಠದಲ್ಲಿ ಬರುವ ಅಗಸ್ಟ 23.24. ಹಾಗೂ 25.ತಾರೀಖಿನಂದು ಮೂರು ದಿನಗಳಕಾಲ ಗುರು ಸಾರ್ವಭೌಮರ 169ನೇಯ ಆರಾಧನಾ ಮಹೋತ್ಸವವನ್ನು ಆಚರಿಸಲಾಗುವುದು

ಪ್ರತಿದಿನ ಬೆಳಿಗ್ಗೆ 6-30 ಘಂಟೆಗೆ ಸುಪ್ರಭಾತ. ಬೆಳಿಗ್ಗೆ 7 ರಿಂದ ಅಷ್ಟೋತ್ತರ ಪಂಚಾಮೃತ ಅಭಿಷೇಕ. ಕನಕಾಭಿಷೇಕ.ಮಹಾಪೂಜಾ ಪುಷ್ಪಾಲಂಕಾರ. ಮದ್ಯಾಹ್ನ 1-30ಕ್ಕೆ ಮಹಾನೈವೇದ್ಯ ಮಹಾಮಂಗಳಾರತಿ ಮಹಾಪ್ರಸಾದ. ಸಾಯಂಕಾಲ 6-30ಕ್ಕೆ ಭಜನೆ ಪಲ್ಲಕ್ಕಿ ಸೇವಾ .ತೊಟ್ಟಿಲು ಸೇವಾ .ಫಲಮಂತ್ರಾಕ್ಷತೆ ಈ ರೀತಿಯಾದ ಧಾರ್ಮಿಕ ಕಾರ್ಯಕ್ರಮಗಳು ಮೂರು ದಿನಗಳ ಕಾಲ ನಡೆಯಲಿವೆ ಎಂದು ದೇವಸ್ಥಾನದ ಪರ್ಯಾಯ ಅರ್ಚಕರಾದ ರಾಮಾಚಾರ್ಯ ಗು. ಕಟ್ಟಿ ಹಾಗೂ ಗುರಾಚಾರ್ಯ ರ. ಕಟ್ಟಿ ಹೇಳಿದರು

ನಂತರ ದೇವಸ್ಥಾನದ ಮುಖಂಡರಾದ ವೆಂಕಟೇಶ ವೈದ್ಯ ರವರು ಮಾತನಾಡಿ, ಬಹುದಿನಗಳಿಂದ ಮಾಡುತ್ತಾ ಬಂದಿರುವ ಧಾರ್ಮಿಕ ಕಾರ್ಯಕ್ರಮಗಳನ್ನು ಬಿಡಲು ಆಗುವುದಿಲ್ಲ. ಆದರೆ ಸರಕಾರದ ಕೋವಿಡ್ 19 ರ ಆದೇಶ ಯಾರೂ ಉಲ್ಲಂಘಿಸಬಾರದು ಆದ್ದರಿಂದ ಭಕ್ತರಿಗೆ ದರುಶನಕ್ಕೆ ಅವಕಾಶ ಇರುವುದಿಲ್ಲ ಮತ್ತು ಮಹಾಪ್ರಸಾದವೂ ಇರುವುದಿಲ್ಲ ಎಲ್ಲ ಭಕ್ತರು ಸಹಕರಿಸಬೇಕು ಎಂದು ವಿನಂತಿಸಿದ್ದಾರೆ .

- Advertisement -
- Advertisement -

Latest News

ಸೌರ ವಿದ್ಯುತ್ ಉತ್ಪಾದನೆ ಮಾಹಿತಿ ಕಾರ್ಯಾಗಾರ

ಕ್ಯಾಷುಟೆಕ್ ನಿರ್ಮಿತಿ ಕೇಂದ್ರ ಶಕ್ತಿನಗರದ ಅಭಿಯಂತರುಗಳಿಗೆ ಹಾಗೂ, ರಾಯಚೂರು ಜಿಲ್ಲೆಯ ವಿವಿಧ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ "ಸುಸ್ಥಿರ ಹಸಿರು ವಿದ್ಯುಚ್ಛಕ್ತಿ ಉತ್ಪಾದನೆಗೆ ಸೌರಶಕ್ತಿ ಬಳಕೆ"...
- Advertisement -

More Articles Like This

- Advertisement -
close
error: Content is protected !!
Join WhatsApp Group