Monthly Archives: March, 2024

ರಂಗ ಪ್ರಯೋಗ: ವಿಭಿನ್ನ ಪ್ರಯೋಗ ವಿಗಡ ವಿಕ್ರಮರಾಯ ರಂಜಿಸಿದ ಸುಣ್ಣದ ಸುತ್ತ

ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ರಂಗಸಿರಿ ಹಾಸನ ಆಯೋಜಿಸಿರುವ ಕಾಲೇಜು ರಂಗೋತ್ಸವದಲ್ಲಿ ಸೋಮವಾರ ಎರಡು ನಾಟಕಗಳು ವಿಭಿನ್ನ ಪ್ರಯೋಗಗಳಿಂದ ರಂಜಿಸಿದವು. ನವ್ಕೀಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ಹಾಸನ ವಿದ್ಯಾರ್ಥಿಗಳು ಪ್ರದರ್ಶಿಸಿದ ವಿಗಡ ವಿಕ್ರಮರಾಯ ಐತಿಹಾಸಿಕ ನಾಟಕ. ಆದರೆ ಪ್ರದರ್ಶಿತವಾಗಿದ್ದು ಆಧುನಿಕ ವೇಷ ಭೂಷಣದ ಶೈಲಿ ಚಿಂತನೆಯಲ್ಲಿ. ನಾಟಕ ನಿರ್ದೇಶಕರು ವಿನೀತ್‍ಕುಮಾರ ಎಂ. ಕೈಲಾಸಂ ರಂಗಭೂಮಿಗೆ ಸಲ್ಲುತ್ತಾರೆ. ಆದರೆ...

ಮಾ.28ರಂದು ವಿಶೇಷ ‘ಸ್ವಾತಿ’ ಪೂಜೆ

ಮೈಸೂರು -  ನಗರದ ಕಾಳಿದಾಸ ರಸ್ತೆಯಲ್ಲಿರುವ ಶ್ರೀ ಯದುಗಿರಿ ಯತಿರಾಜ ಮಠ, ಮೈಸೂರು ಶಾಖೆಯ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಮಾ.28ರಂದು ಗುರುವಾರ ‘ಸ್ವಾತಿ’ ನಕ್ಷತ್ರದ ಪ್ರಯುಕ್ತ ವಿಶೇಷ ಪೂಜೆ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 8ಕ್ಕೆ ಸಂಕಲ್ಪ, 9ಕ್ಕೆ ಅಭಿಷೇಕ, 10.30ಕ್ಕೆ ಅಲಂಕಾರ, 11.30ಕ್ಕೆ ಮಹಾಮಂಗಳಾರತಿ, ಮಧ್ಯಾಹ್ನ 12.30ಕ್ಕೆ ಶಾತ್ತುಮೊರೈ, 1 ಗಂಟೆಗೆ ತೀರ್ಥ ಪ್ರಸಾದ...

ಕವನ: ಹೋಳಿ ಹಬ್ಬ

ಹೋಳಿ ಹಬ್ಬ ಚಿಕ್ಕವರು ದೊಡ್ಡವರ ಸಂಭ್ರಮದ ಓಡಾಟ ದುಷ್ಟಶಕ್ತಿಯ ಮೇಲೆ ದೈವ ಶಕ್ತಿಯ ಗೆಲುವಿನಾಟ ಆಚಾರ ಸಂಪ್ರದಾಯಗಳ ನೆನಪಿಸುವ ಪಾಠ ತರಾವರಿ ಬಣ್ಣಗಳ ಪರಸ್ಪರ ಎರಚಾಟ ಜಾತಿ ಭೇದವಿಲ್ಲದೆ ಒಂದಾಗಿ ಆಚರಿಸುವ ರಂಗಿನಾಟ ಭಾವೈಕ್ಯತೆಯ ಸಂಗಮದ ಹರುಷದ ಓಕುಳಿಯಾಟ ವಾಟರ್ಗನ್ ಬಲೂನ್ ಗಳ ಅದ್ಭುತ ನೋಟ ಪರಸ್ಪರ ಶುಭಾಶಯಗಳ ವಿನಿಮಯದ ಕೂಟ ಪ್ರೀತಿ ಸಂತೋಷದ ಕಾಮ ಮಹೋತ್ಸವ ಬಿಳಿ ಉಡುಪುಗಳ ಧರಿಸಿ ನೃತ್ಯ ಸಂಗೀತೋತ್ಸವ ಸಿಹಿ ಖಾದ್ಯಗಳ ಮೆಲ್ಲುವ ವಸಂತೋತ್ಸವ ಮನಸ್ಸಿಂದ...

ಜವಾಬ್ದಾರಿ ಬದುಕಿನ ನಿರ್ವಹಣೆ ವಚನ ಪಾಲನೆಯಿಂದ ಸಾಧ್ಯ

ಬೆಳಗಾವಿ - ನಗರದ ಮಹಾಂತೇಶ ನಗರದ ಲಿಂಗಾಯತ ಸಂಘಟನೆ ಡಾ. ಫ ಗು ಹಳಕಟ್ಟಿ ಭವನದಲ್ಲಿ ವಾರದ ಪ್ರಾರ್ಥನೆ ಮತ್ತು ಉಪನ್ಯಾಸ ಸಾಮೂಹಿಕ ಬಸವ ಪ್ರಾರ್ಥನೆ ನೆರವೇರಿಸಲಾಯಿತು. ವಿ.ಕೆ.ಪಾಟೀಲ,ಬಿ.ಪಿ.ಜೇವಣಿ, ಜಯಶ್ರೀ ಚಾವಲಗಿ, ಶ್ರೀಕಾಂತ ಶಾನವಾಡ ವಚನ ವಿಶ್ಲೇಷಣೆ ನಡೆಸಿಕೊಟ್ಟರು. ಉಪನ್ಯಾಸಕರಾಗಿ ಆಗಮಿಸಿದ ಡಾ. ಗಜಾನಂದ ಸೊಗಲನ್ನವರ ಅವರು ಧರೆ ಹತ್ತಿ ಉರಿದಡೆ ನಿಲಬಹುದೇ ಎಂಬ ವಿಷಯದ ಕುರಿತು...

ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ಘಟಿಕೋತ್ಸವ

ಮೈಸೂರ -ನಗರದ ಬೋಗಾದಿ ಮುಖ್ಯರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ಘಟಿಕೋತ್ಸವ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಶಾಲಾ ಆಡಳಿತಾಧಿಕಾರಿ ಕಾಂತಿ ನಾಯಕ್‍ರವರು ಮಾತನಾಡಿ ಪುಟಾಣಿ ಮಕ್ಕಳ ಭಾಷಾ ಪ್ರೌಢಿಮೆ, ಸಮಯ ಪ್ರಜ್ಞೆ, ವಾಕ್ಚಾತುರ್ಯವನ್ನು ಹೊಗಳುತ್ತಾ ಪ್ರಶಂಸೆ ವ್ಯಕ್ತಪಡಿಸಿದರು.  ಮುಖ್ಯ ಶಿಕ್ಷಕ ಮಹಮ್ಮದ್ ಫಾರೂಕ್‍ರವರು ಯುಕೆಜಿ ಮಕ್ಕಳಿಗೆ ಪ್ರಮಾಣ ವಚನವನ್ನು ಬೋಧಿಸಿದರು.  ಈ ಕಾರ್ಯಕ್ರಮದಲ್ಲಿ ಮಕ್ಕಳು ಹಾಗೂ ಪೋಷಕರು ಭಾಗವಹಿಸಿ ಮೆರುಗು...

ಮಹಿಳಾ ದಿನಾಚರಣೆ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಅಖಿಲ ಭಾರತ ಕವಯಿತ್ರಿಯರ ಸಂಘಟನೆ ಬೆಳಗಾವಿ ಘಟಕ, ಕರ್ನಾಟಕ ಲೇಖಕಿಯರ ಸಂಘ ಬೆಳಗಾವಿ ಶಾಖೆ ಹಾಗೂ ಪೃಥ್ವಿ ಫೌಂಡೇಶನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಪುಸ್ತಕಗಳ ಬಿಡುಗಡೆ ಹಾಗೂ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮವನ್ನು 23 ರಂದು  ಹಮ್ಮಿಕೊಳ್ಳಲಾಗಿತ್ತು. ಲೋಕದರ್ಶನ ದಿನ ಪತ್ರಿಕೆಯ  ಸುರೇಖಾ ದೇಸಾಯಿ ಕಾರ್ಯಕ್ರಮವನ್ನು ಬಲೂನ್ ಹಾರಿಸುವುದರ ಮೂಲಕ ಉದ್ಘಾಟಿಸಿದರು.  ರಾಜೇಶ್ವರಿ ಹೆಗಡೆ...

‘ನೋಟರಿಗಳು ಪುಸ್ತಕಗಳನ್ನು ಓದಿ ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು’

ನೋಟರಿಗಳ ಕಾರ್ಯಾಗಾರ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹೈಕೋರ್ಟ್ ವಿಶ್ರಾಂತ ನ್ಯಾಯಾಧೀಶ ಚಂದ್ರಶೇಖರಯ್ಯ ಅಭಿಮತ ಮೈಸೂರು - ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ನೋಟರಿಗಳ ಸಂಘದ ವತಿಯಿಂದ (ಮಾ.23) ಕಾರ್ಯಾಗಾರ ಹಾಗೂ ನೋಟರಿ ಬಿ.ಎಸ್.ಪ್ರಶಾಂತ್ ಅವರು ಆಂಗ್ಲ ಭಾಷೆಯ ಪುಸ್ತಕವನ್ನು ಕನ್ನಡಕ್ಕೆ ತರ್ಜುಮೆ ಮಾಡಿರುವ ‘ನೋಟರಿ ಕಾನೂನು ಪದ್ಧತಿ ಹಾಗೂ ಪ್ರಕ್ರಿಯೆ’ ಎಂಬ ಪುಸ್ತಕವನ್ನು ಬೆಂಗಳೂರು...

‘ಪೂರ್ವ ಪ್ರಾಥಮಿಕ ಶಿಕ್ಷಣ ಮಕ್ಕಳ ಬೆಳವಣಿಗೆಗೆ ಪೂರಕ’ – ವಿಜ್ಞಾನಿ ಡಾ.ಸಿ.ಎ.ದೀಪಕ್

ಮೈಸೂರು -ನಗರದ ಆಲನಹಳ್ಳಿ ಬಡಾವಣೆಯಲ್ಲಿರುವ ಯುರೋ ಕಿಡ್ಸ್ ಶಾಲೆಯ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಜಗನ್ಮೋಹನ ಅರಮನೆಯಲ್ಲಿಂದು (ಮಾ.24) ನೆರವೇರಿತು. ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿ ಮಾತನಾಡಿದ ಮಂಡ್ಯ ಕೃಷಿ ಸಂಶೋಧನಾ ಕೇಂದ್ರದ ಭತ್ತದ ತಳಿ ವಿಜ್ಞಾನಿ ಡಾ.ಸಿ.ಎ.ದೀಪಕ್ ಅವರು ಪೂರ್ವ ಪ್ರಾಥಮಿಕ ಶಿಕ್ಷಣ ಮಕ್ಕಳ ಮುಂದಿನ ಬೆಳವಣಿಗೆಗೆ ಪೂರಕ ವಾತಾವರಣವನ್ನು ನಿರ್ಮಿಸುತ್ತದೆ. ಶಾಲಾ ವಾತಾವರಣಕ್ಕೂ ಮೊದಲು ಪೂರ್ವ...

‘ಎಲ್ಲಾ ರಂಗದಲ್ಲೂ ಮಹಿಳೆಯರ ಪಾತ್ರ ಹಿರಿದು’ – ಚಲನಚಿತ್ರ ನಟಿ ರೇಖಾದಾಸ್

ಮೈಸೂರು - ನಗರದ ಸ್ವರಲೋಕ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ಇಂದು ಮೈಸೂರಿನ ಪುರಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಾಗೂ ಕರೋಕೆ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.        ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಚಲನಚಿತ್ರ ಹಾಸ್ಯನಟಿ ಶ್ರೀಮತಿ ರೇಖಾದಾಸ್ ಅವರು ಜ್ಯೋತಿ ಬೆಳಗಿಸಿ, ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಎಲ್ಲಾ ರಂಗಗಳಲ್ಲಿಯೂ ಮಹಿಳೆಯರಿಗೆ ಸಮಾನ...

ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಪ್ರವೇಶ ಪತ್ರ ವಿತರಣೆ

ಮೈಸೂರು -ನಗರದ ವಿನಾಯಕನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಪ್ರವೇಶ ಪತ್ರ ವಿತರಣೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಾಲೆಗೆ ಸಹಾಯ ನೀಡುವಂತಹ ಹಲವಾರು ಗಣ್ಯರು ಭಾಗವಹಿಸಿದ್ದರು. ಪರೀಕ್ಷೆಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳಿಗೆ ಶುಭವನ್ನು ಕೋರಿದರು. ಲಯನ್ ವೆಂಕಟೇಶ್ ಪ್ರಸಾದ್‍ರವರು ಲೇಖನ ಸಾಮಗ್ರಿಗಳನ್ನು ಒದಗಿಸಿದ್ದರು. ಕೆ.ಆರ್.ಯೋಗಾನರಸಿಂಹನ್ (ಮುರುಳಿ) ಎಲ್ಲರಿಗೂ...
- Advertisement -spot_img

Latest News

ಹನಿಗವನಗಳು

ಹನಿಗವನಗಳು 1) ಸುಳ್ಳುಗಾರರು ಹತ್ತು ನಾಲಿಗೆಯ ರಾವಣ ಹೇಳಲಿಲ್ಲ ಒಂದು ಸುಳ್ಳು ಒಂದೇ ನಾಲಿಗೆಯ ರಾಜಕಾರಣಿ ಹೇಳುತ್ತಾನೆ ದಿನಕ್ಕತ್ತು ಸುಳ್ಳು! 2) ಶೀಲಾ ನೆರೆಮನೆ ಶೀಲಾ ಪರ ಪುರುಷರೊಡನೆ ಸೇರಿ ಹೆಸರು ಕೆಡಿಸಿಕೊಂಡಳು 3) ಟಿವಿ ಹಾವಳಿ ಮನೆಯಲ್ಲಿ ಟಿವಿ ಮುಂದೆ ಸದಾ ಇರುವ ವಿದ್ಯಾ ರ್ಥಿಗಳು ಶಾಲೆಯಲ್ಲಿ ಹಿಂದೆ ಬೀಳುವರು. 4) ವಾಸ್ತವ ಕಟ್ಟುವವು...
- Advertisement -spot_img
close
error: Content is protected !!
Join WhatsApp Group