ಸಿಂದಗಿ: ದೇಹದ ಆರೋಗ್ಯಕ್ಕಿಂತ ದೊಡ್ಡ ಶಕ್ತಿ ಬೇರೊಂದು ಇಲ್ಲ ನಾವು ಮೊದಲು ಆರೋಗ್ಯವಂತರಾದಾಗ ನಮಗೆ ಪರಿಪೂರ್ಣ ಶಿಕ್ಷಣ ದೊರೆಯುತ್ತದೆ ಎಂದು ಶಾಲಾ ಮುಖ್ಯಗುರು ಎನ್.ಕೆ ಚೌಧರಿ ಹೇಳಿದರು.
ತಾಲೂಕಿನ ಬಂದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ವಿದ್ಯಾರ್ಥಿಗಳಿಗೆ (ಆರ್ ಬಿ ಕೆ ಎಸ್ ) ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ...
ಮೊಹರಂ.. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಮೊದಲ ತಿಂಗಳು. ಈ ತಿಂಗಳನ್ನು ಇಸ್ಲಾಂನಲ್ಲಿ ಹೊಸ ವರ್ಷ ಅಂತಾ ಆಚರಣೆ ಮಾಡಲಾಗುತ್ತದೆ. ಮೊಹರಂ ತಿಂಗಳ 10 ದಿನವನ್ನು ರೋಜ್-ಏ-ಆಶುರಾ (Day Of Ashura) ಎಂದು ಕರೆಯಲಾಗುತ್ತದೆ. ರೋಜ್-ಏ-ಅಶುರಾ ದಿನವನ್ನೇ ಕ್ಯಾಲೆಂಡರ್ ನಲ್ಲಿ ಮೋಹರಂ ಎಂದು ಕರೆಯಲಾಗುತ್ತದೆ.
ಮೊಹರಂ ತಿಂಗಳ 10ನೇ ದಿನದಂದು ಇಸ್ಲಾಂ ಧರ್ಮದ ಸಂಸ್ಥಾಪಕ ಪ್ರವಾದಿ ಮೊಹಮ್ಮದ್...
ಸ್ವರ ಗೀತೆ ಅನ್ನದಾತ
ಅ ನ್ನದಾತ ಜಗಕೆ ನೀನು ಭಾಗ್ಯದಾತ
ಆ ಳಾಗಿ ದುಡಿದು ಅನ್ನ ನಮಗೆ ನೀಡುವಾತ/
ಇ ಲ್ಲ ನಿನಗೆ ದುಡಿಮೆಯಿಂದ ವಿಶ್ರಾಂತಿ
ಈ ಗಲೂ ಜಗ ನಂಬಿದೆ ನಿನ್ನ ಹಸಿರು ಕ್ರಾಂತಿ/
ಉ ತ್ತಿ ಬಿತ್ತಿ ಬೆಳೆಯ ಕೊಡುವೆ ನೀ ನಮ್ಮಪ್ಪ
ಊ ಟ ಮಾಡುವಾಗ ನಾ ನಿನ್ನ ನೆನೆವೆನಪ್ಪ/
ಋ ಷಿಗಳಂತೆ ಸ್ವಾರ್ಥವಿರದ ಬದುಕು ನಿನ್ನದು
ಎ ಷ್ಟು ಕಷ್ಟ...
ಸವದತ್ತಿ - ಸವದತ್ತಿ ಪಟ್ಟಣದ ಸುಪ್ರಸಿದ್ದ ಹಾಗೂ ತನ್ನದೇ ಆದ ಇತಿಹಾಸ ಉಳ್ಳ ರಾಘವೇಂದ್ರ ಮಠದಲ್ಲಿ ಬರುವ ಅಗಸ್ಟ 23.24. ಹಾಗೂ 25.ತಾರೀಖಿನಂದು ಮೂರು ದಿನಗಳಕಾಲ ಗುರು ಸಾರ್ವಭೌಮರ 169ನೇಯ ಆರಾಧನಾ ಮಹೋತ್ಸವವನ್ನು ಆಚರಿಸಲಾಗುವುದು
ಪ್ರತಿದಿನ ಬೆಳಿಗ್ಗೆ 6-30 ಘಂಟೆಗೆ ಸುಪ್ರಭಾತ. ಬೆಳಿಗ್ಗೆ 7 ರಿಂದ ಅಷ್ಟೋತ್ತರ ಪಂಚಾಮೃತ ಅಭಿಷೇಕ. ಕನಕಾಭಿಷೇಕ.ಮಹಾಪೂಜಾ ಪುಷ್ಪಾಲಂಕಾರ. ಮದ್ಯಾಹ್ನ 1-30ಕ್ಕೆ...
ಸಿಂದಗಿ: ಭಾರತ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಅಸಂಖ್ಯಾತ ಹೋರಾಟಗಾರರ ಜೀವನ ಚರಿತ್ರೆಯನ್ನು ಜನಸಾಮಾನ್ಯರಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಹಾಗೂ ಅವರ ಹೋರಾಟದ ಇತಿಹಾಸ ಮುಂದಿನ ಪೀಳಿಗೆಗೆ ಮುಟ್ಟಿಸುವ ನಿಟ್ಟಿನಲ್ಲಿ ತಾಲೂಕಿನ ದೇವರನಾವದಗಿ ಗ್ರಾಮದಲ್ಲಿ ಬ್ರಿಟೀಷರಿಗೆ ಸೆರೆಸಿಕ್ಕ ವೀರ ಹೋರಾಟಗಾರ ವಾಸುದೇವ ಬಲವಂತ ಫಡಕೆಯವರ ಸ್ಮರಣಾರ್ಥ ಹಾಗೂ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ನಿಮಿತ್ತವಾಗಿ ಯುವ...
ಸವದತ್ತಿ: ಗ್ರಾಮೀಣ ಪ್ರದೇಶದಲ್ಲಿ ಬಡವರ ಹಾಗೂ ನಿರ್ಗತಿಕ ಕುಟುಂಬಗಳ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಕನ್ನಡ ಮಾಧ್ಯಮದ ಖಾಸಗಿ ಶಾಲೆಗಳು ಇದೀಗ ಆರ್ಥಿಕವಾಗಿ ಸಂಕಷ್ಠ ಅನುಭವಿಸುತ್ತಿವೆ. ಈ ಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಬೇಕೆಂದು ಸಂಘದ ಅಧ್ಯಕ್ಷ ಜಗದೀಶ ತೋಟಗಿ ಹೇಳಿದರು.
ಸ್ಥಳೀಯ ಪ್ರವಾಸಿ...
ಮೂಡಲಗಿ: ತಾಲೂಕಿನ ಹಳೇಯರಗುದ್ರಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶಿವಶರಣೆ ಹೇಮರಡ್ಡಿ ಮಲ್ಲಮ್ಮಾ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭ ಹಾಗೂ ಶ್ರೀ ಬಿಂದಿಗೆಮ್ಮಾದೇವಿ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಹಳೇಯರಗುದ್ರಿ ಗ್ರಾಮದ ಹೇಮರಡ್ಡಿ ಮಲ್ಲಮ್ಮ ಮತ್ತು ಶ್ರೀ ವೇಮನ್ ಸೇವಾ ಸಮಿತಿ ಆಶ್ರಯದಲ್ಲಿ ಆ.19 ಮತ್ತು 20...
ಮೂಡಲಗಿ: ಸ್ಥಳೀಯ ಮುಖಂಡ ಹಾಗೂ ರಾಜಕೀಯ ಧುರೀಣರಾದ ನಿಂಗಪ್ಪ ಫಿರೋಜಿಯವರನ್ನು ಬೆಳಗಾವಿ ಜಿಲ್ಲಾ ಅಖಿಲ ಭಾರತ ಪಂಚಮಸಾಲಿ ಮಹಾಸಭಾದ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಹುಬ್ಬಳ್ಳಿಯಲ್ಲಿ ಜರುಗಿದ ಕಾರ್ಯಕಾರಿಣಿ ಸಭೆಯಲ್ಲಿ ಕೂಡಲಸಂಗಮದ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರು, ರಾಷ್ಟ್ರೀಯ ಅಧ್ಯಕ್ಷರಾದ ವಿಜಯಾನಂದ ಕಾಶಪ್ಪನವರ ನೇಮಕಗೊಳಿಸಿ ಸಂಘಟನೆಯಲ್ಲಿ ಸಕ್ರಿಯ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಲು ಸೂಚಿಸಿದ್ದಾರೆ.
ಸಿಂದಗಿ: ಪರೀಕ್ಷೆಯಲ್ಲಿ ಸಾಧಿಸಿರುವದು ಸಾಕಷ್ಟಿದ್ದರೂ ಕೂಡ ಮುಂದಿನ ನಿಮ್ಮ ಶೈಕ್ಷಣಿಕ ಜೀವನದಲ್ಲಿ ಸಾಧಿಸಬೇಕಾಗಿರುವದು ಬಹಳಷ್ಟಿದೆ.ಹೀಗಾಗಿ ಉತ್ತರೋತ್ತರವಾಗಿ ನೀವು ಹೆಚ್ಚಿನದನ್ನು ಸಾಧಿಸಿರಿ,ನಾಡಿಗೆ ವಿನೂತನ ರೀತಿಯ ಕೊಡುಗೆ ನಿಮ್ಮಿಂದ ಮೂಡಿಬಂದು ಶೈಕ್ಷಣಿಕ ಕ್ಷೇತ್ರದ ಹೆಮ್ಮರವಾಗಿ ಈ ನಾಡು ರೂಪುಗೊಳ್ಳಲಿ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಅವರು ಹೇಳಿದರು.
ಇತ್ತೀಚೆಗೆ ನಡೆದ ಎಸ್ ಎಸ್ ಎಲ್ ಸಿ...
ಸ್ವಾತಂತ್ರ್ಯ
ಯಾರಿಗಿದೆ?ಎಲ್ಲಿದೆ? ಸ್ವಾತಂತ್ರ್ಯ
ಇರುವುದೆಲ್ಲವೂ ನಮಗೆ ಪಾರತಂತ್ರ್ಯ
ಬದುಕು ಕಟ್ಟಬೇಕು ನಾವು ನಮ್ಮಗಳ
ಮೇಲೆ ಸ್ವಾತಂತ್ರ್ಯದ ವಿಜಯದ ಮೇಲೆ
ಸ್ವಾತಂತ್ರ್ಯವಿರುವುದು ಪೋಲಿಸರ
ಗುಂಡು ಲಾಠಿಗಳಲಿ ವಂಚಕರ ಕೈಗಳಲಿ
ಬಡವನ ಕಣ್ಣೀರು ಒರೆಸದ ಸಾಲದ
ಶೂಲದಲಿ ಹರಿದ ತಿನ್ನುವ ಮೃಗಗಳಲಿ
ರೈತನ ಶರಣಾಗತಿಯ ನೇಣು ಹಗ್ಗದಲಿ
ಬಿಗಿದ ಕುತ್ತಿಗೆಯಲಿ ಸ್ವಾತಂತ್ರ್ಯ ಬಂತು
ನಿತ್ಯ ನಿರಂತರ ಗುಂಡಿಗೆ ಎದೆಯೊಡ್ಡುವ
ವೀರ ಯೋಧರ ಕಫನಿನಲಿ ಬಂತು ಸ್ವಾತಂತ್ರ್ಯ
ತುಂಡುಡುಗೆಯನುಟ್ಟು ಕಂಡ ಕಂಡವರ
ದಾಹಕ್ಕೆ ಆಸರೆಯಾಗಿ ನೀರೆರೆಯುವ
ರಕ್ತ ದೇಹಿಗಳ ಕಾಮುಕರ...
ಕಿನ್ನರಿ ಬ್ರಹ್ಮಯ್ಯ
...........................................
12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...