Monthly Archives: September, 2021
ಸುದ್ದಿಗಳು
ದಿ.೫ ರಂದು ಶಿಕ್ಷಕರ ದಿನ ಆಚರಣೆ
ಮೂಡಲಗಿ: ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಪ್ರಯುಕ್ತ ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಸೆ.5 ರವಿವಾರದಂದು ಸ್ಥಳೀಯ ಕೆ.ಎಚ್ ಸೋನವಾಲಕರ ಕಲ್ಯಾಣ ಮಂಟಪ ಗುಡ್ಲಮಡ್ಡಿ ಈರಣ್ಣ ದೇವಸ್ಥಾನದಲ್ಲಿ ಮುಂಜಾನೆ 11-00 ಗಂಟೆಗೆ ಸರಕಾರ ಹಾಗೂ ಇಲಾಖೆಯ ಮಾರ್ಗದರ್ಶನದಂತೆ ಕೋವಿಡ್-19 ಶಿಷ್ಟಾಚಾರದ ನಿಯಮಾನುಸಾರ ಏರ್ಪಡಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಕಾರ್ಯಕ್ರಮದ ದಿವ್ಯ...
ಲೇಖನ
ಮೂಕ ಪೃಥ್ವಿಗೆ ಮಾತು ಕೊಟ್ಟ ಕಿಶೋರಿ ಗ್ರೇತಾ
ನಿನ್ನೆ ದಿನ ಕೈ ಸೇರಿದ ಖ್ಯಾತ ಲೇಖಕ ಹಾಗೂ ನನ್ನ ಗುರುಗಳಾದ ನಾಗೇಶ ಹೆಗಡೆ ವಿರಚಿತ ಪುಸ್ತಕ “ಮೂಕ ಪೃಥ್ವಿಗೆ ಮಾತು ಕೊಟ್ಟ ಕಿಶೋರಿ ಗ್ರೇತಾ ಥನ್ ಬರ್ಗ”ಗ್ರೇತಾ ಎನ್ನುವ ಶಾಲೆಯ ಹುಡುಗಿಯ ಹೋರಾಟದ ಕುರಿತ ಬರಹಗಳು ಪರಿಣಾಮಕಾರಿ ಪ್ರಭಾವ ಬೀರಿದ ಬಗ್ಗೆ ಒಂದೆರಡು ನನ್ನ ಅನಿಸಿಕೆಗಳು.“ಈಗಿನ ಮಕ್ಕಳಿಗೆ ವಿಲಾಸೀ ಜೀವನ ಅಂದರೆ ಇಷ್ಟ....
ಕವನ
ಕವನ: ಹೊಟ್ಟೆ ಪಾಡು
ಹೊಟ್ಟೆ ಪಾಡು
ಹೊಟ್ಟೆಯ ಹಸಿವನು | ಶಮನವ ಮಾಡಲು
ಚಿಂದಿಯ ಆಯುವ | ಕೆಲಸವ ಹಿಡಿದೆ
ನಿನ್ನನು ನೋಡಿ | ಕಲಿಯಲೆ ಬೇಕು
ಸ್ವಾಭಿಮಾನದಿ | ಬದುಕಲು ಸಾಕು
ಬಾಗಿದ ಬೆನ್ನಿನ | ಮೇಲಿದೆ ಹೊರೆಯು
ಬಾಳ ಬಂಡೆಯಾ | ಬವಣೆಯ ಭಾರವು
ಜೀವನ ಸಾಗಿಸೆ | ದೇಹಕೆ ಶಕ್ತಿಯ
ತುಂಬಲು ಬೇಕಿದೆ | ತುತ್ತು ಅನ್ನವು
ನೆರೆತ ಕೂದಲು | ಸೊರಗಿದ ದೇಹ
ಆದರೂ ದುಡಿದೇ |...
ಸುದ್ದಿಗಳು
ಕಾಂಗ್ರೆಸ್ ಭದ್ರ ಕೋಟೆ ಹುಮನಬಾದ ನಲ್ಲಿ ಬಿಜೆಪಿ ಜನಾಶೀರ್ವಾದ ಯಾತ್ರೆ
ಬೀದರ: ಜಿಲ್ಲೆಯ ಹುಮನಾಬಾದ್ ಪಟ್ಟಣದಲ್ಲಿ ಇಂದು ಬಿಜೆಪಿ ವತಿಯಿಂದ ಬೃಹತ್ ಜನಾಶೀರ್ವಾದ ಯಾತ್ರೆ ನಡೆಯಿತು.ಜನಾಶೀರ್ವಾದ ಯಾತ್ರೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ಬೀದಿ, ವೃತ್ತಗಳು ಬಿಜೆಪಿ ಧ್ವಜ ಹಾಗೂ ಕಟೌಟಗಳಿಂದ ರಾರಾಜಿಸುತ್ತಿದ್ದವು.ಪಟ್ಟಣದ ಪ್ರಮುಖ ರಾಷ್ಟ್ರೀಯ ಹೆದ್ದಾರಿ 65ಕ್ಕೆ ಹೊಂದಿಕೊಂಡ ಚಿದ್ರ ಬೈಪಾಸ ಮತ್ತು ಕೆಇಬಿ ಬೈಪಾಸನಿಂದ ವೀರಭದ್ರೇಶ್ವರ ದೇವಸ್ಥಾನದವರೆಗೆ 200ಕ್ಕೂ ಅಧಿಕ ಕಟೌಟ್, 50ಸ್ವಾಗತ ಕಮಾನು...
ಸುದ್ದಿಗಳು
ವೈದ್ಯ – ಶಾಸಕರ ನಡುವೆ ಮಾತಿನ ಚಕಮಕಿ
ಬೀದರ - ಪ್ರಚಾರದ ಅವಧಿ ಮುಕ್ತಾಯಗೊಂಡಿದ್ದರು ನಗರಸಭೆ ಚುನಾವಣೆ ಪ್ರಚಾರಕ್ಕೆ ಆಗಮಿಸಿದ ಶಾಸಕರಿಗೆ ವೈದ್ಯರೊಬ್ಬರು ಕ್ಲಾಸ್ ತೆಗೆದುಕೊಂಡ ಪರಿಣಾಮ ತಾಳ್ಮೆ ಕಳೆದುಕೊಂಡು ವಾಗ್ವಾದಕ್ಕಿಳಿದ ಶಾಸಕರು.ಪ್ರಚಾರಕ್ಕೆ ಆಗಮಿಸಿದ್ದ ಶಾಸಕ ಶರಣು ಸಲಗಾರ ಅವರೊಂದಿಗೆ ಬಸವಕಲ್ಯಾಣದ ವೈದ್ಯ ಪೃಥ್ವಿರಾಜ್ ಬಿರಾದಾರ ಮಾತಿನ ಚಕಮಕಿಗೆ ನಿಂತರು. ಪ್ರಚಾರದ ಅವಧಿ ಮುಕ್ತಾಯಗೊಂಡಿದ್ದರೂ ಯಾಕೆ ಪ್ರಚಾರಕ್ಕೆ ಬಂದಿದ್ದೀರಿ ಎಂಬ ಮಾತಿಗೆ ತಾಳ್ಮೆ...
ಸುದ್ದಿಗಳು
ಎಲ್ಲರೂ ಬೆಳವಣಿಗೆ ಹೊಂದಿದಂತೆ ತಮ್ಮತನದೊಂದಿಗೆ ಬದುಕುವರು – ವೇದಮೂರ್ತಿ ಕುಮಾರಸ್ವಾಮಿಗಳು ಹಿರೇಮಠ
ಸವದತ್ತಿ: “ಪ್ರತಿ ಮನುಷ್ಯರೂ ವಿಭಿನ್ನ ವ್ಯಕ್ತಿತ್ವದೊಂದಿಗೆ ಜನಿಸುತ್ತಾರೆ. ಯಾರೂ ಯಾರಂತಾಗಲೂ ಸಾಧ್ಯವಿಲ್ಲ. ನಾವು ಅವರನ್ನು ಅನುಕರಿಸಬಹುದಷ್ಟೇ.ಇಲ್ಲಿ ಎಲ್ಲರೂ ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡು ಅದರಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತ ತಮ್ಮ ವ್ಯಕ್ತಿತ್ವವನ್ನು ವಿಭಿನ್ನ ನೆಲೆಯಲ್ಲಿ ಬೆಳೆಯುತ್ತ ಸಂಘಟನೆಯ ಅಧ್ಯಕ್ಷರಾಗಿ ಪ್ರಧಾನ ಕಾರ್ಯದರ್ಶಿಯಾಗಿ, ದೈಹಿಕ ಶಿಕ್ಷಕರಾಗಿ,ಮುಖ್ಯೋಪಾಧ್ಯಾಯರಾಗಿ ವಿಭಿನ್ನ ಹುದ್ದೆಗಳಲ್ಲಿ ಬಡ್ತಿ ಹಾಗೂ ಶಿಕ್ಷಕರ ಪ್ರೀತಿ ವಿಶ್ವಾಸದೊಂದಿಗೆ ಹೊಂದುತ್ತ...
ಸುದ್ದಿಗಳು
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ನೈತಿಕ ಶಿಕ್ಷಣವೇ ಮೂಲಾಧಾರ
If there is a child in your house then it is an opportunity for you become a child again.
ಪೋಷಕರೆಂದರೆ ಪೋಷಣೆ ಮಾಡುವವರು ಎಂದು. ಸಂಸಾರ, ಸಮಾಜ, ಪರಿಸರ, ಗ್ರಾಮ, ರಾಜ್ಯ,ದೇಶ,ವಿಶ್ವದ ಪೋಷಣೆ ಮನುಕುಲದಿಂದ ಆಗುವುದಕ್ಕೆ ಮುಖ್ಯವಾಗಿ ಮಾನವೀಯತೆಯುಳ್ಳ ಶಿಕ್ಷಣದ ಅಗತ್ಯವಿದೆ. ಮಾನವ ಆರನೆ ಅರಿವುಳ್ಳ ವಿಶೇಷ ಪ್ರಾಣಿಯೆನ್ನುವ...
ಸುದ್ದಿಗಳು
ಹೀಗೊಂದು ಹೃದಯಸ್ಪರ್ಶಿ ಕಾರ್ಯಕ್ರಮ
ಸರಕಾರಿ ನೌಕರಿ ಎಂದ ಮೇಲೆ ನೌಕರಿಗೆ ಹಾಜರಾಗುವುದು ವರ್ಗಾವಣೆಗೊಳ್ಳುವುದು ನಿವೃತ್ತಿಯಾಗುವುದು ಹೀಗೆ ವೃತ್ತಿ ಬದುಕಿನಡಿ ಕೊನೆಯ ನಿವೃತ್ತಿ ಪದದವರೆಗೂ ಜರುಗುವ ಪ್ರಕ್ರಿಯೆಯಲ್ಲವೇ.? ನಿವೃತ್ತರಾದಾಗ ಬೀಳ್ಕೊಡುವುದು.ನೌಕರಿಗೆ ಹಾಜರಾಗುವವರನ್ನು ಸೌಹಾರ್ದವಾಗಿ ಸ್ವಾಗತಿಸುವುದು.ವರ್ಗಾವಣೆ ಹೊಂದಿದವರನ್ನು ಬೀಳ್ಕೊಡುವುದು ಇವೆಲ್ಲ ನಡೆಯುತ್ತವೆ. ಇಂತಹ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿಸುವಂತಿದ್ದರೆ ಹೇಗೆ ?ಅಂತಹದೊಂದು ವಿಭಿನ್ನ ಚಟುವಟಿಕೆ ಸವದತ್ತಿ ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದಲ್ಲಿ ಜರುಗಿತು.ಇಲ್ಲಿ ಕ್ಷೇತ್ರ...
ಸುದ್ದಿಗಳು
ಪರಿಸರ ಸ್ನೇಹಿ ಗಣೇಶ ಮೂರ್ತಿ ಸ್ಥಾಪಿಸಲು ಸೂಚನೆ
ಮೂಡಲಗಿ: ಈ ಬಾರಿ ಆಚರಿಸುವ ಗಣೇಶ ಹಬ್ಬವನ್ನು ಕೋವಿಡ್-19 ಮಾರ್ಗಸೂಚಿಯೊಂದಿಗೆ ಸರಳವಾಗಿ ಆಚರಿಸುವಂತೆ ಜಿಲ್ಲಾಧಿಕಾರಿಯವರ ಆದೇಶದನ್ವಯ ಗಣೇಶ ಮೂರ್ತಿ ತಯಾರಕರು ಹಾಗೂ ಮಾರಾಟಗಾರರು ಪಿಓಪಿ ಹಾಗೂ ಬಣ್ಣ ಲೇಪಿತ ಮೂರ್ತಿ ತಯಾರಿಸುವುದು, ಮಾರಾಟ ಮಾಡುವುದನ್ನು ನಿಷೇಧಿಸಿದ್ದಾರೆ. ಅದರ ಬದಲಾಗಿ ಶೇಡಿ ಮಣ್ಣಿನಿಂದ ತಯಾರಿಸಿದ ಹಾಗೂ ನಾಲ್ಕು ಅಡಿ ಎತ್ತರದೊಳಗೆ ಮೂರ್ತಿಗಳನ್ನು ತಯಾರಿಸಿ ಬಣ್ಣ ರಹಿತ...
ಸುದ್ದಿಗಳು
‘ಅನ್ನದಾನವು ಶ್ರೇಷ್ಠ ದಾನವಾಗಿದೆ’ – ಡಿ ಜೆ ಮಹಾತ್
ಮೂಡಲಗಿ: ‘ಅನ್ನ ದಾನವು ಎಲ್ಲ ದಾನಕ್ಕಿಂತ ಶ್ರೇಷ್ಠ ದಾನವಾಗಿದೆ’ ಎಂದು ತಹಶೀಲ್ದಾರ್ ಡಿ.ಜೆ ಮಹಾತ್ ಅವರು ಹೇಳಿದರು.ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲಯನ್ಸ್ ಕ್ಲಬ್ ಆಫ್ ಮೂಡಲಗಿ ಪರಿವಾರದವರು ಏರ್ಪಡಿಸಿದ್ದ 66ನೇ ಪಾಕ್ಷಿಕ ಅನ್ನದಾಸೋಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಸಿದವರಿಗೆ ಅನ್ನವನ್ನು ನೀಡುವುದು ಸಮಾಜದ ಶ್ರೇಷ್ಠ ಮೌಲ್ಯವಾಗಿದೆ ಎಂದರು.ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಉಚಿತ...
Latest News
ಕವನ : ಬೆಳಕಿನ ದೀಪಾವಳಿ
ಬೆಳಕಿನ ದೀಪಾವಳಿ
ಬೆಳಕು ಸರಿದು ನೇಸರನ
ಅಸ್ತದೊಡನೆ
ಜಗಕೆ ಜಗಮಗಿಸುವ
ದೀಪಗಳ ದರ್ಶನ
ಬಾನಂಚಿನಲಿ ಶಬ್ದಗಳ ನಡುವೆ
ಬೆಳಕಿನ ಚಿತ್ತಾರ
ಮೂಡಿಸುವ ಹಬ್ಬ
ಬೆಳಕಿನ ದೀಪಾವಳಿತಮವ ಕಳೆದು
ಜ್ಯೋತಿ ಬೆಳಗುವ
ನಾಡಿನಪವಿತ್ರ ಹಬ್ಬ
ತಳಿರು ತೋರಣ ಕಟ್ಟಿ
ಮನೆಯನು ಸಿಂಗರಿಸಿ
ಹಬ್ಬದಡುಗೆಯ ಸವಿಯುಣ್ಣುವ
ಮನದ ಖುಷಿಯ...